Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಭಾಷೆಗಾಗಿ ಸ್ವಾಭಿಮಾನವಿಲ್ಲದ ಜನ್ಮ ಶವಕ್ಕೆ ಸಮಾನ: ಜಗನ್ ಸರ್ಕಾರದ ವಿರುದ್ಧ ಜಗ್ಗೇಶ್ ಬೇಸರ
Recommended Video
ಕನ್ನಡ ನಾಡು-ನುಡಿ ವಿಚಾರದಲ್ಲಿ ಸದಾ ಮುಂದೆ ನಿಲ್ಲು ನವರಸ ನಾಯಕ ಜಗ್ಗೇಶ್, ಕನ್ನಡ ಶಾಲೆಗಳ ವಿಚಾರದಲ್ಲಿ ಆಂಧ್ರ ಪ್ರದೇಶ ಸರ್ಕಾರ ಕೈಗೊಂಡಿರುವ ನಿರ್ಧಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಂಧ್ರ ಪ್ರದೇಶ ಸರ್ಕಾರ, ಆಂಧ್ರದಲ್ಲಿರುವ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚಲು ತೀರ್ಮಾನಿಸಿದೆಯಂತೆ. ಈ ಕುರಿತು ಶಾಲೆಗಳಿಗೆ ಅಲ್ಲಿನ ಸರ್ಕಾರ ನೋಟೀಸ್ ಕೂಡ ನೀಡಿದೆಯಂತೆ.
'ನಿಮ್ಮ ಪ್ರತಿಭೆಗೆ ಯಾಕಿಲ್ಲ ರಾಜ್ಯ ಪ್ರಶಸ್ತಿ'? ಅಭಿಮಾನಿಗೆ ಜಗ್ಗೇಶ್ ಉತ್ತರಿಸಿದ್ದೇನು?
ಗಡಿಭಾಗದಲ್ಲಿರುವ ಶಾಲೆಗಳು ತೆಲುಗು ಭಾಷೆ ಅಥವಾ ಇಂಗ್ಲಿಷ್ ಮಾಧ್ಯವಾಗಬೇಕೆಂದು ತಿಳಿಸಿದೆಯಂತೆ. ಆಂಧ್ರ ಸರ್ಕಾರದ ಈ ಆದೇಶ ತೆಲುಗು ರಾಜ್ಯಗಳಲ್ಲಿರುವ ಕನ್ನಡಿಗರಿಗೆ ಮತ್ತು ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ಆಂತಕ ಸೃಷ್ಟಿಯಾಗಿದೆ.
ಈ ಸುದ್ದಿ ತಿಳಿದ ಬಳಿಕ ನಟ ಜಗ್ಗೇಶ್ ತಮ್ಮ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿದ್ದು, ''ಇದು ಅನ್ಯರಾಜ್ಯದಲ್ಲಿ ಕನ್ನಡದ ಪರಿಸ್ಥಿತಿ! ನಮ್ಮ ರಾಜ್ಯದಲ್ಲಿ ವಿಶಾಲ ಹೃದಯವಂತೆ! ಎಂಥ ದೌರ್ಭಾಗ್ಯ! ಭಾಷೆಗಾಗಿ ಸ್ವಾಭಿಮಾನವಿಲ್ಲದ ಜನ್ಮ ಶವಕ್ಕೆ ಸಮಾನ! ಕನ್ನಡ ನೆಲದ ಬಂಧುಗಳೆ ನಮ್ಮ ಆಧ್ಯತೆ ಇರಲಿ ಮೊದಲು ನಮ್ಮ ಭಾಷೆಗೆ ಇನ್ನು ಮುಂದಾದರು! "ಕನ್ನಡಕ್ಕೆ ಕೈಯತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ" ಎಂದಿದ್ದಾರೆ.
'ಅನ್ನ ಕಿತ್ತುತಿನ್ನೋ ರಣಹದ್ದು ಬಂದರೂ ನಗುವಿನಲ್ಲಿ ನೋಡುವ ಬಂಗಾರದ ಹೃದಯ': ರಕ್ಷಿತ್ ಬಗ್ಗೆ ಜಗ್ಗೇಶ್ ಮಾತು
ಆಂಧ್ರ ಜೊತೆ ಮಾತುಕತೆ ಮಾಡಿ, ಕನ್ನಡ ಶಾಲೆಗಳನ್ನು ಉಳಿಸಬೇಕಾದ ಒತ್ತಡ ರಾಜ್ಯ ಸರ್ಕಾರದ ಮೇಲಿದೆ. ಆದರೆ, ಜಗನ್ ಮೋಹನ್ ರೆಡ್ಡಿ ಸರ್ಕಾರದ ಈ ನಿರ್ಧಾರ ಬಗ್ಗೆ ಕರ್ನಾಟಕ ರಾಜ್ಯ ಸರ್ಕಾರ ಯಾವ ತೀರ್ಮಾನ ತೆಗೆದುಕೊಳ್ಳುತ್ತೆ ಎಂಬ ಪ್ರಶ್ನೆಯಾಗಿ ಉಳಿದಿದೆ.