Don't Miss!
- News Toilet Photo Viral: ಕಡಿಮೆ ಖರ್ಚಿನಲ್ಲಿ 'ಲೀಕೆಜ್ ಟ್ಯಾಂಕರ್'ನಿಂದ ಟಾಯ್ಲೆಟ್ ನಿರ್ಮಾಣ: ನೀವೂ ಟ್ರೈ ಮಾಡಿ
- Sports IPL 2024: ಹೈದರಾಬಾದ್-ಡೆಲ್ಲಿ ನಡುವೆ ಮೆಗಾ ಫೈಟ್; ಟಾಸ್, ಆಡುವ 11ರ ಬಳಗದ ವರದಿ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸದಾಶಿವ ಬ್ರಹ್ಮಾವರ್ ನಿಧನಕ್ಕೆ ಕಂಬನಿ ಮಿಡಿದ ನಟ ಜಗ್ಗೇಶ್
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ನಟ ಸದಾಶಿವ ಬ್ರಹ್ಮಾವರ್ ನಿನ್ನೆ ವಿಧಿವಶರಾದರು. ಸದಾಶಿವ ಬ್ರಹ್ಮಾವರ್ ಅವರ ಸಾವಿನ ಸುದ್ದಿ ಕೇಳಿ ನವರಸ ನಾಯಕ ಜಗ್ಗೇಶ್ ಕಂಬನಿ ಮಿಡಿದಿದ್ದಾರೆ.
ಮನೆ ಹಾಗೂ ಮಕ್ಕಳಿಂದ ದೂರಾಗಿ ಸದಾಶಿವ ಬ್ರಹ್ಮಾವರ್ ಸಂಕಷ್ಟದಲ್ಲಿದ್ದಾರೆ ಎಂದು ಕಳೆದ ವರ್ಷ ಸುದ್ದಿಯಾಗಿತ್ತು. ಆಗ ಸದಾಶಿವ ಬ್ರಹ್ಮಾವರ್ ಅವರಿಗೆ ಸಹಾಯ ಹಸ್ತ ಚಾಚಲು ನವರಸ ನಾಯಕ ಜಗ್ಗೇಶ್ ಮುಂದೆ ಬಂದಿದ್ದರು.
ಹಿರಿಯ ಕಲಾವಿದ ಸದಾಶಿವ ಬ್ರಹ್ಮಾವರ್ ವಿಧಿವಶ
ಈಗ ಏಕಾಏಕಿ ಸದಾಶಿವ ಬ್ರಹ್ಮಾವರ್ ಅವರ ಸಾವಿನ ಸುದ್ದಿ ಕೇಳಿ ಜಗ್ಗೇಶ್ ದಿಗ್ಭ್ರಾಂತರಾಗಿದ್ದಾರೆ. ಈ ಬಗ್ಗೆ ಟ್ವಿಟ್ಟರ್ ನಲ್ಲಿ ನಟ ಜಗ್ಗೇಶ್ ತಮ್ಮ ದುಃಖವನ್ನ ಹಂಚಿಕೊಂಡಿದ್ದಾರೆ.
''ನಾನು ಕಂಡ ಅತಿ ಸೌಮ್ಯ ಸ್ವಭಾವದ ವ್ಯಕ್ತಿ ಇವರು. 1988 ರಿಂದ ಇವರ ಜೊತೆಗೆ ನಟಿಸಿರುವೆ. 'ಲಿಫ್ಟ್ ಕೊಡ್ಲಾ' ನನ್ನ ಜೊತೆ ಇವರ ಕಡೆಯ ಚಿತ್ರ.! ಅವರ ಒಳ್ಳೆಯ ಗುಣಕ್ಕೆ ವಯಸ್ಸು ಮಾಗಿದಾಗ ಭುಜ ಕೊಡದ ಮಹನೀಯರಿದ್ದರು ದೌರ್ಭಾಗ್ಯ. ಪರದೆ ಮೇಲಿರುವವರೆಗೂ ಮಾತ್ರ ಕಲಾವಿದರ ಬದುಕು. ಮಿಕ್ಕಂತೆ ನೆನಪು ಮಾತ್ರ ''ಬಣ್ಣ ಮಾಸುವ ಮುನ್ನ ಬದುಕು ಬಲವಾಗಿಟ್ಟುಕೊಳ್ಳಿ ಕಲಾಬಂಧುಗಳೇ. ನಶ್ವರ ಜಗ'' ಎಂದು ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
ನಾನುಕಂಡ ಅತಿ ಸೌಮ್ಯಸ್ವಭಾವದ ವ್ಯೆಕ್ತಿ 1988ರಿಂದ ಇವರ ಜೊತೆ ನಟಿಸಿರುವೆ.ಲಿಫ್ಟ್ ಕೊಡಲಾ ನನ್ನಜೊತೆ ಇವರ ಕಡೆಚಿತ್ರ!ಅವರ ಒಳ್ಳೆಗುಣಕ್ಕೆ ವಯಸ್ಸುಮಾಗಿದಾಗ ಭುಜಕೊಡದ ಮಹನೀಯರಿದ್ದರು ದೌರ್ಭಾಗ್ಯ!ಪರದೆ ಮೇಲಿರುವವರೆಗು ಮಾತ್ರ ಕಲಾವಿದರ ಬದುಕು!ಮಿಕ್ಕಂತೆ ನೆನಪುಮಾತ್ರ"ಬಣ್ಣಮಾಸುವ ಮುನ್ನ ಬದುಕು ಬಲವಾಗಿಟ್ಟುಕೊಳ್ಳಿ ಕಲಾಬಂಧುಗಳೆ.ನಶ್ವರ ಜಗ RIP. https://t.co/gyh4Urvf4H
— ನವರಸನಾಯಕ ಜಗ್ಗೇಶ್ (@Jaggesh2) September 20, 2018
ನಿನ್ನೆ ನಿಧನರಾದ ಸದಾಶಿವ ಬ್ರಹ್ಮಾವರ್ ಅವರ ಅಂತ್ಯಕ್ರಿಯೆ ಇಂದು ಬನಶಂಕರಿಯ ಚಿತಾಗಾರದಲ್ಲಿ ನೆರವೇರಿದೆ.
ಹಿರಿಯ ನಟ ಸದಾಶಿವ ಬ್ರಹ್ಮಾವರ್ ಸ್ಥಿತಿ ಕಂಡು ಮಿಡಿದ ನಟ ಜಗ್ಗೇಶ್
ಡಾ.ರಾಜ್ ಕುಮಾರ್, ಡಾ.ವಿಷ್ಣುವರ್ಧನ್, ಅಂಬರೀಶ್, ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ರವಿಚಂದ್ರನ್ ಸೇರಿದಂತೆ ಕನ್ನಡ ಚಿತ್ರರಂಗದ ಜನಪ್ರಿಯ ನಾಯಕರ ಚಿತ್ರಗಳಲ್ಲಿ ಸದಾಶಿವ ಬ್ರಹ್ಮಾವರ್ ನಟಿಸಿದ್ದಾರೆ. 150 ಕ್ಕೂ ಹೆಚ್ಚು ಚಿತ್ರಗಳಲ್ಲಿ ಹಲವಾರು ಪಾತ್ರಗಳಿಗೆ ಜೀವ ತುಂಬಿದ್ದ ಸದಾಶಿವ ಬ್ರಹ್ಮಾವರ್ ಇಂದು ನೆನಪು ಮಾತ್ರ.