ಸಿನಿಮಾ ಮತ್ತು ಧರ್ಮ-ಸಂಸ್ಕೃತಿ ಬಗ್ಗೆ ಕಲ್ಲಡ್ಕ ಪ್ರಭಾಕರ್ ಭಟ್ಟ ಮಾತು
ಧರ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳುವಲ್ಲಿ ಸಿನಿಮಾಗಳ ಪಾತ್ರ ಮಹತ್ತರವಾದದ್ದು, ಅದಲ್ಲದೇ ಚಲನಚಿತ್ರಗಳು ಧರ್ಮ ಸತ್ವವನ್ನು ಉಳಿಸಿಕೊಳ್ಳುವಂತ ಕಾರ್ಯವನ್ನು ಬೆಳೆಸಿಕೊಳ್ಳಬೇಕಾಗಿದೆ ಎಂದು ಪುತ್ತೂರು ಶ್ರೀ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.
ಉಪ್ಪಿನಂಗಡಿಯ ಮಹಾಕಾಳಿ ಮೆಚ್ಚಿ ಜಾತ್ರೆಯ ಸಂದರ್ಭದಲ್ಲಿ ದೇವಸ್ಥಾನದ ಸಭಾಂಗಣದಲ್ಲಿ ನಡೆದ ವಿಕ್ರಾಂತ್ ತುಳು ಸಿನಿಮಾದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಆಡಿಯೋ ಬಿಡುಗಡೆ ಮಾಡಿ ಮಾತನಾಡಿದ ಅವರು, ಧರ್ಮದ ಪ್ರತಿಷ್ಠಾಪನೆಗಾಗಿ ವಿಕ್ರಾಂತ್ ಸಿನಿಮಾವು ಮಾದರಿಯಾಗಲೀ ಎಂದರು.
ಮಣ್ಣನ ಸತ್ವ, ತತ್ವ ಏನು ಎಂದು ಬಿಂಬಿಸುವ ತುಳು ಚಲನಚಿತ್ರ, ಇಂದಿನ ವಿಕಾರ ಪರಿಸ್ಥಿತಿಯಲ್ಲಿ ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತ ಈ ತುಳು ಚಲನಚಿತ್ರವನ್ನು ರಚಿಸಿದ ತಂಡವನ್ನು ಅಭಿನಂದಿಸುವುದಾಗಿ ಹೇಳಿದ ಅವರು, ಇಂದಿನ ಆಧುನಿಕ ಯುಗದಲ್ಲಿ ಕುಟುಂಬ ಸಮೇತ ನೋಡುವಂತಹ ಸಿನಿಮಾ ಇದಾಗಲಿ, ಯಶಸ್ಸು ಕಾಣಲಿ ಎಂದು ಅವರು ಶುಭಹಾರೈಸಿದರು.

ಈ ಸಂದರ್ಭದಲ್ಲಿ ಚಲಚಿತ್ರ ನಿರ್ಮಾಪಕರಾದ ರಾಜೇಂದ್ರ ಯಶು ಬೆದ್ರೋಡಿ, ಚಲನಚಿತ್ರ ನಿರ್ದೇಶಕಾದ ನವೀನ್ ಮಾರ್ಲ ಕೊಡಂಗೆ, ಸಾಹಿತ್ಯ , ಸಂಗೀತ ನಿರ್ದೇಶಕ ಭಾಸ್ಕರ್ ರಾವ್ ಬಿಸಿ ರೋಡ್, ಉದ್ಯಮಿಗಳಾದ ರವಿ ಕಕ್ಕೆಪದವು ಹಾಗೂ ಸಹಸ್ರಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಸಹಕಾರದೊಂದಿಗೆ ಆಡಿಯೋ ಕಾರ್ಯಕ್ರಮ ನೆರವೇರಿತು.
Recommended Video
ಏಪ್ರಿಲ್ 23ಕ್ಕೆ ಚಲನಚಿತ್ರ ಬಿಡುಗಡೆಯಾಗಲಿದ್ದು, ಸಿನಿಮಾವನ್ನು ಚಿತ್ರಮಂದಿರಗಳಲ್ಲಿಯೇ ವೀಕ್ಷಿಸುವಂತೆ ಚಿತ್ರ ತಂಡವು ಮನವಿ ಮಾಡಿಕೊಂಡಿತು.


Click it and Unblock the Notifications











