Don't Miss!
- News Mukhtar Ansari's death: ಉತ್ತರಪ್ರದೇಶದಲ್ಲಿ ಕಿಚ್ಚು ಹಚ್ಚಿದ ಗ್ಯಾಂಗ್ಸ್ಟಾರ್, ರಾಜಕಾರಣಿ ಮುಖ್ತಾರ್ ಅನ್ಸಾರಿ ನಿಧನ
- Technology iPhone: ಆಪಲ್ ಅಂತಿಮವಾಗಿ ಐಫೋನ್ 12 ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿಯೇ ಬಿಟ್ಟಿತು! ಏನದು?
- Automobiles Tata Nexon: ಟಾಟಾ ನೆಕ್ಸಾನ್ ಹೊಸ ರೂಪಾಂತರಗಳು ಬಿಡುಗಡೆ, ರೂ.10 ಲಕ್ಷ ಬೆಲೆ.. ಆಕರ್ಷಕ ವೈಶಿಷ್ಟ್ಯಗಳು
- Sports Riyan Parag: 'ಗಾಯದಿಂದ ಮೂರು ದಿನ ಒದ್ದಾಡಿ ಹೋಗಿದ್ದೆ': ರಿಯಾನ್ ಪರಾಗ್
- Finance ಇನ್ಮುಂದೆ ದುಬಾರಿಯಾಗಲಿದೆ ಎಸ್ಬಿಐ ಡೆಬಿಟ್, ಕ್ರೆಡಿಟ್ ಕಾರ್ಡ್ ನಿರ್ವಹಣಾ ಶುಲ್ಕ
- Lifestyle ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜೂನಿಯರ್ ಎನ್ಟಿಆರ್ ಆಫೀಸ್ ಮೇಲೆ ದಾಳಿ
ಕಿಡಕಿ ಗ್ಲಾಸ್ ಹಾಗೂ ರಾಡ್ ಮೇಲೆ ದುಷ್ಕರ್ಮಿಗಳು ತಮ್ಮ ಪ್ರಹಾರ ನಡೆಸಿದ್ದು ಈ ವೇಳೆ ಗ್ಲಾಸ್ ಚೂರಾಗುವ ವೇಳೆ ಉಂಟಾದ ಸದ್ದಿನಿಂದ ಕಚೇರಿಲ್ಲಿದ್ದ ಸಿಬ್ಬಂದಿ ಹೊರಗೆ ಬಂದಿದ್ದಾರೆ. ತಕ್ಷಣ ಎಚ್ಚೆತ್ತ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ದಾಳಿಯಲ್ಲಿ ಕಚೇರಿಯ ಯಾವುದೇ ಸಿಬ್ಬಂದಿಗೆ ಗಾಯಗಳಾಗಿಲ್ಲ.
ಈ ವಾರದ ಪ್ರಾರಂಭದಲ್ಲಿ ಇದೇ ಕಚೇರಿಯಲ್ಲಿ ನಟ ಜೂ. ಎನ್ಟಿಆರ್ ಸುದ್ದಿಗೋಷ್ಠಿ ನಡೆಸಿದ್ದರು. ಟಿಡಿಪಿ ಎಮ್ಮೆಲ್ಲೆ ಕೊಡಾಲಿ ನಾನಿ ಅವರಿಗೆ ವೈಎಸ್ ಆರ್ (YSR Congress) ಪಾರ್ಟಿಗೆ ಸೇರಲು ಜೂ. ಎನ್ಟಿಆರ್ ಕಾರಣ ಎಂಬುದಕ್ಕೆ ಈ ದಾಳಿ ನಡೆದಿರಬಹುದೆಂದು ಅಂದಾಜಿಸಲಾಗಿದೆ. ಆದರೆ ಈ ಬಗ್ಗೆ ಅಧೀಕೃತ ಮಾಹಿತಿ ಜೂ. ಎನ್ಟಿಆರ್ ಕಚೇರಿಯಿಂದ ಇನ್ನಷ್ಟೇ ಬರಬೇಕಾಗಿದೆ.
ಒಟ್ಟಿನಲ್ಲಿ, ಬಾದ್ ಶಾ ಚಿತ್ರೀಕರಣಕ್ಕೆ ವಿದೇಶ ಇಟಲಿಗೆ ತೆರಳಿದಾಗಲೇ ಜೂ. ಎನ್ಟಿಆರ್ ಕಚೇರಿ ಮೇಲೆ ದಾಳಿ ನಡೆದಿರುವುದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ಆದರೆ ತನಿಖೆಯಿಂದ ಶೀಘ್ರವೇ ಸತ್ಯ ಬಯಲಾಗಲಿದೆ. ಸದ್ಯಕ್ಕೆ ಇದು ರಾಜಕೀಯಕ್ಕೆ ಸಂಬಂಧಿಸಿದ ದುರುದ್ದೇಶಪೂರಿತ ದಾಳಿ ಎಂಬುದು ಮೇಲ್ನೋಟಕ್ಕೆ ಕಂಡುಬಂದ ಸಂಗತಿ. ಆದರೆ ಅಧಿಕೃತ ಮಾಹಿತಿ ಬಂದಮೇಲಷ್ಟೇ ಎಲ್ಲವೂ ಪಕ್ಕಾ.
ಅಂದಹಾಗೆ, ಇದೀಗ ವಿದೇಶದಲ್ಲಿ ಚಿತ್ರೀಕರಣ ಹಂತದಲ್ಲಿರುವ ಜೂ ಎನ್ಟಿಆರ್ 'ಬಾದ್ ಶಾ' ಚಿತ್ರಕ್ಕೆ ಶ್ರೀನು ವೈಟ್ಲಾ ನಿರ್ದೇಶಕರು. ಕೋನಾ ವೆಂಕಟ್ ಈ ಚಿತ್ರದ ನಿರ್ಮಾಪಕರು. ನಾಯಕಿಯಾಗಿ ಕಾಜಲ್ ಅಗರವಾಲ್ ಇದ್ದಾರೆ. ಈಗಾಗಲೇ ಸಾಕಷ್ಟು ಚಿತ್ರೀಕರಣ ಮುಗಿಸಿರುವ ಈ ಚಿತ್ರದ ಬಗ್ಗೆ ಬಹಳಷ್ಟು ನಿರೀಕ್ಷೆಯಿದೆ. (ಏಜೆನ್ಸೀಸ್ )