Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಕ್ಷನ್ ಕಟ್ ಗೆ ಗೀತಸಾಹಿತಿ ಕೆ ಕಲ್ಯಾಣ್ 'ಅಂಬೆಗಾಲು'
ಇದೇ ಮೊಟ್ಟ ಮೊದಲ ಬಾರಿಗೆ ಅವರು ಆಕ್ಷನ್ ಕಟ್ ಹೇಳಲು ಹೊರಟಿರುವುದು ಗೊತ್ತೇ ಇದೆ. ಈ ಚಿತ್ರಕ್ಕೆ 'ಅಂಬೆಗಾಲು' ಎಂದು ಹೆಸರಿಟ್ಟಿದ್ದಾರೆ. ಇದು ಭಾವನೆಗಳ ಅಂಬೆಗಾಲು, ಧ್ಯೇಯಗಳ ಅಂಬೆಗಾಲು.
ಕೇವಲ ನಿರ್ದೇಶನದ ಜವಾಬ್ದಾರಿ ಅಷ್ಟೇ ಅಲ್ಲದೆ ಕತೆ, ಚಿತ್ರಕತೆ, ಸಂಭಾಷಣೆ, ಸಾಹಿತ್ಯ, ಸಂಗೀತ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದಾರೆ. ಈ ಚಿತ್ರದ ನಿರ್ಮಾಪಕರು ಬೆಂ.ಕೋ.ಶ್ರೀ (ಬಿ.ಕೆ. ಶ್ರೀನಿವಾಸ್). ವರ್ಷದ ಹಿಂದೆಯೇ ಕಲ್ಯಾಣ್ ಅವರಿಗೆ ಚಿತ್ರಕತೆ ಸಿದ್ಧತೆ ಮಾಡಿಕೊಳ್ಳುವಂತೆ ಬೆಂಕೋಶ್ರೀ ಹೇಳಿದ್ದರಂತೆ.
ಈಗ ಚಿತ್ರಕತೆ ಅಂತಿಮ ಹಂತಕ್ಕೆ ಬಂದಿದ್ದು ಬಹುಶಃ ಸೆಪ್ಟೆಂಬರ್ ವೇಳೆಗೆ ಚಿತ್ರ ಸೆಟ್ಟೇರುವ ಸಾಧ್ಯತೆಳಿವೆ ಎಂದಿದ್ದಾರೆ. ಚಿತ್ರಕತೆ ಪೂರ್ಣವಾಗುವವರೆಗೆ ಪಾತ್ರವರ್ಗದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಮೊದಲ ಆದ್ಯತೆ ಚಿತ್ರಕತೆಗೆ. ಆ ಬಳಿಕವಷ್ಟೇ ತಾಂತ್ರಿಕ ಹಾಗೂ ತಾರಾ ಬಳಗದ ಆಯ್ಕೆ ಎಂದಿದ್ದಾರೆ.
'ಅಮೃತ ವರ್ಷಿಣಿ' ಚಿತ್ರದ "ಈ ಸುಂದರ ಬೆಳದಿಂಗಳ ಈ ತಂಪಿನ ಅಂಗಳದಲಿ, ನನ್ನ ನಿನ್ನ ನಡುವಿನಲಿ.." ಎಂಬ ಸಾಹಿತ್ಯದ ಮೂಲಕ ಅಮೃತ ಹನಿಸಿದ ಪ್ರೇಮಕವಿ ಕೆ ಕಲ್ಯಾಣ್. ನೆನಪುಗಳ ಮಾತು ಮಧುರಾ (ಚಂದ್ರಮುಖಿ ಪ್ರಾಣಸಖಿ), ಸವಿ ಸವಿ ನೆನಪು ಸಾವಿರ ನೆನಪು (ಮೈ ಆಟೋಗ್ರಾಫ್), ಆಹಾ ಎಂಥಾ ಆ ಕ್ಷಣ ನೆನೆದರೆ ತಲ್ಲಣ (ಆಕಾಶ್), ಸಿಹಿ ಗಾಳಿ ಸಿಹಿ ಗಾಳಿ ಸಹಿ ಹಾಕಿದೆ ಮನಸಿನಲಿ (ಆ ದಿನಗಳು)...ಹೀಗೆ ಸೂಪರ್ ಹಿಟ್ ಗೀತೆಗಳನ್ನು ಕೊಟ್ಟಂತಹ ಸಾಹಿತಿ ಕಲ್ಯಾಣ್. ಅವರ ನಿರ್ದೇಶನ ಎಂದ ಮೇಲೆ ಸಹಜವಾಗಿ ಕುತೂಹಲ ಇದ್ದೇ ಇರುತ್ತದೆ.
ಈ ಹಿಂದೊಮ್ಮೆ ಅವರು ಮಾತನಾಡುತ್ತಾ, ಚೊಚ್ಚಲ ಚಿತ್ರವಾದ ಕಾರಣ ಹೆಚ್ಚಿನ ಕಾಳಜಿ ವಹಿಸುತ್ತಿದ್ದೇನೆ.ಸಂಗೀತ ನಿರ್ದೇಶಕನಾಗಿ ಈಗಾಗಲೆ ಯಶಸ್ಸು ಕಂಡಿದ್ದೇನೆ. ಚಿತ್ರನಿರ್ದೇಶನದಲ್ಲೂ ಗೆಲ್ಲಬೇಕೆಂಬ ಆಸೆ ಇದೆ " ಎಂದಿದ್ದರು. (ಏಜೆನ್ಸೀಸ್)