Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಟಾಲಿವುಡ್ ನಲ್ಲಿ ಶುರುವಾಯ್ತು 'ಜೂಡಾ' ಗಾನಬಜಾನ
'ಬದ್ಮಾಶ್' ಸಿನಿಮಾ ಮೂಲಕ ಕನ್ನಡ ಸಿನಿಮಾರಂಗದಲ್ಲಿ ವಿಭಿನ್ನ ರೀತಿಯ ಸಂಗೀತವನ್ನು ಪ್ರೇಕ್ಷಕರಿಗೆ ನೀಡಿದ ಸಂಗೀತ ನಿರ್ದೇಶಕ ಜೂಡಾ ಸ್ಯಾಂಡಿ ಟಾಲಿವುಡ್ ಗೆ ಹಾರಿದ್ದಾರೆ. 'ಬದ್ಮಾಶ್' ಚಿತ್ರದ ನಂತರ 'ಆಪರೇಷನ್ ಅಲಮೇಲಮ್ಮ' ಹಾಗೂ 'ಚಮಕ್' ಚಿತ್ರಕ್ಕೆ ಜೂಡಾ ಟ್ಯೂನ್ ನೀಡಿದ್ದರು.
'ಚಮಕ್' ಚಿತ್ರದ ಹಾಡಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿತ್ತು. ಚಿತ್ರರಂಗಕ್ಕೆ ಬರುವ ಮುನ್ನ ಜೂಡಾ ತಮ್ಮದೇ ಆದ ಬ್ಯಾಂಡ್ ಮೂಲಕ ಸಂಗೀತ ಪ್ರಿಯರಿಗೆ ಚಿರಪರಿಚಿತರಾಗಿದ್ದರು. ವಿಭಿನ್ನ ಸಂಗೀತದಿಂದಲೇ ಪ್ರಖ್ಯಾತಿಗಳಿಸಿದ್ದ ಜೂಡಾ, ಅಲ್ಲು ಸಿರೀಶ್ ಅಭಿನಯದ 'ಎಬಿಸಿಡಿ' ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ.
ಗೊಂಬೆ ಹಾಡಿಗೆ ಮತ್ತೆ ಜೀವ ತುಂಬಿದ ರಾಘವೇಂದ್ರ ರಾಜ್ ಕುಮಾರ್
ಅಲ್ಲು ಸಿರೀಶ್ ಇತ್ತೀಚಿನ ದಿನಗಳಲ್ಲಿ ಕನ್ನಡ ಸಿನಿಮಾರಂಗ ಹಾಗೂ ಇಲ್ಲಿಯ ಕಲಾವಿದರ ಜೊತೆಯಲ್ಲಿ ಉತ್ತಮ ಬಾಂದವ್ಯವನ್ನು ಹೊಂದಿದ್ದು, ಇಲ್ಲಿಯವರರೇ ಆದ ಜೂಡಾ ಅವರನ್ನು ತಮ್ಮ ಚಿತ್ರಕ್ಕೆ ಸಂಗೀತ ನೀಡಲು ಆಹ್ವಾನ ನೀಡಿದ್ದಾರೆ.
ಚಮಕ್ ಚಿತ್ರದ ಹಾಡುಗಳನ್ನ ಹೇಳಿ ಇಂಪ್ರೆಸ್ ಆದ ಸಿರೀಶ್ ಇವರನ್ನೇ ಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿ ಆಯ್ಕೆ ಮಾಡಿಕೊಳ್ಳೋಣ ಎಂದು ನಿರ್ಧರಿಸಿದ್ದಾರೆ. ನಂತರ ಜೂಡಾ ಅವರನ್ನೇ ಹೈದ್ರಾಬಾದ್ ಗೆ ಕರೆಸಿ ಮಾತನಾಡಿದ್ದಾರೆ. ಕನ್ನಡದ ಪ್ರತಿಭೆ ಪರಭಾಷೆಯಲ್ಲೂ ಮಿಂಚುತ್ತಿರುವುದು ಅಭಿಮಾನಿಗಳಿಗೆ ಮಾತ್ರವಲ್ಲದೆ ಜೂಡಾ ಅವರಿಗೂ ಖುಷಿ ತಂದಿದ್ಯಂತೆ.