Don't Miss!
- Technology ಇಂದು ಮತ್ತೆ ಮೊಟೊರೊಲಾ ಎಡ್ಜ್ 50 ಪ್ರೊ ಫೋನಿನ ಸ್ಪೆಷಲ್ ಸೇಲ್!..ಡಿಸ್ಕೌಂಟ್ ಎಷ್ಟು?
- News ಐತಿಹಾಸಿಕ ಪ್ರಸಿದ್ಧ ವದ್ದಿಕೆರೆ ಸಿದ್ದಪ್ಪನ ಬಗ್ಗೆ ನಿಮಗೆಷ್ಟು ಗೊತ್ತು?-ಇಲ್ಲಿದೆ ಸಂಪೂರ್ಣ ವಿವರ
- Sports PBKS vs MI IPL 2024: ಮತ್ತೊಮ್ಮೆ ಕೊನೆಯ ಓವರ್ನಲ್ಲಿ ಮುಗ್ಗರಿಸಿದ ಪಂಜಾಬ್ ಕಿಂಗ್ಸ್ ಪ್ಲೇಆಫ್ ಸನ್ನಿವೇಶ ಹೇಗಿದೆ?
- Finance ಕಚ್ಚಾ ತೈಲ ಆಮದು ಗಣನೀಯ ಇಳಿಕೆ, ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಾಗುತ್ತಾ?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಅವನಿಗಾಗಿ ಗೆಲ್ಲಲೆ ಬೇಕು ಒಂದು ದಿನ ಎಂಬ ಛಲ ಇತ್ತು': ಮಗನಿಗೆ ವಿಶ್ ಮಾಡಿದ ಜಗ್ಗೇಶ್
ನವರಸ ನಾಯಕ ಜಗ್ಗೇಶ್ ಅವರ ಹಿರಿಯ ಪುತ್ರ ಗುರುರಾಜ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಮಗನ ಬರ್ತಡೇಗೆ ಜಗ್ಗೇಶ್ ಅವರು ಟ್ವಿಟ್ಟರ್ ಮೂಲಕ ಶುಭಕೋರಿದ್ದಾರೆ.
ಗುರುರಾಜ್ ಅವರ ಸಣ್ಣ ವಯಸ್ಸಿನ ಫೋಟೋ ಹಂಚಿಕೊಂಡಿರುವ ಜಗ್ಗೇಶ್ ''ಅವನಿಗಾಗಿ ಗೆಲ್ಲಲೆ ಬೇಕು ಒಂದುದಿನ ಎಂಬ ಛಲ ಮೂಡಿತು ಅವನು ಬೆಳೆದಂತೆ ನಾನು ಬೆಳೆದೆ'' ಎಂದು ಹಳೆಯ ನೆನಪು ಮೆಲುಕು ಹಾಕಿದ್ದಾರೆ.
ವರ್ಷದ ಮೊದಲ ದಿನ ರಾಯರ ಮಠದಲ್ಲಿ ಕಳೆದ ನಟ ಜಗ್ಗೇಶ್
''5/1/1987...ಬದುಕು ಹೇಗೆ ನಿಭಾಯಿಸುವುದು ಎಂದು ಕೊರಗುತ್ತಿದ್ದ ದಿನಗಳು. ರಾಯರ ಪ್ರಸಾದ ಮಗ ಗುರುರಾಜನ ರೂಪದಲ್ಲಿ ಬಂತು. ಅವನಿಗಾಗಿ ಗೆಲ್ಲಲೆ ಬೇಕು ಒಂದುದಿನ ಎಂಬ ಛಲ ಮೂಡಿತು ಅವನು ಬೆಳೆದಂತೆ ನಾನು ಬೆಳೆದೆ. ಸಾತ್ವಿಕ ಸಂಭಾವಿತ ಮಗ ಗುರುರಾಜ ಹುಟ್ಟಿದದಿನ ಇಂದು. ಮನ ತುಂಬಿ ನನ್ನ ಶುಭ ಹಾರೈಕೆ ನೀವು ಹರಸಿ..ಧನ್ಯವಾದ'' ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
ಗುರುರಾಜ್ ಸಹ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಜಗ್ಗೇಶ್ ನಟನೆಯ 'ಬೇಡ ಕೃಷ್ಣ ರಂಗಿನಾಟ' ಚಿತ್ರದಲ್ಲಿ ನಟಿಸಿದ್ದ ಗುರುರಾಜ್, ಬಳಿಕ ಮೇಕಪ್ ಚಿತ್ರಕ್ಕೆ ಕಥೆ ಬರೆದಿದ್ದರು. ಕೋಮಲ್ ನಟನೆಯ ತಮಾಷೆಗಾಗಿ ಸಿನಿಮಾದಲ್ಲೂ ಒಂದು ಪಾತ್ರ ಮಾಡಿದ್ದರು.
2009ರಲ್ಲಿ ತೆರೆಕಂಡ 'ಗಿಲ್ಲಿ' ಚಿತ್ರದ ಮೂಲಕ ನಾಯಕನಟನಾಗಿ ಸಿನಿ ಇಂಡಸ್ಟ್ರಿ ಪ್ರವೇಶ ಮಾಡಿದ್ದರು. ತಮಿಳಿನ ಹಿಟ್ ಚಿತ್ರ '7ಜಿ ರೈನ್ಬೋ ಕಾಲೋನಿ' ರೀಮೇಕ್ ಇದಾಗಿದ್ದು, ಈ ಚಿತ್ರದಲ್ಲಿ ರಕುಲ್ ಪ್ರೀತ್ ಸಿಂಗ್ ನಾಯಕಿಯಾಗಿದ್ದರು.
ಜಗ್ಗೇಶ್ ಅವರ ಆಫೀಸ್ನಲ್ಲಿದೆ ದಿಗ್ಗಜ ನಟರೊಬ್ಬರ ಫೋಟೋ
ನಂತರ ಗುರು, ಸಂಕ್ರಾಂತಿ, ಪೈಪೋಟಿ, ಮಾಸ್ ಲೀಡರ್ ಹಾಗೂ ವಿಷ್ಣು ಸರ್ಕಲ್ ಚಿತ್ರಗಳಲ್ಲಿ ಗುರುರಾಜ್ ನಟಿಸಿದ್ದಾರೆ. ವಿದೇಶಿ ಯುವತಿಯನ್ನು ಪ್ರೀತಿಸಿ ಮದುವೆಯಾದ ಗುರುರಾಜ್ಗೆ ಅರ್ಜುನ್ ಎಂಬ ಗಂಡು ಮಗು ಇದೆ.