Don't Miss!
- Technology Tecno: ಬಹುನಿರೀಕ್ಷಿತ ಟೆಕ್ನೋ ಪೋವಾ 6 ಪ್ರೊ ಲಾಂಚ್! 12GB RAM.. 6000mAh ಬ್ಯಾಟರಿ.. ಬೆಲೆ ಎಷ್ಟು?
- News ಬಿಜೆಪಿ 400 ಸ್ಥಾನ ಪಡೆಯಲು ಹರಸಾಹಸ ಪಡುತ್ತಿರುವುದ್ಯಾಕೆ.?-ಯತೀಂದ ಸಿದ್ದರಾಮಯ್ಯ ಹೇಳಿದ್ದೇನು?
- Sports CSK vs RCB: ದಾಖಲೆಯ ಪುಟ ಸೇರಿದ ಉದ್ಘಾಟನಾ ಪಂದ್ಯ: 16.8 ಕೋಟಿ ಜನರಿಂದ ವೀಕ್ಷಣೆ
- Finance ಮೃತರ ಖಾತೆಯಲ್ಲಿರುವ ಹಣವನ್ನು ಕುಟುಂಬಸ್ಥರು ಡ್ರಾ ಮಾಡಬಹುದಾ, ಬ್ಯಾಂಕ್ ನಿಯಮಾವಳಿ ಏನು ಹೇಳುತ್ತೆ?
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Lifestyle ಬಾಯಲ್ಲಿ ನೀರು ತರಿಸುವ ಮಾವಿನ ಕಾಯಿ ಚಟ್ನಿ..! 5 ನಿಮಿಷದಲ್ಲಿ ರೆಡಿ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪವರ್ ಸ್ಟಾರ್ ಜೊತೆ ಹ್ಯಾಟ್ರಿಕ್ ಬಾರಿಸಲು ಸಜ್ಜಾದ ತೆಲುಗು ಡ್ಯಾನ್ಸ್ ಮಾಸ್ಟರ್ ಜಾನಿ
ತೆಲುಗಿನಲ್ಲಿ ಜಾನಿ ಮಾಸ್ಟರ್ ಬಹಳ ಬೇಡಿಕೆಯ ನೃತ್ಯ ಸಂಯೋಜಕ. ಜೂ ಎನ್ ಟಿ ಆರ್, ಅಲ್ಲು ಅರ್ಜುನ್, ರಾಮ್ ಚರಣ್ ಅಂತಹ ಟಾಪ್ ನಟರ ಜೊತೆ ಕೆಲಸ ಮಾಡಿದ್ದಾರೆ. ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ಕೊರಿಯೋಗ್ರಫರ್ ಕೂಡ ಹೌದು.
ಕನ್ನಡದಲ್ಲೂ ಪುನೀತ್ ರಾಜ್ ಕುಮಾರ್ ನಟಿಸಿದ್ದ 'ರಾಜಕುಮಾರ' ಚಿತ್ರದಲ್ಲಿ ಹಾಡೊಂದಕ್ಕೆ ನಿರ್ದೇಶಕರಾಗಿದ್ದರು. 'ಅಪ್ಪು ಡ್ಯಾನ್ಸ್....' ಹಾಡಿಗೆ ಜಾನಿ ಮಾಸ್ಟರ್ ಕೊರಿಯೋಗ್ರಫಿ ಮಾಡಿದ್ದರು. ಈ ಹಾಡಿನಲ್ಲಿ ಪುನೀತ್ ಡ್ಯಾನ್ಸ್ ಭರ್ಜರಿ ಆಗಿತ್ತು ಮತ್ತು ಅಭಿಮಾನಿಗಳಿಗೆ ಖುಷಿಯಾಗಿತ್ತು. ಅದಾದ ಬಳಿಕ 'ನಟಸಾರ್ವಭೌಮ' ಸಿನಿಮಾದ 'ಓಪನ್ ದಿ ಬಾಟಲ್.....' ಹಾಡಿನಲ್ಲೂ ಜಾನಿ ಮಾಸ್ಟರ್ ನಿರ್ದೇಶನ ಮಾಡಿದ್ದರು.
ಮತ್ತೆ ಅಪ್ಪು ಸಿನಿಮಾಗಾಗಿ ಬಂದ್ರು ಜಾನಿ ಮಾಸ್ಟರ್
ಇದೀಗ, ಪುನೀತ್ ರಾಜ್ ಕುಮಾರ್ ಜೊತೆ ಮತ್ತೊಮ್ಮೆ ಜಾನಿ ಮಾಸ್ಟರ್ ಕೆಲಸ ಮಾಡ್ತಿದ್ದಾರೆ. ಯುವರತ್ನ ಸಿನಿಮಾದ ಹಾಡೊಂದಕ್ಕೆ ಜಾನಿ ಮಾಸ್ಟರ್ ಡೈರೆಕ್ಟ್ ಮಾಡ್ತಿದ್ದಾರೆ. ಈ ಮೂಲಕ ಹ್ಯಾಟ್ರಿಕ್ ಬಾರಿಸಲು ಸಜ್ಜಾಗುತ್ತಿದ್ದಾರೆ.
ಈ ವಿಷಯವನ್ನು ಖುದ್ದು ನಿರ್ದೇಶಕ ಸಂತೋಷ್ ಆನಂದ್ ರಾಮ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಯುವರತ್ನ ಸಿನಿಮಾ 'ಊರಿಗೊಬ್ಬ ರಾಜ' ಹಾಡಿಗೆ ಜಾನಿ ಮಾಸ್ಟರ್ ನೃತ್ಯ ಸಂಯೋಜನೆ ಮಾಡಲಿದ್ದು, ಈ ಹಾಡಿನ ಮೇಲೆ ಕುತೂಹಲ ಹೆಚ್ಚಿದೆ.
ಮೂರನೇ ಸಲ ಪುನೀತ್ ರಾಜ್ ಕುಮಾರ್ ಅವರ ಜೊತೆ ಕೆಲಸ ಮಾಡುತ್ತಿರುವ ಸಂತಸ ಹಂಚಿಕೊಂಡಿರುವ ಜಾನಿ ಮಾಸ್ಟರ್ ''ಕನ್ನಡದ ಪವರ್ ಸ್ಟಾರ್ ಜೊತೆ ಮತ್ತೆ ಕೆಲಸ ಮಾಡಲು ಖುಷಿಯಾಗ್ತಿದೆ. ಪೂರ್ವ ಅಭ್ಯಾಸ ಮುಗಿದಿದೆ. ಅದ್ಭುತವಾದ ತಯಾರಿ ಆಗಿದೆ. ಶೂಟಿಂಗ್ ಕೂಡ ಆರಂಭವಾಗಿದೆ'' ಎಂದು ಟ್ವೀಟ್ ಮಾಡಿದ್ದಾರೆ.
ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ಪುನೀತ್ ಜೊತೆ, ಡಾಲಿ ಧನಂಜಯ್, ವಸಿಷ್ಠ ಸಿಂಹ, ನಾಯಕಿಯಾಗಿ ಸಯೇಶಾ ನಟಿಸುತ್ತಿದ್ದಾರೆ. ವಿಜಯ್ ಕಿರಗಂದೂರ್ ಈ ಚಿತ್ರ ನಿರ್ಮಿಸುತ್ತಿದ್ದಾರೆ.