Don't Miss!
- Technology ಅಗ್ಗದ ದರದಲ್ಲಿ 5G ಫೋನ್ ಖರೀದಿಸಬೇಕೆ?..ಈ ಆಫರ್ ಮಿಸ್ ಮಾಡ್ಕೋಬೇಡಿ!
- Automobiles Kia: ಬಹುನಿರೀಕ್ಷಿತ ಕಿಯಾ ಕ್ಲಾವಿಸ್ ಮೈಕ್ರೋ ಎಸ್ಯುವಿ ಶೀಘ್ರದಲ್ಲೇ ಬಿಡಗಡೆ
- News ಚಾಮರಾಜನಗರ ಜಿಲ್ಲೆಯ ಹಲವು ಗ್ರಾಮಗಳ ಜನರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ-ಇವರ ಬೇಡಿಕೆ ಏನು ಗೊತ್ತಾ?
- Finance Bullet train: ಮೇಡ್ ಇನ್ ಇಂಡಿಯಾ ಬುಲೆಟ್ ಟ್ರೈನ್ಗೆ ಶೀಘ್ರ ಚಾಲನೆ, ಗಂಟೆಗೆ 250 ವೇಗ
- Lifestyle ಬೇಸಿಗೆಯಲ್ಲಿ ದಿನಾ ಎಳನೀರು ಕುಡಿದರೆ ಏನಾಗುತ್ತೆ? ಯಾವ ಸಮಯದಲ್ಲಿ ಎಳನೀರು ಕುಡಿಯಬೇಕು?
- Sports India's Squad For T20 World Cup: ಟಿ20 ವಿಶ್ವಕಪ್ಗೆ ಸಂಭಾವ್ಯ 20 ಸದಸ್ಯರ ಭಾರತ ತಂಡ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗೆಲುವಿನೊಂದಿಗೆ ಟೂರ್ನಿಗೆ ವಿದಾಯ ಹೇಳಿದ ಸುದೀಪ್ ಬಾಯ್ಸ್
ಕೆಸಿಸಿ ಟೂರ್ನಿಯಲ್ಲಿ ಗೆಲುವಿನ ಫೇವರೆಟ್ ಎನಿಸಿಕೊಂಡಿದ್ದ ಸುದೀಪ್ ನೇತೃತ್ವದ 'ಕದಂಬ ಲಯನ್ಸ್' ತಂಡ ಟೂರ್ನಿಯಿಂದ ಹೊರಬಿದ್ದಿದೆ. ಆಡಿದ ಎರಡು ಪಂದ್ಯಗಳಲ್ಲಿ ಒಂದು ಪಂದ್ಯವನ್ನ ಸೋತು, ಇನ್ನೊಂದು ಪಂದ್ಯವನ್ನ ಗೆದ್ದು ಗೆಲುವಿನೊಂದಿಗೆ ಟೂರ್ನಿಗೆ ವಿದಾಯ ಹೇಳಿದೆ.
ಉಪೇಂದ್ರ ಅವರ ಹೊಯ್ಸಳ ಈಗಲ್ಸ್ ತಂಡದ ವಿರುದ್ಧ ಎರಡನೇ ಪಂದ್ಯವನ್ನಾಡಿದ 'ಕದಂಬ ಲಯನ್ಸ್' 23 ರನ್ ಗಳಿಂದ ಪಂದ್ಯವನ್ನ ಗೆದ್ದುಕೊಂಡಿದ್ದಾರೆ.
'ಅಪ್ಪು' ಬಳಗವನ್ನ ಸೋಲಿಸಿ ಫೈನಲ್ ಗೆ ಲಗ್ಗೆಯಿಟ್ಟ ಯಶ್ 'ವಾರಿಯರ್ಸ್'
ಮೊದಲು ಬ್ಯಾಟ್ ಮಾಡಿದ ಕದಂಬ ಲಯನ್ಸ್, 10 ಓವರ್ ನಲ್ಲಿ 2 ವಿಕೆಟ್ ಕಳೆದುಕೊಂಡ 117 ರನ್ ಕೂಡಿ ಹಾಕಿದರು. 17 ಎಸೆತದಲ್ಲಿ 46 ಸಿಡಿಸಿ ಸೆಹ್ವಾಗ್ ಮಿಂಚಿದರೆ, ಸೆಹ್ವಾಗ್ ಗೆ ಉತ್ತಮ ಸಾಥ್ ನೀಡಿದ ಪ್ರದೀಪ್ 27 ಎಸೆತಗಳಲ್ಲಿ 37 ಬಾರಿಸಿ, ಹೊಯ್ಸಳ ಈಗಲ್ಸ್ ತಂಡಕ್ಕೆ 118 ರನ್ ಗುರಿ ನೀಡಿದರು.
ಫೈನಲ್ ಹಂತ ತಲುಪಿದ ಮೊದಲ ತಂಡವಾದ ಗಣೇಶ್ ಟೀಂ
ಕದಂಬ ಲಯನ್ಸ್ ನೀಡಿದ ಗುರಿಯನ್ನ ಬೆನ್ನತ್ತಿದ ಉಪೇಂದ್ರ ಅವರ ಈಗಲ್ಸ್ ತಂಡಕ್ಕೆ ಹರ್ಷಲ್ ಗಿಬ್ಸ್ ಉತ್ತಮ ಆರಂಭ ನೀಡಿದರು. ಆದ್ರೆ, 19 ಎಸೆತಗಳಲ್ಲಿ 35 ಗಳಿಸಿದ್ದಾಗ ಗಿಬ್ಸ್ ಔಟ್ ಆದರು. ಅಲ್ಲಿಂದ ಹೊಯ್ಸಳ ಈಗಲ್ಸ್ ಸೋಲಿನ ಕಡೆ ಮುಖ ಮಾಡಿತು. ಅಂತಿಮವಾಗಿ ನಿಗದಿತ 10 ಓವರ್ ಗಳಲ್ಲಿ 97 ರನ್ ಹೊಡೆಯಲು ಮಾತ್ರ ಸಾಧ್ಯವಾಯಿತು. ಈಗಲ್ಸ್ ಪರವಾಗಿ ಗಿಬ್ಸ್ 35, ಪ್ರಶಾಂತ್ 17 ಬಾರಿಸಿ ಗಮನ ಸೆಳೆದರು.
'ಕದಂಬ ಲಯನ್ಸ್' ಪರವಾಗಿ ಅರ್ಜುನ್ ಎರಡು ವಿಕೆಟ್ ಕಬಳಿಸಿ ಈಗಲ್ಸ್ ಗೆ ಬ್ರೇಕ್ ಹಾಕಿದರು. ಇಲ್ಲಿಗೆ ಒಂದು ಪಂದ್ಯವನ್ನ ಗೆಲ್ಲುವ ಮೂಲಕ ಸುದೀಪ್ ತಂಡ ಕೆಸಿಸಿ ಎರಡನೇ ಆವೃತ್ತಿಗೆ ವಿದಾಯ ಹೇಳಿದೆ.
ಇನ್ನು ಈ ಟೂರ್ನಿಯಲ್ಲಿ ಗೆಲವನ್ನೇ ಕಾಣದೇ ಉಪೇಂದ್ರ ಸಾರಥ್ಯದ ಹೊಯ್ಸಳ ತಂಡವೂ ಟೂರ್ನಿಯಿಂದ ಹೊರಬಿದ್ದಿದೆ. ಇಂದು ರಾತ್ರಿ 8.15 ಗಂಟೆಗೆ ಗೋಲ್ಡನ್ ಸ್ಟಾರ್ ಸಾರಥ್ಯದ 'ಒಡೆಯರ್ ಚಾರ್ಜರ್ಸ್' ಮತ್ತು ಯಶ್ ಅವರ ರಾಷ್ಟ್ರಕೂಟ ಪ್ಯಾಂಥರ್ಸ್ ಫೈನಲ್ ಆಡಲಿದೆ.