Don't Miss!
- News Namma Metro Blue Line: ಇತರ ಮಾರ್ಗಕ್ಕಿಂತಲೂ 'ನೀಲಿ' ಮಾರ್ಗದಲ್ಲಿ ವೇಗವಾಗಿ ಓಡಲಿವೆ ಮೆಟ್ರೋ, ಅಪ್ಡೇಟ್
- Lifestyle UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Sports CSK vs LSG IPL 2024: ಚೆನ್ನೈ vs ಲಕ್ನೋ ಹೈ-ವೋಲ್ಟೇಜ್ ಪಂದ್ಯದ ಟಾಸ್ ವರದಿ; ಆಡುವ 11ರ ಬಳಗ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತಪ್ಪೊಪ್ಪಿಕೊಂಡ ಪಿ.ವಿ.ಆರ್.! ದಂಡ ಕಟ್ಟಲು ಮಲ್ಟಿಪ್ಲೆಕ್ಸ್ ಸಿದ್ಧ.!
ಚಿತ್ರಮಂದಿರಗಳು ಖಾಲಿ ಇದ್ದರೂ, 'ಫೇಕ್ ಹೌಸ್ ಫುಲ್' ಬೋರ್ಡ್ ಹಾಕಿ, ಆನ್ ಲೈನ್ ನಲ್ಲಿ ಟಿಕೆಟ್ ಗಳು ಸೇಲ್ ಆಗದ ಹಾಗೆ ನೋಡಿಕೊಂಡು, ಕನ್ನಡ ಚಿತ್ರಗಳನ್ನ ತುಳಿಯುವ ಪ್ರಯತ್ನ ಮಾಡುತ್ತಿದ್ದ ಕರ್ನಾಟಕದ ಮಲ್ಟಿಪ್ಲೆಕ್ಸ್ ಗಳಿಗೆ ಈಗ ಕೆ.ಎಫ್.ಸಿ.ಸಿ ಕಡೆಯಿಂದ ಬಿಸಿ ತಾಕಿದೆ.
'ನಾವು ಮಾಡಿದ್ದು ತಪ್ಪು' ಅಂತ ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಸಭೆಯಲ್ಲಿ ಪಿ.ವಿ.ಆರ್ ಸಮೂಹ ಮತ್ತು ಬುಕ್ ಮೈ ಶೋ ವ್ಯವಸ್ಥಾಪಕರು ತಪ್ಪೊಪ್ಪಿಕೊಂಡಿದ್ದಾರೆ. [ಕರ್ನಾಟಕದ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಿಗೆ ನಾಚಿಕೆ ಆಗಬೇಕು..ಥೂ.!]
ಸೋಲ್ಡ್ ಔಟ್ ಅಂತ ತೋರಿಸಿದ ಎಲ್ಲಾ ಶೋಗಳ ಸಂಪೂರ್ಣ ಹಣವನ್ನ ನಿರ್ಮಾಪಕರಿಗೆ ನೀಡುವುದಾಗಿ ಪಿ.ವಿ.ಆರ್ ಸಮೂಹದ ವ್ಯವಸ್ಥಾಪಕರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ರವರಿಗೆ ಭರವಸೆ ನೀಡಿದ್ದಾರೆ.
ಜೊತೆಗೆ ಹಾಲಿ ಸಿನಿಮಾಗಳನ್ನು ಪ್ರತಿ ದಿನ ಎರಡು ಶೋಗಳಲ್ಲಿ ಪ್ರದರ್ಶನ ಮಾಡಲು ಮಲ್ಟಿಪ್ಲೆಕ್ಸ್ ಚಿತ್ರಮಂದಿರದ ಕಡೆಯಿಂದ ಗ್ರೀನ್ ಸಿಗ್ನಲ್ ಕೂಡ ಸಿಕ್ಕಿದೆ.
ಇಂದು ಸಾ.ರಾ.ಗೋವಿಂದು ಅಧ್ಯಕ್ಷತೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಸಭೆಯಲ್ಲಿ 'ಆಕ್ಟರ್' ಚಿತ್ರ ನಿರ್ಮಾಪಕ ಕೆ.ಎಂ.ವೀರೇಶ್, ನಿರ್ಮಾಪಕ ಹಾಗೂ ನಿರ್ದೇಶಕ ದಿನಕರ್ ತೂಗುದೀಪ, ನಿರ್ದೇಶಕ ದಯಾಳ್ ಪದ್ಮನಾಭನ್, ಪಿ.ವಿ.ಆರ್ ಸಮೂಹ ಹಾಗೂ 'ಬುಕ್ ಮೈ ಶೋ' ವೆಬ್ ತಾಣದ ವ್ಯವಸ್ಥಾಪಕರು ಪಾಲ್ಗೊಂಡಿದ್ದರು.
'ಆಕ್ಟರ್', 'ಮಧುರ ಸ್ವಪ್ನ' ಹಾಗೂ 'ಭಲೇ ಜೋಡಿ' ಚಿತ್ರಗಳಿಗೆ ಕಳೆದ ಎರಡು ದಿನಗಳಿಂದ 'ಬುಕ್ ಮೈ ಶೋ' ವೆಬ್ ತಾಣದಲ್ಲಿ ಟಿಕೆಟ್ಸ್ ಸೋಲ್ಡ್ ಔಟ್ ಅಂತ ತೋರಿಸುತ್ತಿತ್ತು. ಕೂಲಂಕುಶವಾಗಿ ವಿಚಾರಿಸಿದ ಬಳಿಕ ಮಲ್ಟಿಪ್ಲೆಕ್ಸ್ ಗಳಲ್ಲಿ 'ಫೇಕ್ ಹೌಸ್ ಫುಲ್' ಬೋರ್ಡ್ ಬಿದ್ದಿರುವುದು ಖಾತ್ರಿಯಾಯ್ತು. ನಂತರ ನೇರವಾಗಿ ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಕೆ.ಎಂ.ವೀರೇಶ್ 'ಕನ್ನಡ ವಿರೋಧಿ ಮಲ್ಟಿಪ್ಲೆಕ್ಸ್'ಗಳಿಗೆ ಮೊದಲ ಪೆಟ್ಟು ಕೊಟ್ಟಿದ್ದಾರೆ.