Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆರ್ಥಿಕ ಬಿಕ್ಕಟ್ಟಿನಲ್ಲಿ ಕಮಲ್ ಹಾಸನ್ 'ಉತ್ತಮ ವಿಲನ್'
ಕಮಲ್ ಹಾಸನ್ ಚಿತ್ರಗಳಿಗೆ ಒಂದಲ್ಲ ಒಂದು ವಿಘ್ನಗಳು ಎದುರಾಗುತ್ತಲೇ ಇವೆ. ಅವರ ಹಿಂದಿನ ಚಿತ್ರಗಳೂ ಇದೇ ರೀತಿ ವಾದ ವಿವಾದ, ವಿಘ್ನಗಳನ್ನು ಎದುರಿಸಿದ್ದವು. ಇದೀಗ ಬಿಡುಗಡೆಗೆ ಸಜ್ಜಾಗಿರುವ ಉತ್ತಮ ವಿಲನ್ ಚಿತ್ರಕ್ಕೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಸುದ್ದಿ ಬಂದಿದೆ.
ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಏಕಕಾಲಕ್ಕೆ ಈ ಚಿತ್ರ ಮೇ 1ರಂದು ಬಿಡುಗಡೆಯಾಗುತ್ತಿದ್ದು, ಈ ಚಿತ್ರದ ನಿರ್ಮಾಪಕರು ಸಾಲದ ಸುಳಿಗೆ ಸಿಲುಕಿದ್ದು ಚಿತ್ರ ಬಿಡುಗಡೆಯಾಗುವುದು ಅನುಮಾನ ಎನ್ನುತ್ತವೆ ಮೂಲಗಳು. [ಕಮಲ್ ಹಾಸನ್ 'ಉತ್ತಮ ವಿಲನ್' ರಿಲೀಸ್ ಊರ್ಜಿತ]
ಈ ಚಿತ್ರದ ತೆಲುಗು ಅವತರಣಿಕೆ ವಿತರಣೆ ಹಕ್ಕುಗಳನ್ನು ಪಡೆದಿರುವ ಸಿ ಕಲ್ಯಾಣ್ ಎಂಬುವವರು ಮೇ 1ರಂದು ಚಿತ್ರವನ್ನು ತೆರೆಗೆ ತರಲು ಸಿದ್ಧವಾಗಿದ್ದಾರೆ. ಆದರೆ ಈ ಚಿತ್ರಕ್ಕೆ ಹಣಹೂಡಿರುವವರು ಏಪ್ರಿಲ್ 30ರೊಳಗೆ ತಮಗೆ ಕೊಡಬೇಕಾದ ಬಾಕಿ ಹಣ ಕೊಡಿ ಇಲ್ಲದಿದ್ದರೆ ಚಿತ್ರ ಬಿಡುಗಡೆಗೆ ಅವಕಾಶ ಕೊಡಲ್ಲ ಎಂದಿದ್ದಾರೆ.
ಮೇ 1ರಂದು ಬಿಗ್ ಬಜೆಟ್ ನ ತೆಲುಗು ಚಿತ್ರಗಳು ತೆರೆಗೆ ಅಪ್ಪಳಿಸಲು ಸಜ್ಜಾಗಿವೆ. ಅವುಗಳ ಮುಂದೆ 'ಉತ್ತಮ ವಿಲನ್'ಗೆ ಥಿಯೇಟರ್ ಸಮಸ್ಯೆ, ಸ್ಪರ್ಧೆ ಎದುರಿಸುವುದು ಕಷ್ಟವಾಗಬಹುದು ಎಂದು ಸಿನಿ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.
ಚಿತ್ರ ಬಿಡುಗಡೆಯಾಗುತ್ತದೋ ಇಲ್ಲವೋ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಕೊನೆ ಕ್ಷಣದಲ್ಲಿ ಎಲ್ಲವೂ ಸೆಟ್ಲ್ ಆದರೆ ಮೇ 1ರಂದೇ 'ಉತ್ತಮ ವಿಲನ್' ತೆರೆಗೆ ಬರಲೂ ಬಹುದು. ಎಂಟನೇ ಶತಮಾನದಲ್ಲಿದ್ದ ಉತ್ತಮನ್ ಎಂಬ ರಂಗಭೂಮಿ ಕಲಾವಿದನ ಹಾಗೂ 21ನೇ ಶತಮಾನಕ್ಕೆ ಸೇರಿದ ಮನೋರಂಜನ್ ಎಂಬ ಸಿನಿಮಾ ಸೂಪರ್ ಸ್ಟಾರ್ ಪಾತ್ರಗಳಲ್ಲಿ ಕಮಲ್ ಕಾಣಿಸಲಿದ್ದಾರೆ.
ಈ ಎರಡೂ ಪಾತ್ರಗಳಲ್ಲಿ ಕಮಲ್ ಹಾಸನ್ ಪ್ರೇಕ್ಷಕರನ್ನು ಮೈಮರೆಸಲಿದ್ದಾರೆ. ಕಮಲ್ ಜೊತೆಗೆ ದಕ್ಷಿಣ ಭಾರತದ ಇನ್ನೂ ನಾಲ್ಕು ಮಂದಿ ಜನಪ್ರಿಯ ಹೀರೋಗಳು ಚಿತ್ರದಲ್ಲಿರುವುದು ವಿಶೇಷ. ಖ್ಯಾತ ನಿರ್ದೇಶಕ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಕೆ ಬಾಲಚಂದರ್ ಸಹ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.