Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಶಂಕ್ರಣ್ಣ'ನನ್ನ ಮೊದಲ ಸಲ ಆಶ್ಚರ್ಯದಿಂದ ನೋಡಿದ್ದರಂತೆ ಜಗ್ಗೇಶ್.! ಯಾಕೆ?
Recommended Video
ಕರಾಟೆ ಕಿಂಗ್ ಶಂಕರ್ ನಾಗ್ ಅವರು ಇಂದು (ನವೆಂಬರ್ 9) ಬದುಕಿದ್ದರೇ 63ನೇ ಹುಟ್ಟುಹಬ್ಬ. ಅವರು ನಮ್ಮ ಜೊತೆ ಇಲ್ಲವಾದರೂ, ಅವರ ಅಭಿಮಾನಿಗಳು, ಅವರ ಒಡನಾಡಿಗಳು, ಅವರ ಚಿತ್ರೋಧ್ಯಮದ ಸ್ನೇಹಿತರು ಎಲ್ಲರೂ ಈ ದಿನ ಅವರನ್ನ ನೆನೆಸಿಕೊಳ್ಳುತ್ತಾರೆ.
ಇಂತವರ ಪೈಕಿ ನಟ ಜಗ್ಗೇಶ್ ಕೂಡ ಒಬ್ಬರು. ನವರಸ ನಾಯಕ ಜಗ್ಗೇಶ್ ಅವರು ಶಂಕ್ರಣ್ಣನ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. ಅಷ್ಟೇ ಅಲ್ಲದೇ, ಶಂಕರ್ ನಾಗ್ ಅವರನ್ನ ಜಗ್ಗೇಶ್ ಅವರು ಮೊದಲ ಸಲ ನೋಡಿದ ಅನುಭವವನ್ನ ಕೂಡ ಹಂಚಿಕೊಂಡಿದ್ದಾರೆ.
ಹಾಗಿದ್ರೆ, ಶಂಕರ್ ನಾಗ್ ಅವರನ್ನ ಜಗ್ಗೇಶ್ ಮೊದಲ ನೋಡಿದ್ದು ಎಲ್ಲಿ? ಆಗ ಜಗ್ಗೇಶ್ ಏನು ಮಾಡುತ್ತಿದ್ದರು ಎಂದು ತಿಳಿಯಲು ಮುಂದೆ ಓದಿ.....
1983ರಲ್ಲಿ ಮೊದಲ ಸಲ ನೋಡಿದ್ದರಂತೆ
1983ರಲ್ಲಿ ಶಂಕರ್ ನಾಗ್ ಅವರನ್ನ ಜಗ್ಗೇಶ್ ಅವರು ಮೊದಲ ನೋಡಿದ್ದರಂತೆ. ಕೆ.ವಿ ಜಯರಾಂ ನಿರ್ದೇಶನದ 'ಇಬ್ಬನಿ ಕರಗಿತು' ಚಿತ್ರದ ಚಿತ್ರೀಕರಣ ಸೋಫಿಯಾ ಸ್ಕೂಲ್ ನಲ್ಲಿ ನಡೆಯುತ್ತಿತ್ತಂತೆ. ಅದು ಭಾನುವಾರ ಎಂದು ಕೂಡ ಜಗ್ಗೇಶ್ ನೆನಪಿನಲ್ಲಿಟ್ಟುಕೊಂಡಿದ್ದಾರೆ.
ಆಶ್ಚರ್ಯದಿಂದ ನೋಡಿದ್ದ ಜಗ್ಗೇಶ್
ಆಗ ಅನಂತ್ ನಾಗ್ ಮತ್ತು ಶಂಕರ್ ನಾಗ್ ಇಬ್ಬರು ಫಿಯೇಟ್ ಕಾರ್ ನಲ್ಲಿ ಬಂದಿದ್ದರು. ಈ ಸಹೋದರರನ್ನ ಆಶ್ಚರ್ಯದಿಂದ ನೋಡಿದ್ದರಂತೆ ಜಗ್ಗೇಶ್.
ಜಗ್ಗೇಶ್ ಅಭಿನಯದ ಮೊದಲ ಚಿತ್ರ
ಅಂದ್ಹಾಗೆ, 'ಇಬ್ಬನಿ ಕರಗಿತು' ಅನಂತ್ ನಾಗ್ ನಾಯಕನಾಗಿ ಕಾಣಿಸಿಕೊಂಡಿದ್ದ ಸಿನಿಮಾ. ಜಗ್ಗೇಶ್ ಅವರು ಮೊದಲು ಬಣ್ಣ ಹಚ್ಚಿದ ಸಿನಿಮಾ ಕೂಡ ಇದೇ. ಈ ಚಿತ್ರದಲ್ಲಿ ಜಗ್ಗೇಶ್ ಅವರು ಒಂದು ಸಣ್ಣ ಪಾತ್ರವನ್ನ ನಿರ್ವಹಿಸಿದ್ದರಂತೆ. ಇದು ಇದಾದ ನಂತರ 'ಶ್ವೇತಾ ಗುಲಾಬಿ' ಚಿತ್ರದ ಮೂಲಕ ಅಧಿಕೃತವಾಗಿ ಜಗ್ಗೇಶ್ ಚಿತ್ರರಂಗ ಪ್ರವೇಶ ಮಾಡಿದರಂತೆ.
ಜಗ್ಗೇಶ್ ಅವರು ಮಾಡಿರುವ ಟ್ವೀಟ್
''ಇವರನ್ನ ನಾನು ಮೊದಲು ನೋಡಿದ್ದು ಕೆ.ವಿ.ಜಯರಾಂ ರವರ "ಇಬ್ಬನಿ ಕರಗಿತು" ಸೆಟ್ನಲ್ಲಿ.! ಜೂಲಿ ಲಕ್ಷ್ಮಿಯನ್ನ ಚುಡಾಯಿಸುವ ಸನ್ನಿವೇಶದ ಚಿತ್ರಿಕರಣ..ಸೋಫಿಯಾ ಸ್ಕೂಲ್ ನಲ್ಲಿ. 1983 ಅಂದು ಭಾನುವಾರ. ಅನಂತ್ ಶಂಕರ್ ಇಬ್ಬರು ಫೀಯೇಟ್ ಕಾರಲ್ಲಿ ಬಂದಿದ್ದರು. ಅಣ್ಣತಮ್ಮರ ಆಶ್ಚರ್ಯದಿಂದ ನೋಡಿದೆ.! ಇಂದು ಶಂಕರ್ ನೆನಪುಮಾತ್ರ.! ಹು.ಹ.ಶುಭಾಷಯಗಳು ಕಲಾಬಂಧುಗೆ'' - ಜಗ್ಗೇಶ್, ನಟ