Don't Miss!
- News ಪೂಜೆ ಮಾಡಿದ ಈ ಲಿಂಬೆಹಣ್ಣು ಲಕ್ಷಕ್ಕೆ ಹರಾಜ್! ಶಾಕ್ ಆಡ್ಬೇಡಿ ಇದು ನಿಜ...
- Sports IPL 2024: ಆರ್ಸಿಬಿ vs ಕೆಕೆಆರ್ ಪಂದ್ಯಕ್ಕೂ ಮುನ್ನ ಗಂಭೀರ್ನತ್ತ ಐಸ್-ಕೋಲ್ಡ್ ಲುಕ್ ನೀಡಿದ ಕೊಹ್ಲಿ
- Automobiles ಓಲಾ ಎಸ್ 1 ಪ್ರೋ VS ಏಥರ್ 450X: ಮದಗಜಗಳ ಹಣಾಹಣಿಯಲ್ಲಿ ಯಾರು ಬೆಸ್ಟ್?
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Lifestyle ಬಾಯಿ ರುಚಿಗೆ ಗರಿ ಗರಿ ನಿಪ್ಪಟ್ಟು..! ಮನೆಯಲ್ಲೇ ಮಾಡಿ ಟೆಸ್ಟಿ ತಿಂಡಿ
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಡಿಯೋ: ಕೊರೊನಾ ಬಗ್ಗೆ ಜಯಂತ್ ಕಾಯ್ಕಿಣಿ ಹಾಡು, ಬಾಲಸುಬ್ರಹ್ಮಣ್ಯಂ ಧ್ವನಿಯಲ್ಲಿ
ಎಲ್ಲೆಡೆ ಕೊರೊನಾದ್ದೆ ಮಾತು, ಸಾಮಾಜಿಕ ಜಾಲತಾಣಗಳಂತೂ ಕೊರೊನಾ ಸುದ್ದಿಗಳಿಂದ, ಜೋಕ್ಗಳಿಂದ, ಮೀಮ್ಗಳಿಂದ ತುಂಬಿ ಹೋಗಿವೆ. ಕವಿಗಳು ಸಹ ಕೊರೊನಾ ಕುರಿತಾಗಿಯೇ ಕವನ ರಚಿಸುತ್ತಿದ್ದಾರೆ.
ಕವಿ, ಸಿನಿಮಾ ಗೀತ ರಚನೆಕಾರ ಜಯಂತ್ ಕಾಯ್ಕಿಣಿ ಅವರೂ ಸಹ ಕೊರೊನಾ ಕುರಿತಾಗಿ ಸುಂದರವಾದ ಹಾಡೊಂದನ್ನು ಬರೆದಿದ್ದಾರೆ.
ಜಯಂತ್ ಕಾಯ್ಕಿಣಿ ಅವರು ಬರೆದಿರುವ ಗೀತೆಗೆ ಖ್ಯಾತ ಗಾಯಕ ಬಾಲಸುಬ್ರಹ್ಮಣ್ಯಂ ಅವರು ರಾಗ ಸಂಯೋಜನೆ ಮಾಡಿ, ತಾವೇ ಹಾಡಿದ್ದಾರೆ.
ಬಾಲಸುಬ್ರಹ್ಮಣ್ಯಂ ಅವರು ಜಯಂತ್ ಕಾಯ್ಕಿಣಿ ಅವರು ಬರೆದಿರುವ ಗೀತೆಯನ್ನು ಹಾಡಿರುವ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸುಂದರವಾದ ಹಾಡು ಎರಡೇ ಗಂಟೆಯಲ್ಲಿ 1000 ಶೇರ್ ಆಗಿದೆ ಆಗಿದೆ.
''ಕಾಣದಂತೆ ಆಕ್ರಮಿಸಿದೆ ವೈರಿ ಕೊರೊನಾ''
''ಕಾಣದಂತೆ ಆಕ್ರಮಿಸಿದೆ ವೈರಿ ಕೊರೊನಾ, ಅದಕೆ ನಾವೇ ಈಗ ದಾರಿ ಆಗದಿರೋಣ'' ಎಂದು ಪ್ರಾರಂಭವಾಗುವ ಹಾಡಿನಲ್ಲಿ ಕಾಯ್ಕಿಣಿ ಅವರು 'ಕಾಲಬುಡಕೆ ಮಾರಿ ಬರುವ ವರೆಗೆ ಕಾಯದಿರೋಣ'' ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.
ಹಾಗಿದ್ದೆವು, ಈಗ ಹೀಗಾಗಿದ್ದೇವೆ ಎಂದ ಕಾಯ್ಕಿಣಿ
ಹಾಡಿನಲ್ಲಿ, ಕೊರೊನಾ ದ ಮುಂಚಿನ ದಿನಗಳನ್ನು ಪ್ರಸ್ತುತ ದಿನಗಳಲ್ಲಿ ಮನುಷ್ಯನ ವರ್ತನೆಗಳಲ್ಲಿ ಆದ ವ್ಯತ್ಯಾಸವನ್ನು ಉಲ್ಲೇಖಿಸಿರುವ ಕಾಯ್ಕಿಣಿ, ಅಂದು ಹಾಗಿದ್ದೆವು, ಈಗ ಹೀಗಾಗಿದ್ದೇವೆ ಎಂದು ಬೇರ್ಪಡಿಸಿ ತೋರಿಸಿದ್ದಾರೆ.
ಬೀದಿ ಬದಿ ವ್ಯಾಪಾರಿ, ಸೂರಿಲ್ಲದವರ ಬಗ್ಗೆ ಕಾಳಜಿ
ಕೊರೊನಾ ಪರಿಣಾಮ ಎದುರಿಸುತ್ತಿರುವವರ ಬಗ್ಗೆಯೂ ಕಾಯ್ಕಿಣಿ ಕವನದಲ್ಲಿ ಮರುಕಪಟ್ಟಿದ್ದು, 'ಬೀದಿ ವ್ಯಾಪಾರಿ, ಮನೆಯೇ ಇರದ ಕೂಲಿ ಬಳಗ ಎಲ್ಲಿ ಹೋದರೋ, ಅವರಿಗಾಗಿ ಬುತ್ತಿಯನ್ನು ಮೀಸಲಿಡೋಣ'' ಎಂದು ಕಾಳಜಿ ವ್ಯಕ್ತಪಡಿಸಿದ್ದಾರೆ.
ನಾವೇ ತಂದುಕೊಂಡ ಚಂಡಮಾರುತ ಎಂದ ಕಾಯ್ಕಿಣಿ
'ಭೂಮಿ, ಬಾನು, ನೀರು, ಕಾಡು ಧ್ವಂಸ ಮಾಡುತಾ, ನಮಗೆ ನಾವೇ ತಂದುಕೊಂಡೆವು ಚಂಡಮಾರುತ' ಎಂದು ಮಾನವನ ವಿನಾಶಕಾರಿ ಬುದ್ಧಿಯಿಂದಲೇ ಕೊರೊನಾದಂತಹಾ ಮಹಾ ಮಾರಿ ಬಂದೊದಗಿಗೆ ಎಂದು ಕಾಯ್ಕಿಣಿ ಕವನದಲ್ಲಿ ಹೇಳಿದ್ದಾರೆ.