Don't Miss!
- Lifestyle ಬಾಯಿ ರುಚಿಗೆ ಗರಿ ಗರಿ ನಿಪ್ಪಟ್ಟು..! ಮನೆಯಲ್ಲೇ ಮಾಡಿ ಟೆಸ್ಟಿ ತಿಂಡಿ
- Automobiles Kia: ಬ್ರೇಕ್ ಇಲ್ಲದ ಟ್ರಕ್ನಂತೆ ಮುನ್ನುಗ್ಗುತ್ತಿದೆ ಕಿಯಾ: ಈಗ ಸಣ್ಣ ಪಟ್ಟಣಗಳಲ್ಲೂ ಸಿಗಲಿದೆ!
- Sports RCB vs KKR: ಯಶ್ ಮೇಲೆ 'ದಯೆ' ತೋರುತ್ತಾರಾ ರಿಂಕು ಸಿಂಗ್?; ಜಿದ್ದು ತೀರಿಸಿಕೊಳ್ತಾರಾ ಆರ್ಸಿಬಿ ವೇಗಿ?
- Technology ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಡೀಪ್ಫೇಕ್ ದೊಡ್ಡ ಕಳವಳಕಾರಿ ಎಂದ ಮೋದಿ
- News ಚಿತ್ರದುರ್ಗದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ: ಅಭ್ಯರ್ಥಿ ಬದಲಿಸದಿದ್ದರೆ ಪಕ್ಷೇತರ ಸ್ಪರ್ಧೆ, ಏ.3ಕ್ಕೆ ನಾಮಪತ್ರ ಸಲ್ಲಿಕೆ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜಯಮಾಲಾ ಮಗಳು ಸಿನಿಮಾದಿಂದ ದೂರವಿದ್ದಿದ್ದು ಯಾಕೆ
ಜಯಮಾಲಾ ಮಗಳು ಸೌಂದರ್ಯ ಗಾಡ್ ಫಾದರ್ ಚಿತ್ರದ ಮೂಲಕ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾಳೆ. ಇದೇ ಶುಕ್ರವಾರ (ಜು 27) ಉಪೇಂದ್ರ ತ್ರಿಪಾತ್ರದಲ್ಲಿ ನಟಿಸುತ್ತಿರುವ ತಮಿಳು ರಿಮೇಕ್ ಚಿತ್ರವಾಗಿರುವ ಗಾಡ್ ಫಾದರ್ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಹಾಗೆ ನೋಡಿದರೆ ಜಯಮಾಲಾ ಮಗಳ ಬೆಳ್ಳಿತೆರೆ ಪ್ರವೇಶ ಈಗಲ್ಲ. ತನ್ನ ಮಗಳ ಸಿನಿಮಾ ಎಂಟ್ರಿ ಬಗ್ಗೆ ಮಾತನಾಡುತ್ತಾ ಗಿರಿಕನ್ಯೆ ಹೇಳುವುದಿಷ್ಟು, ಬಹಳ ಹಿಂದೆಯೇ ನನ್ನ ಮಗಳು ಸಿನಿಮಾಗೆ ಪ್ರವೇಶವಾಗಬೇಕಿತ್ತು.
ಅವಳಿಗೆ ಹದಿನಾರು ವರ್ಷವಾಗಿದ್ದಾಗಲೇ ಚಿತ್ರರಂಗದ ಅನೇಕರು ಅವಳನ್ನ ನಾಯಕಿಯಾಗಿ ಹಾಕಿಕೊಂಡು ಸಿನಿಮಾ ಮಾಡಲು ಮುಂದೆ ಬಂದಿದ್ದರು. ಆದರೆ ನಾನೇ ಆರು ವರ್ಷಗಳಿಂದಲೂ ಸುಳ್ಳು ಹೇಳಿಕೊಂಡು ಬಂದೆ.
ಅವಳ ಓದಿಗೆ ತೊಂದರೆಯಾಗುತ್ತದೆ ಅಂತಲೋ ಅವಳಿಗೆ ನಟನೆ ಬಗ್ಗೆ ಆಸಕ್ತಿ ಇಲ್ಲ ಎಂತಲೋ ಒಂದಲ್ಲ ಒಂದು ಸಬೂಬು ಹೇಳಿಕೊಂಡು ಬಂದೆ. ಆದರೆ ಆಮೇಲೆ ಆಮೇಲೆ ಅದು ಸಾಧ್ಯವಾಗಲೇ ಇಲ್ಲ.
ಈಗ ಮಗಳ ರಂಗಪ್ರವೇಶ ಗಾಡ್ ಫಾದರ್ ಮೂಲಕ ನೆರವೇರಿದೆ. ಚಿತ್ರರಂಗದಲ್ಲಿ ಈಗ ಸಾಕಷ್ಟು ಬದಲಾವಣೆಯಾಗಿದೆ. ಕಲಾವಿದರಿಗೆ ಸಾಕಷ್ಟು ಗೌರವ ಮರ್ಯಾದೆ ದೊರಕುತ್ತಿದೆ. ನನ್ನ ಮಗಳೂ ಈಗ ತನಗೆ ಏನು ಬೇಕೆನಿಸುತ್ತದೋ ಅದನ್ನು ಮಾಡುವಷ್ಟು ಪ್ರಬುದ್ದಳಾಗಿದ್ದಾಳೆ. ಹಾಗಾಗಿ ಅವಳ ಮೇಲೆ ಇನ್ನು ನಿರ್ಬಂಧ ಹೇರುವುದು ಸರಿಯಲ್ಲ ಅಂತ ನಾನೇ ನಿರ್ಧರಿಸಿದೆ.
ಅವಳು ಐಎಎಸ್ ಅಧಿಕಾರಿಣಿಯಾಗಬೇಕೆಂದು ನನ್ನ ಕನಸಾಗಿತ್ತು. ಆದರೆ ಅವಳ ಆಯ್ಕೆ ನಟನೆಯಾಗಿತ್ತು. ನಾನದಕ್ಕೆ ಅಡ್ಡಿ ಮಾಡಲಿಲ್ಲ. ಈಗ ಗಾಡ್ ಫಾದರ್ ನೋಡಿದ ಪ್ರೇಕ್ಷಕ ಅವಳ ಭವಿಷ್ಯ ನಿರ್ಧರಿಸಲಿದ್ದಾಳೆ.
ಹಾಗಂತ ಆಕೆ ನಟಿಯಾದ ಬಗ್ಗೆ ನನಗೇನೂ ಬೇಸರವಿಲ್ಲ. ಎಷ್ಟೇ ಆದರೂ ನನ್ನ ಮಗಳಲ್ಲವೇ. ನನ್ನನ್ನ ದಶಕಗಳ ಕಾಲ ಪೊರೆದ, ಹಣ, ಹೆಸರು ಜನಪ್ರಿಯತೆ ಆರಾಧನೆ ಸಿಕ್ಕುವಂತೆ ನೋಡ್ಕೊಂಡ ಕ್ಷೇತ್ರವಿದು. ನನಗೂ ಮಗಳ ಆಯ್ಕೆಯ ಬಗ್ಗೆ ನಿಧಾನವಾಗಿ ಪ್ರೀತಿ ಮೊಳೆಯುತ್ತಿದೆ ಎನ್ನುತ್ತಾರೆ ಜಯಮಾಲಾ.
ಬಣ್ಣದಲೋಕಕ್ಕೆ ಪಾದಾರ್ಪಣೆ ಮಾಡುತ್ತಿರುವ ಸೌಂದರ್ಯಾಗೆ ಯಶಸ್ಸು ಸಿಗಲಿ, ಶಬರಿಮಲೆ ಅಯ್ಯಪ್ಪನ ಶ್ರೀರಕ್ಷೆ ಇರಲಿ ಎನ್ನುವುದು ನಮ್ಮೆಲ್ಲರ ಆಶಯ (ಒನ್ ಇಂಡಿಯಾ ಕನ್ನಡ)