Don't Miss!
- News ಹೈಕಮಾಂಡ್, ವಿಜಯೇಂದ್ರ ಕರೆ; ಆಫರ್ ಒಪ್ಪದ ಡಿವಿಎಸ್!
- Sports ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ನಡೆಯುವುದು ಯಾವಾಗ? ಎಲ್ಲಿ ನಡೆಯಲಿದೆ ಈ ಬಾರಿಯ ಸರಣಿ
- Technology Airtel & Noise: ಇನ್ಮುಂದೆ ಏರ್ಟೆಲ್ ಪೇಮೆಂಟ್ ಬ್ಯಾಂಕ್ ಸ್ಮಾರ್ಟ್ವಾಚ್ನದ್ದೇ ಹವಾ! ಟ್ಯಾಪ್-ಟು-ಪೇ ಫೀಚರ್ಸ್..
- Finance ಬಾಬಾ ರಾಮ್ದೇವ್ಗೆ ಖುದ್ದು ಹಾಜರಾಗುವಂತೆ ಖಡಕ್ ಸೂಚನೆ ನೀಡಿದ ಸುಪ್ರೀಂ ಕೋರ್ಟ್
- Lifestyle ಈರುಳ್ಳಿ ಹಾಕದೆ 3 ಪದಾರ್ಥ ಹಾಕಿ 5 ನಿಮಿಷದಲ್ಲಿ ಚಟ್ನಿ ಮಾಡಬಹುದು.! ಇಲ್ಲಿದೆ ರೆಸಿಪಿ
- Automobiles ಭರ್ಜರಿ ಮೈಲೇಜ್, ಬಹುಬೇಡಿಕೆಯ ಮಾರುತಿ ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
2 ವರ್ಷದ ನಂತರ ದರ್ಶನ್ ಸಿನಿಮಾಗೆ ಹಾಡು ಬರೆದ ಜಯಂತ್ ಕಾಯ್ಕಿಣಿ
Recommended Video
ಜಯಂತ್ ಕಾಯ್ಕಿಣಿ ಕನ್ನಡದ ಅನೇಕ ಸ್ಟಾರ್ ನಟರಿಗೆ ಒಳ್ಳೆ ಒಳ್ಳೆಯ ಹಾಡುಗಳನ್ನು ನೀಡಿದ್ದಾರೆ. ಈ ಹಿಂದೆ ದರ್ಶನ್ ಸಿನಿಮಾಗೆ ಸಹ ಹಾಡು ಬರೆದಿದ್ದರು. ಆದರೆ, ಕಳೆದ ಎರಡು ವರ್ಷಗಳಿಂದ ಈ ಕಾಂಬಿನೇಶನ್ ನಲ್ಲಿ ಯಾವ ಹಾಡು ಬಂದಿರಲಿಲ್ಲ.
'ತಾರಕ್' ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದರು. ಈ ಸಿನಿಮಾದ ಎರಡು ಹಾಡುಗಳನ್ನು ಜಯಂತ್ ಕಾಯ್ಕಿಣಿ ಬರೆದಿದ್ದರು. 'ಬಿರುಗಾಳಿಯೊಂದಿಗೆ...' ಹಾಗೂ 'ಮಾತಾಡು ನೀ..' ಹಾಡುಗಳಲ್ಲಿ ಜಯಂತ್ ಕಾಯ್ಕಿಣಿ ಸಾಹಿತ್ಯ ಇತ್ತು. ಆ ಚಿತ್ರದ ನಂತರ ದರ್ಶನ್ ಸಿನಿಮಾಗೆ ಕಾಯ್ಕಿಣಿ ಹಾಡು ಬರೆದಿಲ್ಲ.
'ಮದಕರಿ'ಗೆ ನಾಯಕಿ ಯಾರು?: ಅತಿ ಹೆಚ್ಚು ಜನ ಹೇಳಿದ್ದು ಈಕೆಯ ಹೆಸರು
'ಕುರುಕ್ಷೇತ್ರ'ದ ಎಲ್ಲ ಹಾಡುಗಳನ್ನು ವಿ ನಾಗೇಂದ್ರ ಪ್ರಸಾದ್ ಬರೆದರು. 'ಯಜಮಾನ' ಹಾಡುಗಳಿಗೆ ಚೇತನ್ ಕುಮಾರ್, ಕವಿರಾಜ್, ಯೋಗರಾಜ್ ಭಟ್, ಸಂತೋಷ್ ಆನಂದ್ ರಾಮ್ ಪದ ಜೋಡಿಸಿದರು. ಈ ಎರಡು ಸಿನಿಮಾಗಳಲ್ಲಿ ಕಾಯ್ಕಿಣಿ ಸಾಹಿತ್ಯ ಇರಲಿಲ್ಲ.
ಇದೀಗ 'ಒಡೆಯ' ಸಿನಿಮಾ ಒಂದು ಹಾಡನ್ನು ಜಯಂತ್ ಕಾಯ್ಕಿಣಿ ಬರೆದಿದ್ದಾರೆ. 'ಕಾಣೆಯಾಗಿರುವ ನಾನು..' ಹಾಡು ಜಯಂತ್ ಕಾಯ್ಕಿಣಿ ನೀಡಿದ್ದಾರೆ. ಈ ಹಾಡು ನವೆಂಬರ್ 25ಕ್ಕೆ ಬೆಳಗ್ಗೆ 11 ಗಂಟೆಗೆ ಬಿಡುಗಡೆ ಆಗಲಿದೆ. ಸೋನು ನಿಗಮ್ ಹಾಗೂ ಅನುರಾಧ ಭಟ್ ಹಾಡಿಗೆ ಧ್ವನಿಯಾಗಿದ್ದಾರೆ. ಅರ್ಜುನ್ ಜನ್ಯ 'ಒಡೆಯ' ಸಿನಿಮಾದ ಸಂಗೀತ ನಿರ್ದೇಶಕ.
ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಶಿವಣ್ಣ ಮತ್ತು ದರ್ಶನ್: ಸ್ಟಾರ್ ನಟರು ಹೇಳಿದ್ದೇನು?
'ಒಡೆಯ' ಎಂ ಡಿ ಶ್ರೀಧರ್ ನಿರ್ದೇಶನದ ಸಿನಿಮಾ. ಸನಾ ತಿಮಯ್ಯ ಸಿನಿಮಾದ ನಾಯಕಿ. ಸಂದೇಶ್ ಪ್ರೊಡಕ್ಷನ್ಸ್ ನಲ್ಲಿ ಸಿನಿಮಾ ನಿರ್ಮಾಣ ಆಗಿದೆ.