ಜಯಲಲಿತಾ ವಿಧಿವಶ: ರಜನಿಕಾಂತ್, ಅಮಿತಾಬ್ ಬಚ್ಚನ್ ಸಂತಾಪ
ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ನಿಧನಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಸಂತಾಪ.
ಕಳೆದ ಎರಡೂವರೆ ತಿಂಗಳಿಂದ ಅನಾರೋಗ್ಯದಿಂದ ಬಳುತ್ತಿದ್ದ ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ ನಿನ್ನೆ (ಡಿಸೆಂಬರ್ 5) ರಾತ್ರಿ ಕೊನೆಯುಸಿರೆಳೆದಿದ್ದಾರೆ. ಭಾನುವಾರ (ಡಿಸೆಂಬರ್ 4) ಸಂಜೆ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜಯಲಲಿತಾ ಅವರಿಗೆ ಹೃದಯ ಸ್ತಂಭನವಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಜಯಲಲಿತಾ ವಿಧಿವಶರಾಗಿದ್ದಾರೆ.[ಜನರ ಪ್ರಾರ್ಥನೆ ಫಲಿಸಲಿಲ್ಲ, 'ಅಮ್ಮ' ಜಯಲಲಿತಾ ಇನ್ನಿಲ್ಲ]

ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ನಿಧನಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಸಂತಾಪ ಸೂಚಿಸಿದ್ದಾರೆ. ಟ್ವಿಟ್ಟರ್ ಮೂಲಕ ಬೇಸರ ವ್ಯಕ್ತಪಡಿಸಿರುವ ರಜನಿ, ತಮಿಳುನಾಡು ದಿಟ್ಟ ಮಹಿಳೆಯನ್ನ ಕಳೆದುಕೊಂಡಿದೆ. ಇದು ಕೇವಲ ತಮಿಳುನಾಡಿಗೆ ಮಾತ್ರವಲ್ಲ, ಇಡೀ ದೇಶಕ್ಕೆ ತುಂಬಲಾರದ ನಷ್ಟ ಎಂದು ಹೇಳಿದ್ದಾರೆ.['ಅಮ್ಮ' ಜಯಲಲಿತಾ, ಕರ್ನಾಟಕ ಮತ್ತು ಕನ್ನಡ ಚಿತ್ರರಂಗ ]

ರಜನಿಕಾಂತ್ ಟ್ವೀಟ್
''ಕೇವಲ ತಮಿಳುನಾಡು ಮಾತ್ರವಲ್ಲ, ಭಾರತ ದೇಶವೇ ಒಬ್ಬ ಕೆಚ್ಚೆದೆಯ ಮಹಿಳೆಯನ್ನ ಕಳೆದುಕೊಂಡಿದೆ. ನಾನು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ, ಜಯಲಲಿತಾ ಅವರ ಆತ್ಮಕ್ಕೆ ಶಾಂತಿ ಸಿಗಲಿ''- ರಜನಿಕಾಂತ್, ನಟ

ಅಮಿತಾಬ್ ಬಚ್ಚನ್ ಸಂತಾಪ
''ಜಯಲಲಿತಾ ಅವರ ಸಾವಿನ ವಿಚಾರದಿಂದ ತುಂಬಾ ದುಃಖವಾಗಿದೆ. ಪ್ರಬಲ ಮಹಿಳೆಯಾಗಿದ್ದರು, ''ಭಾರತೀಯ ಚಿತ್ರರಂಗದ 100 ವರ್ಷದ ಸಂಭ್ರಮವನ್ನ ಆಚರಿಸಿದ ಏಕೈಕ ಮುಖ್ಯಮಂತ್ರಿ ಜಯಲಲಿತಾ ಅವರು. ಎಲ್ಲ ರಾಜ್ಯಗಳಲ್ಲೂ ಅತ್ಯಂತ ಪ್ರಶಂಸೆ ಪಡೆದುಕೊಂಡಿದ್ದರು''- ಅಮಿತಾಬ್ ಬಚ್ಚನ್, ನಟ


Click it and Unblock the Notifications











