Don't Miss!
- Lifestyle ಪುರುಷರಲ್ಲಿ ಹೆಚ್ಚಾಗುತ್ತಿದೆ ಬಂಜೆತನ: ಪುರುಷರು ಈ ಆಹಾರ ಸೇವಿಸಿದರೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು
- Sports CSK vs LSG IPL 2024: ರುತುರಾಜ್ ಭರ್ಜರಿ ಶತಕ, ದುಬೆ ಸ್ಫೋಟಕ ಬ್ಯಾಟಿಂಗ್; ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ
- News Narendra Modi: ಕರ್ನಾಟಕಕ್ಕೆ ಏಪ್ರಿಲ್ 29, 29ಕ್ಕೆ ಪ್ರಧಾನಿ ಮೋದಿ ಆಗಮನ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪುನೀತ್ ಚಿತ್ರಕ್ಕೆ ನಾಯಕಿ ಆದ 'ಜೋಡಿಹಕ್ಕಿ' ಜಾನಕಿ ಟೀಚರ್ ಚೈತ್ರ
Recommended Video
ಕಿರುತೆರೆಯ ಪ್ರತಿಭೆಗಳು ಹಿರಿತೆರೆಗೆ ಬರುವುದು ಸಾಮಾನ್ಯ. ನಟಿ ರಾಧಿಕಾ ಪಂಡಿತ್, ರಚಿತಾ ರಾಮ್ ಸೇರಿದಂತೆ ಕನ್ನಡದ ಅನೇಕ ಸ್ಟಾರ್ ನಟಿಯರು ಮೊದಲು ಸೀರಿಯಲ್ ನಲ್ಲಿ ಮಿಂಚಿದ್ದರು. ಈಗ ಮತ್ತೊಂದು ಧಾರಾವಾಹಿಯ ಪ್ರತಿಭೆ ಸಿನಿಮಾರಂಗ ಪ್ರವೇಶ ಮಾಡಿದೆ.
'ಜೀ ಕನ್ನಡ' ವಾಹಿನಿ ನೋಡುಗರಿಗೆ 'ಜೋಡಿ ಹಕ್ಕಿ' ಧಾರಾವಾಹಿ ಬಲು ಇಷ್ಟದ ಸೀರಿಯಲ್. ಅದರಲ್ಲಿ ಜಾನಕಿ ಟೀಚರ್ ಅಂದರೆ ಎಲ್ಲರಿಗೂ ಅಚ್ಚು ಮೆಚ್ಚು. ಜಾನಕಿ ಟೀಚರ್ ಸೌಂದರ್ಯ ಅವರ ಸಹಜ ನಟನೆ ಧಾರಾವಾಹಿಯ ಹೈಲೆಟ್. ಈ ಧಾರಾವಾಹಿಯ ಮೂಲಕ ಕಿರುತೆರೆಯಲ್ಲಿ ಹೆಸರು ಮಾಡಿದ್ದ ಜಾನಕಿ ಟೀಚರ್ ಅಂದರೆ ಚೈತ್ರ ರಾವ್ ಅವರು ಈಗ ಬೆಳ್ಳಿ ಪರದೆ ಮೇಲೆ ಮೋಡಿ ಮಾಡಲು ಸಜ್ಜಾಗಿದ್ದಾರೆ. ಅದು ಕೂಡ ನಟ ಪುನೀತ್ ರಾಜ್ ಕುಮಾರ್ ಅವರ ಸಿನಿಮಾದಲ್ಲಿ ಎನ್ನುವುದು ವಿಶೇಷ. ಮುಂದೆ ಓದಿ...
ಅಪ್ಪು ನಿರ್ಮಾಣದ 2ನೇ ಚಿತ್ರ
ನಟ ಪುನೀತ್ ರಾಜ್ ಕುಮಾರ್ ತಮ್ಮ ಬ್ಯಾನರ್ ನಲ್ಲಿ ಎರಡನೇ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ನಾಯಕಿಯಾಗಿ 'ಜೋಡಿಹಕ್ಕಿ' ಖ್ಯಾತಿಯ ಚೈತ್ರ ಆಯ್ಕೆ ಆಗಿದ್ದಾರೆ.
ಮಾಯಬಜಾರ್ 2016
ಪುನೀತ್ 'ಮಾಯಬಜಾರ್ 2016' ಎಂಬ ಹೊಸ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. ಈ ಚಿತ್ರದ ಮುಹೂರ್ತ ನಿನ್ನೆ ನೆಡೆದಿದೆ. ಪುನೀತ್ ಅವರ ಪಿ.ಆರ್.ಕೆ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ಚೈತ್ರ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.
ಸಂತಸದಲ್ಲಿ ಚೈತ್ರ
ತಮ್ಮ ಮೊದಲ ಚಿತ್ರದ ಬಗ್ಗೆ ಮಾತನಾಡಿರುವ ಚೈತ್ರ ''ನನ್ನ ಮೊದಲ ಚಿತ್ರವನ್ನು ಪುನೀತ್ ಸರ್ ಅವರ ಬ್ಯಾನರ್ ನಲ್ಲಿ ಮಾಡುತ್ತಿರುವ ಕಾರಣ ತುಂಬ ಉತ್ಸಾಹದಲ್ಲಿ ಇದ್ದೇನೆ. ನನ್ನ ಪಾತ್ರ ತುಂಬ ಡಿಫರೆಂಟ್ ಆಗಿದೆ. ಕಥೆ ಇಷ್ಟ ಆಯ್ತು. ಅದಕ್ಕೆ ಒಪ್ಪಿಕೊಂಡೆ.'' ಎಂದು ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.
ಚಿತ್ರದ ಬಗ್ಗೆ
'ಮಾಯಬಜಾರ್ 2016' ಚಿತ್ರವನ್ನು ರಾಧಾಕೃಷ್ಣ ನಿರ್ದೇಶನ ಮಾಡಿದ್ದಾರೆ. 'ಒಂದು ಮೊಟ್ಟೆಯ ಕಥೆ' ಖ್ಯಾತಿಯ ರಾಜ್ ಬಿ ಶೆಟ್ಟಿ, ಪ್ರಕಾಶ್ ರಾಜ್, ವಸಿಷ್ಟ, ಅಚ್ಚುತ್ ಕುಮಾರ್, ಸುಧಾರಾಣಿ, ಚೈತ್ರ ರಾವ್ ಇಲ್ಲಿ ನಟಿಸಿದ್ದಾರೆ. ಮಿಧುನ್ ಮುಕುಂದನ್ ಸಂಗೀತ ನೀಡಿದ್ದಾರೆ. 'ಮಯಾ ಬಜಾರ್' ಟೈಟಲ್ ಟೀಸರ್ ಕೂಡ ನಿನ್ನೆ ರಿಲೀಸ್ ಆಗಿದೆ.
ಪುನೀತ್ ನಿರ್ಮಾಣದ ಎರಡನೇ ಚಿತ್ರಕ್ಕೆ ಟೈಟಲ್ ಫಿಕ್ಸ್
ಹೊಸಬರಿಗೆ ಅವಕಾಶ
ಪುನೀತ್ ತಮ್ಮ ನಿರ್ಮಾಣದಲ್ಲಿ ಹೊಸಬರಿಗೆ ಅವಕಾಶ ನೀಡುತ್ತಿದ್ದಾರೆ. ತಮ್ಮ ಮೊದಲ ಚಿತ್ರ 'ಕವಲುದಾರಿ'ಯಲ್ಲಿಯೂ ಹೊಸ ನಟಿ ರೋಷಿನಿ ಪ್ರಕಾಶ್ ಅವರಿಗೆ ಅಪ್ಪು ಅವಕಾಶ ಕೊಟ್ಟಿದ್ದರು.