Don't Miss!
- Automobiles ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- Lifestyle ಹನುಮಂತನ ಪವಾಡ: ಈ ದೇವಾಲಯದಲ್ಲಿ ಹನುಮಾನ್ ಮೂರ್ತಿ ವರ್ಷದಿಂದ ವರ್ಷಕ್ಕೆ ಎತ್ತರ ಬೆಳೆಯುತ್ತಿದೆ!
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿ; ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ: ಸಿದ್ದರಾಮಯ್ಯ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Finance Lok Sabha Election 2024: ಮತದಾನ ಮಾಡಿ ಹೋಟೆಲ್ಗಳಲ್ಲಿ ಫ್ರೀಯಾಗಿ, ರಿಯಾಯಿತಿಯಲ್ಲಿ ಟಿಫನ್ ತಿನ್ನಿ!
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಡಿಯೋ: ಕೊರೊನಾ ಬಗ್ಗೆ ಜಯಂತ್ ಕಾಯ್ಕಿಣಿ ಹಾಡು, ಬಾಲಸುಬ್ರಹ್ಮಣ್ಯಂ ಧ್ವನಿಯಲ್ಲಿ
ಎಲ್ಲೆಡೆ ಕೊರೊನಾದ್ದೆ ಮಾತು, ಸಾಮಾಜಿಕ ಜಾಲತಾಣಗಳಂತೂ ಕೊರೊನಾ ಸುದ್ದಿಗಳಿಂದ, ಜೋಕ್ಗಳಿಂದ, ಮೀಮ್ಗಳಿಂದ ತುಂಬಿ ಹೋಗಿವೆ. ಕವಿಗಳು ಸಹ ಕೊರೊನಾ ಕುರಿತಾಗಿಯೇ ಕವನ ರಚಿಸುತ್ತಿದ್ದಾರೆ.
ಕವಿ, ಸಿನಿಮಾ ಗೀತ ರಚನೆಕಾರ ಜಯಂತ್ ಕಾಯ್ಕಿಣಿ ಅವರೂ ಸಹ ಕೊರೊನಾ ಕುರಿತಾಗಿ ಸುಂದರವಾದ ಹಾಡೊಂದನ್ನು ಬರೆದಿದ್ದಾರೆ.
ಜಯಂತ್ ಕಾಯ್ಕಿಣಿ ಅವರು ಬರೆದಿರುವ ಗೀತೆಗೆ ಖ್ಯಾತ ಗಾಯಕ ಬಾಲಸುಬ್ರಹ್ಮಣ್ಯಂ ಅವರು ರಾಗ ಸಂಯೋಜನೆ ಮಾಡಿ, ತಾವೇ ಹಾಡಿದ್ದಾರೆ.
ಬಾಲಸುಬ್ರಹ್ಮಣ್ಯಂ ಅವರು ಜಯಂತ್ ಕಾಯ್ಕಿಣಿ ಅವರು ಬರೆದಿರುವ ಗೀತೆಯನ್ನು ಹಾಡಿರುವ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸುಂದರವಾದ ಹಾಡು ಎರಡೇ ಗಂಟೆಯಲ್ಲಿ 1000 ಶೇರ್ ಆಗಿದೆ ಆಗಿದೆ.
''ಕಾಣದಂತೆ ಆಕ್ರಮಿಸಿದೆ ವೈರಿ ಕೊರೊನಾ''
''ಕಾಣದಂತೆ ಆಕ್ರಮಿಸಿದೆ ವೈರಿ ಕೊರೊನಾ, ಅದಕೆ ನಾವೇ ಈಗ ದಾರಿ ಆಗದಿರೋಣ'' ಎಂದು ಪ್ರಾರಂಭವಾಗುವ ಹಾಡಿನಲ್ಲಿ ಕಾಯ್ಕಿಣಿ ಅವರು 'ಕಾಲಬುಡಕೆ ಮಾರಿ ಬರುವ ವರೆಗೆ ಕಾಯದಿರೋಣ'' ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.
ಹಾಗಿದ್ದೆವು, ಈಗ ಹೀಗಾಗಿದ್ದೇವೆ ಎಂದ ಕಾಯ್ಕಿಣಿ
ಹಾಡಿನಲ್ಲಿ, ಕೊರೊನಾ ದ ಮುಂಚಿನ ದಿನಗಳನ್ನು ಪ್ರಸ್ತುತ ದಿನಗಳಲ್ಲಿ ಮನುಷ್ಯನ ವರ್ತನೆಗಳಲ್ಲಿ ಆದ ವ್ಯತ್ಯಾಸವನ್ನು ಉಲ್ಲೇಖಿಸಿರುವ ಕಾಯ್ಕಿಣಿ, ಅಂದು ಹಾಗಿದ್ದೆವು, ಈಗ ಹೀಗಾಗಿದ್ದೇವೆ ಎಂದು ಬೇರ್ಪಡಿಸಿ ತೋರಿಸಿದ್ದಾರೆ.
ಬೀದಿ ಬದಿ ವ್ಯಾಪಾರಿ, ಸೂರಿಲ್ಲದವರ ಬಗ್ಗೆ ಕಾಳಜಿ
ಕೊರೊನಾ ಪರಿಣಾಮ ಎದುರಿಸುತ್ತಿರುವವರ ಬಗ್ಗೆಯೂ ಕಾಯ್ಕಿಣಿ ಕವನದಲ್ಲಿ ಮರುಕಪಟ್ಟಿದ್ದು, 'ಬೀದಿ ವ್ಯಾಪಾರಿ, ಮನೆಯೇ ಇರದ ಕೂಲಿ ಬಳಗ ಎಲ್ಲಿ ಹೋದರೋ, ಅವರಿಗಾಗಿ ಬುತ್ತಿಯನ್ನು ಮೀಸಲಿಡೋಣ'' ಎಂದು ಕಾಳಜಿ ವ್ಯಕ್ತಪಡಿಸಿದ್ದಾರೆ.
ನಾವೇ ತಂದುಕೊಂಡ ಚಂಡಮಾರುತ ಎಂದ ಕಾಯ್ಕಿಣಿ
'ಭೂಮಿ, ಬಾನು, ನೀರು, ಕಾಡು ಧ್ವಂಸ ಮಾಡುತಾ, ನಮಗೆ ನಾವೇ ತಂದುಕೊಂಡೆವು ಚಂಡಮಾರುತ' ಎಂದು ಮಾನವನ ವಿನಾಶಕಾರಿ ಬುದ್ಧಿಯಿಂದಲೇ ಕೊರೊನಾದಂತಹಾ ಮಹಾ ಮಾರಿ ಬಂದೊದಗಿಗೆ ಎಂದು ಕಾಯ್ಕಿಣಿ ಕವನದಲ್ಲಿ ಹೇಳಿದ್ದಾರೆ.