Don't Miss!
- Technology Motorola: ಮೊಟೊರೊಲಾ ಎಡ್ಜ್ 50 ಅಲ್ಟ್ರಾ ಸ್ಮಾರ್ಟ್ಫೋನ್ ಫೀಚರ್ಸ್ ಲೀಕ್! ವಿಶೇಷತೆ ಏನು?
- Automobiles Tata Curvv Vs Citroen Basalt: ಟಾಟಾಗೆ ಸೆಡ್ಡು ಹೊಡೆಯುವ ತಾಕತ್ತಿದೆಯೇ?
- Lifestyle ನರಿ ಮತ್ತು ಕೋಳಿಗೂ ಮೂರ್ಖರ ದಿನಕ್ಕೂ ಇದೆ ನಂಟು..! ಏನದು.?
- News RBI: ಬ್ಯಾಂಕ್ ಕೆಲಸ ಮುಗಿದಿಲ್ವಾ? ಭಯ ಬೇಡ ಮಾರ್ಚ್ 30, 31ಕ್ಕೂ ಓಪನ್ ಇರುತ್ತೆ ಆರ್ಬಿಐ ಕಚೇರಿಗಳು!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜಮೀರ್ ಅಹ್ಮದ್ ಮಗನನ್ನು ಲಾಂಚ್ ಮಾಡ್ತಿದ್ದಾರೆ ಸ್ಟಾರ್ ಡೈರೆಕ್ಟರ್
Recommended Video
ರಾಜಕಾರಣಿಗಳ ಮಕ್ಕಳು ಚಿತ್ರರಂಗಕ್ಕೆ ಬರುವುದು ಹೊಸ ವಿಷಯ ಏನಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಮಗ ನಿಖಿಲ್ ಕುಮಾರ್, ಚೆಲುವರಾಯ ಸ್ವಾಮಿ ಪುತ್ರ ಸಚಿನ್, ಹೆಚ್ ಎಮ್ ರೇವಣ್ಣ ಪುತ್ರ ಅನೂಪ್ ಈಗಾಗಲೇ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ.
ಇದೀಗ ಕಾಂಗ್ರೆಸ್ ಪಕ್ಷದ ನಾಯಕ, ಸಚಿವ ಜಮೀರ್ ಅಹ್ಮದ್ ಮಗ ಕೂಡ ಸಿನಿಮಾ ರಂಗಕ್ಕೆ ಬರುವ ಪ್ಲಾನ್ ಮಾಡಿದ್ದಾರೆ. ಜಮೀರ್ ಅಹ್ಮದ್ ಪುತ್ರ ಜಾಹಿದ್ ಖಾನ್ ಮೊದಲ ಸಿನಿಮಾದ ನಿರ್ದೇಶಕರು ಯಾರು ಎನ್ನುವ ವಿಷಯ ಕೂಡ ಈಗಾಗಲೇ ಬಹಿರಂಗವಾಗಿದೆ.
ಜಮೀರ್ ಅಹ್ಮದ್ ಪುತ್ರ ಝೈದ್ ಬಗ್ಗೆ ಬ್ರೇಕ್ ಆಗಿರುವ ಇಂಟ್ರೆಸ್ಟಿಂಗ್ ಸುದ್ದಿ ಇದು
'ಬೆಲ್ ಬಾಟಂ' ಸಿನಿಮಾದ ಗೆಲ್ಲುವಿನ ಖುಷಿಯಲ್ಲಿ ಇರುವ ಜಯತೀರ್ಥ ಈಗ ಜಮೀರ್ ಅಹ್ಮದ್ ಮಗನ ಸಿನಿಮಾವನ್ನು ನಿರ್ದೇಶನ ಮಾಡುವ ತಯಾರಿಯಲ್ಲಿದ್ದಾರೆ. ತಮ್ಮ ಹೊಸ ಸಿನಿಮಾದ ಬಗ್ಗೆ ಫಿಲ್ಮಿಬೀಟ್ ಕನ್ನಡದ ಜೊತೆಗೆ ಮಾತನಾಡಿದ್ದಾರೆ. ಮುಂದೆ ಓದಿ....
ಚಿತ್ರದ ಮಾತುಕತೆ ನಡೆಯುತ್ತಿದೆ
ತಮ್ಮ ಹೊಸ ಸಿನಿಮಾದ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿರ್ದೇಶಕ ಜಯತೀರ್ಥ ಜಮೀರ್ ಅಹ್ಮದ್ ಮಗ ಜಾಹಿದ್ ಖಾನ್ ಅವರಿಗೆ ಸಿನಿಮಾ ಮಾಡುವ ಪ್ಲಾನ್ ಇದ್ದು, ಸದ್ಯಕ್ಕೆ ಈ ಚಿತ್ರದ ಮಾತುಕತೆ ನಡೆಯುತ್ತಿದೆ ಎಂದಿದ್ದಾರೆ. ಅಲ್ಲಿಗೆ ಜಾಹಿದ್ ಖಾನ್, ಜಯತೀರ್ಥ ಸಿನಿಮಾದ ಮೂಲಕ ಚಿತ್ರ ಜೀವನ ಶುರು ಮಾಡುವುದು ಪಕ್ಕಾ ಆಗಿದೆ.
ಆತನಿಗೆ ಒಪ್ಪುವ ಕಥೆ ಆಗಬೇಕು
ಜಾಹಿದ್ ಖಾನ್ ಮುಂಬೈ ನಲ್ಲಿ ನಟನ ತರಬೇತಿ ಪಡೆದಿದ್ದಾರೆ. ಅವರಿಗೆ ಸೂಟ್ ಆಗುವ ಕಥೆಯನ್ನು ಜಯತೀರ್ಥ ಮಾಡಬೇಕಿದೆಯಂತೆ. ಕಥೆ ಇಬ್ಬರಿಗೂ ಇಷ್ಟ ಆದಾಗ ಸಿನಿಮಾ ಶುರು ಆಗಲಿದೆ. ವಿಶೇಷ ಅಂದರೆ, ಈ ಸಿನಿಮಾಗೆ ಜಮೀರ್ ಹಣ ಹಾಕುತ್ತಿಲ್ಲ. ಬದಲಿಗೆ ಬಾಂಬೆ ನಿರ್ಮಾಣ ಸಂಸ್ಥೆ ಪ್ರೊಡ್ಯೂಸ್ ಮಾಡುತ್ತಿದೆ.
ಚಿತ್ರರಂಗಕ್ಕೆ ಸುದೀಪ್ ಅಳಿಯ, ಜಯತೀರ್ಥ ಆಕ್ಷನ್ ಕಟ್.!
ಜಯತೀರ್ಥ ಪಟ್ಟಿಗೆ ಮತ್ತೊಬ್ಬ ಹೊಸ ಹೀರೋ
ಜಯತೀರ್ಥ ತಮ್ಮ ಮೊದಲ ಸಿನಿಮಾ 'ಒಲವೇ ಮಂದಾರ' ಮೂಲಕ ಶ್ರೀಕಾಂತ್ ಪರಿಚಯ ಆದರು. ಆದಾದ ನಂತರ 'ವೆನಿಲ್ಲಾ' ಸಿನಿಮಾ ಮೂಲಕ ಅವಿನಾಶ್ ಲಾಂಚ್ ಆದರು. 'ಬೆಲ್ ಬಾಟಂ' ಮೂಲಕ ರಿಷಬ್ ಶೆಟ್ಟಿ ಹೀರೋ ಪಟ್ಟ ಪಡೆದರು. ಈಗ ಜಯತೀರ್ಥ ಆಶೀರ್ವಾದದಿಂದ ಜಾಹಿದ್ ಖಾನ್ ನಾಯಕ ನಟ ಆಗುತ್ತಿದ್ದಾರೆ.
10ನೇ ವಾರ 'ಬೆಲ್ ಬಾಟಂ' ಯಶಸ್ವಿ ಪ್ರದರ್ಶನ
ಮತ್ತೊಂದು ಕಡೆ ಜಯತೀರ್ಥ ನಿರ್ದೇಶನದ 'ಬೆಲ್ ಬಾಟಂ' ಸಿನಿಮಾ ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದೆ. ಚಿತ್ರ ಈಗ 10ನೇ ವಾರಕ್ಕೆ ಕಾಲಿಟ್ಟಿದೆ. ರಿಷಬ್ ಶೆಟ್ಟಿ, ಹರಿಪ್ರಿಯಾ ಚಿತ್ರದಲ್ಲಿ ನಟಿಸಿದ್ದಾರೆ. ಸಿಕ್ಕಾಪಟ್ಟೆ ಮನರಂಜನೆ ಇರುವ ಪಕ್ಕಾ ಪತ್ತೇದಾರಿ ಸಿನಿಮಾ ಇದಾಗಿದೆ.