Don't Miss!
- News ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನೇ ಗುರಿಯಾಗಿಸಿ ಐಟಿ ದಾಳಿ : ಡಿ ಕೆ ಶಿವಕುಮಾರ್ ಏನಂದ್ರು?
- Technology Poco: ವಿಶೇಷ ಟ್ಯಾಬ್ಲೆಟ್ ಲಾಂಚ್ ಮಾಡಲು ಸಿದ್ಧವಾಗ್ತಿದೆ ಪೊಕೊ! ಸಖತ್ ಸ್ಟೈಲಿಶ್..
- Lifestyle ರುಚಿ ರುಚಿಯ ಸ್ಪೆಷಲ್ ಅಂಬೂರ್ ಬಿರಿಯಾನಿ ಮಾಡಿ ನೋಡಿ..! ಇಲ್ಲಿದೆ ರೆಸಿಪಿ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Automobiles ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
‘ಕಳ್ಳ ಪೊಲೀಸ್’ನಲ್ಲಿ 11 ಮಂದಿ ನಾಯಕರು
ಹಲವು ವರ್ಷಗಳ ಹಿಂದೆ ಬಿಡುಗಡೆಯಾದ ಕಳ್ಳ - ಮಳ್ಳ ಚಿತ್ರದಲ್ಲಿ ಶಶಿಕುಮಾರ್, ಶ್ರೀಧರ್ ನಾಯಕರಾಗಿದ್ದರಾದರೂ ದೊಡ್ಡಣ್ಣ ಹಾಗೂ ಜಗ್ಗೇಶ್ ಚಿತ್ರದ ಟೈಟಲ್ನಲ್ಲೇ ಹೀರೋಗಳಾಗಿ ಮಿಂಚಿದರು. ಈ ಇಬ್ಬರಿಗೂ ಬ್ರೇಕ್ ಕೊಟ್ಟ ಚಿತ್ರವೂ ಅದೇ. ಕಳ್ಳ ಮಳ್ಳ ಬಳಿಕ ಮತ್ತೆ ದೊಡ್ಡ ದೇಹದ ದೊಡ್ಡಣ್ಣ ನಾಯಕರಾಗುತ್ತಿದ್ದಾರೆ.
ತೆಲುಗಿನಲ್ಲಿ ತಯಾರಾದ ಅಲಿಬಾಬ - ಅರೆ ಡಜನ್ ದೊಂಗಾಲು ಚಿತ್ರದ ಕಥಾವಸ್ತುವನ್ನೇ ಇಟ್ಟುಕೊಂಡು ತಯಾರಿಸುತ್ತಿರುವ ಅರ್ಥಾತ್ ರೀಮೇಕ್ ಮಾಡುತ್ತಿರುವ ಕನ್ನಡ ಚಿತ್ರದಲ್ಲಿ ಹತ್ತಿರ ಹತ್ತಿರ ಹನ್ನೊಂದು ಮಂದಿ ನಾಯಕರಿದ್ದಾರೆ. ಈ ಚಿತ್ರಕ್ಕೆ ಕಳ್ಳ ಪೊಲೀಸ್ ಎಂದೂ ಹೆಸರಿಡಲಾಗಿದೆ.
ತೆಲುಗಿನ ನಿರ್ದೇಶಕ ಇ.ವಿ. ಸತ್ಯನಾರಾಯಣ ಅವರ ಕಥೆಯುಳ್ಳ ಕನ್ನಡ ಚಿತ್ರದಲ್ಲೂ 6 ಜನ ಕಳ್ಳರಿದ್ದಾರೆ. ಈ ಆರು ಮಂದಿ ಯಾರು ಯಾರಿಗೆ ಹೇಗೆ ವಂಚಿಸುತ್ತಾರೆ ಎಂಬ ಹಾಸ್ಯ ಸನ್ನಿವೇಶಗಳೇ ಕಥೆಯ ಮುಖ್ಯ ಕಥಾವಸ್ತು. ಅಂದರೆ ಇದೊಂದು ಹಾಸ್ಯಮಯ ಚಿತ್ರ.
ಹೀಗಾಗಿ ಈ ಚಿತ್ರದಲ್ಲಿ ಕನ್ನಡದ ಎಲ್ಲ ಹಾಸ್ಯ ನಟರನ್ನೂ ಒಂದು ಕಡೆ ಸೇರಿಸಲಾಗಿದೆ. ದೊಡ್ಡಣ್ಣ, ಹೊನ್ನವಳ್ಳಿ ಕೃಷ್ಣ, ಟೆನ್ನಿಸ್ ಕೃಷ್ಣ, ಉಮೇಶ್, ಬಿರಾದಾರ್, ಕರಿಬಸವಯ್ಯ... ಹೀಗೆ ನಾಯಕರ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತದೆ. ಚಿತ್ರಕ್ಕೆ ರಿಯಲ್ ನಾಯಕ ರಾಜೇಂದ್ರ. ತೆಲುಗು ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರ ಮಾಡಿ ಅನುಭವ ಹೊಂದಿರುವ ರಾಜೇಂದ್ರ ಚಿತ್ರ ವಿತರಣೆಯಲ್ಲಿ ಅಪಾರ ಅನುಭವ ಪಡೆದಿದ್ದಾರೆ. ಈ ಚಿತ್ರದ ನಿರ್ಮಾಪಕರಲ್ಲಿ ಇವರೂ ಒಬ್ಬರು.
ರಾಜೇಂದ್ರ ಪ್ರಕಾರ ಈ ಚಿತ್ರಕ್ಕೆ ಅವರೊಬ್ಬರೇ ನಾಯಕರಲ್ಲ. ಹೊನ್ನವಳ್ಳಿ, ದೊಡ್ಡಣ್ಣ ಇತ್ಯಾದಿ ಹತ್ತು ಜನರೂ ಯಾವುದೇ ನಾಯಕರಿಗೆ ಕಡಿಮೆ ಇಲ್ಲವಂತೆ. ಈ ಎಲ್ಲರೂ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಾರಂತೆ. ಅಂದಹಾಗೆ ಚಿತ್ರದಲ್ಲಿ ಇಬ್ಬರು ಹೀರೋಯಿನ್ಗಳೂ ಇದ್ದಾರೆ. ಈ ಇಬ್ಬರ ನಡುವೆ ನಾಯಕ ರಾಜೇಂದ್ರ ವಿಲಿವಿಲಿ ಒದ್ದಾಡುತ್ತಾನೆ. ನರಳುತ್ತಾನೆ.
ರಾಜೇಂದ್ರನ ಕಾಡುವ ನಾಯಕಿಯರು ಯಾರು ಗೊತ್ತೆ. 1. ರುಚಿತಾ ಪ್ರಸಾದ್ 2. ಸ್ವರ್ಣ. ಚಿತ್ರದ ನಿರ್ದೇಶಕ ದಾಸ್. ಈಗಾಗಲೇ ಚಿತ್ರದ ಚಿತ್ರೀಕರಣ ಬಹುಪಾಲು ಮುಕ್ತಾಯವಾಗಿದೆ. ಒಂದು ತಿಂಗಳ ಅವಧಿಯಲ್ಲೇ ಚಿತ್ರವನ್ನು ರಜತ ಪರದೆಯ ಮೇಲೆ ಪರೀಕ್ಷೆಗೆ ಒಡ್ಡುವ ಪ್ರಯತ್ನಗಳು ಸಾಗಿವೆ. ಚಿತ್ರ ನಗಿಸುತ್ತದೋ, ನಗೆಪಾಟಲಿಗೆ ಈಡಾಗುತ್ತದೋ ಕಾದು ನೋಡೋಣ.