Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕರ್ನಾಟಕದಲ್ಲಿ ನಡೆದ ಘಟನೆಗೆ ತಲೆತಗ್ಗಿಸಿದ ಚಿತ್ರಸಾಹಿತಿ ಜಾವೇದ್ ಅಖ್ತರ್
ಜಾವೆದ್ ಅಖ್ತರ್ ಭಾರತದ ಖ್ಯಾತ ಚಿತ್ರ ಸಾಹಿತಿ. ಮೂರು ದಶಕದಿಂದ ಹಿಂದಿ ಸಿನಿಮಾಗಳಿಗೆ ಸಾಹಿತ್ಯ ಒದಗಿಸಿರುವ ಜಾವೇದ್ ಅಖ್ತರ್ ಅಸಂಖ್ಯ-ಅಸಂಖ್ಯ ಎವರ್ಗ್ರೀನ್ ಹಾಡುಗಳನ್ನು ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಆಗುತ್ತಿರುವ ಬದಲಾವಣೆ ಬಗ್ಗೆ ತುಸು ಹೆಚ್ಚೆ ಚಿಂತಿತರಾಗಿರುವ ಜಾವೇದ್ ಅಖ್ತರ್, ಬದಲಾವಣೆಗಳಿಗೆ ಪ್ರತಿಕ್ರಿಯಿಸುತ್ತಾ ಬಂದಿದ್ದಾರೆ. ಪ್ರತಿಕ್ರಿಯೆಗಳಿಗೆ ಸಾಮಾಜಿಕ ಜಾಲತಾಣವನ್ನು ವೇದಿಕೆಯನ್ನಾಗಿ ಬಳಸಿಕೊಳ್ಳುತ್ತಿದ್ದಾರೆ.
ಕರ್ನಾಟಕದಲ್ಲಿ ನಡೆದಿರುವ ಘಟನೆಯೊಂದು ಜಾವೆದ್ ಅಖ್ತರ್ ಅವರ ಗಮನಸೆಳೆದಿದ್ದು, ಕರ್ನಾಟಕದಲ್ಲಿ ನಡೆದಿರುವ ಘಟನೆಯಿಂದ ತಲೆತಗ್ಗಿಸುವಂತಾಗಿದೆ ಎಂದು ಹಿರಿಯ ಜಾವೇದ್ ಅಖ್ತರ್ ಹೇಳಿದ್ದಾರೆ.
ಕ್ರೇನ್ಗಳನ್ನು ಬಳಸಿ ಪ್ರತಿಮೆ ಧ್ವಂಸ
ನಿರ್ಮಿತವಾಗಿದ್ದ ಏಸುಕ್ರಿಸ್ತನ ಪ್ರತಿಮೆಯನ್ನು ಪೊಲೀಸರ ಸಮಕ್ಷಮದಲ್ಲಿ ಕ್ರೇನ್ಗಳು ಬಂದು ಕೆಡವಿ ಕ್ರಿಸ್ತನ ಪ್ರತಿಮೆ ಹೊತ್ತೊಯ್ದ ಘಟನೆ ರಾಜ್ಯದಲ್ಲಿ ನಡೆದಿತ್ತು. ಇದರ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಈ ಘಟನೆಯ ಬಗ್ಗೆ ಜಾವೇದ್ ಅಖ್ತರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
''ನಾನು ದೇವರ ನಂಬುವುದಿಲ್ಲ, ಆದರೆ ಇದು ನಾಚಿಕೆಗೇಡು''
''ನಾನು ದೇವರ ನಂಬದವ ಆದರೆ ಕರ್ನಾಟಕ ಸರ್ಕಾರದ ಆದೇಶದಂತೆ ಏಸು ಕ್ರಿಸ್ತನ ಪ್ರತಿಮೆಯನ್ನು ಕ್ರೇನ್ನಲ್ಲಿ ಉರುಳಿಸಿರುವುದು ಭಾರತೀಯನಾಗಿ ನಾಚಿಕೆಯಿಂದ ತಲೆತಗ್ಗಿಸುವಂತಾಗಿದೆ'' ಎಂದು ಜಾವೇದ್ ಅಖ್ತರ್ ಹೇಳಿದ್ದಾರೆ.
ದೇವನಹಳ್ಳಿಯ ಸಣ್ಣ ಗುಡ್ಡ ಬಳಿ ಏಸು ಪ್ರತಿಮೆ
ಬೆಂಗಳೂರು ಸಮೀಪದ ದೇವನಹಳ್ಳಿಯ ಸಣ್ಣ ಗುಡ್ಡ ಎಂಬಲ್ಲಿ ಏಸು ಕ್ರಿಸ್ತನ ಪ್ರತಿಮೆಯನ್ನು ಇತ್ತೀಚೆಗೆ ಕೆಡವಲಾಯಿತು. ಪೋಲೀಸರ ಸಕ್ಷಮದಲ್ಲಿ ಕೆಲವು ಕ್ರೇನ್ಗಳನ್ನು ಕರೆಸಿ ಕ್ರಿಸ್ತನ ಪ್ರತಿಮೆಯನ್ನು, ಶಿಲುಬೆಗಳನ್ನು ಹೊಡೆದು ಉರುಳಿಸಲಾಯಿತು.
ವಿಶ್ವ ಹಿಂದೂ ಪರಿಷತ್ ಒತ್ತಾಯ
ದೊಡ್ಡಸಾಗರಹಳ್ಳಿ ಬಳಿಯ ಸಣ್ಣ ಗುಡ್ಡದ ಮೇಲೆ ನಿರ್ಮಿಸಲಾಗಿರುವ ಏಸು ಪ್ರತಿಮೆಯನ್ನು ತೆರವು ಮಾಡಬೇಕೆಂದು ವಿಶ್ವಹಿಂದೂ ಪರಿಷತ್ ಸದಸ್ಯರು ಒತ್ತಾಯಿಸಿದ್ದರು. ಅಂತೆಯೇ ಜಿಲ್ಲಾಡಳಿತ ಸಹ ತೆರವಿಗೆ ಸೂಚನೆ ನೀಡಿತ್ತು. ಹಾಗಾಗಿ ಪ್ರತಿಮೆಯನ್ನು ಕೆಡವಲಾಗಿದೆ.