Don't Miss!
- News ಲೋಕಸಭಾ ಚುನಾವಣೆಯಲ್ಲಿ ಕೊಡಗಿನಲ್ಲಿ ಮತ್ತೆ ‘ಕೈ’ ಕಮಾಲ್?: ಒಂದಷ್ಟು ನಾಯಕರು ಮೌನವಾಗಿದ್ದೇಕೆ?
- Lifestyle ಗ್ರಹಣ ಕಾಲದಲ್ಲಿ ಆಹಾರ ಸೇವಿಸಬಾರದೇಕೆ.? ಹಿರಿಯರ ವಾದವೇನು..?
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Finance ಆದಾಯ ತೆರಿಗೆ ಇಲಾಖೆಯಿಂದ ಕಾಂಗ್ರೆಸ್ಗೆ 1,823 ಕೋಟಿ ರೂ. ನೋಟಿಸ್: ತೆರಿಗೆ ಭಯೋತ್ಪಾದನೆ ನಿಲ್ಲಲೇಬೇಕು ಎಂದ ಪಕ್ಷ
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜನಜಂಗುಳಿಯಲ್ಲಿ ನಡೆಯಲಿದೆ 'ಕನಕ'ನ ಫೋಟೋಶೂಟ್
ದುನಿಯಾ ವಿಜಯ್ ಹಾಗೂ ಆರ್.ಚಂದ್ರು ಕಾಂಬಿನೇಷನ್ ನಲ್ಲಿ 'ಕನಕ' ಚಿತ್ರ ತಯಾರಾಗುತ್ತಿರುವ ಸುದ್ದಿ ನಿಮಗೆ ತಿಳಿದಿದೆ. ಈಗಾಗಲೇ ಮುಹೂರ್ತ ಮುಗಿಸಿರುವ 'ಕನಕ' ಚಿತ್ರತಂಡ, ಸದ್ಯದಲ್ಲೇ ಒಂದು ಸ್ಪೆಷಲ್ ಫೋಟೋಶೂಟ್ ಗೆ ಚಾಲನೆ ನೀಡಲಿದೆ.
ಸಾಮಾನ್ಯವಾಗಿ ಫೋಟೋಶೂಟ್ ನಡೆಯುವುದು ಸ್ಟುಡಿಯೋದಲ್ಲಿ. ಆದ್ರೆ, 'ಕನಕ'ನ ಫೋಟೋಶೂಟ್ ಎಂದಿನಂತೆ ಸ್ಟುಡಿಯೋದಲ್ಲಿ ನಡೆಯುವುದಿಲ್ಲ. ಬದಲಾಗಿ ಜನನಿಬಿಡ ಪ್ರದೇಶಗಳಲ್ಲಿ ನಡೆಯುತ್ತೆ.[ಅಣ್ಣಾವ್ರ ಅಭಿಮಾನಿ 'ಕನಕ' ಸಾಂಗ್ ರೆಕಾರ್ಡಿಂಗ್ ಆರಂಭ]
ಹೇಳಿ ಕೇಳಿ, 'ಕನಕ' ಆಟೋ ಡ್ರೈವರ್. ಅದರಲ್ಲೂ ಡಾ.ರಾಜ್ ಅಭಿಮಾನಿ. ಹೀಗಾಗಿ, ನಗರದ ಕೆಲ ಜನಜಂಗುಳಿ ಇರುವ ಆಟೋ ಸ್ಟ್ಯಾಂಡ್ ಗಳಲ್ಲಿ ಫೋಟೋಶೂಟ್ ನಡೆಸಲು ನಿರ್ದೇಶಕ ಆರ್.ಚಂದ್ರು ತೀರ್ಮಾನಿಸಿದ್ದಾರೆ. ಇದಕ್ಕೆ ಆಟೋ ಡ್ರೈವರ್ 'ಕನಕ' ಪಾತ್ರ ನಿರ್ವಹಿಸುತ್ತಿರುವ ದುನಿಯಾ ವಿಜಯ್ ಕೂಡ ಸಮ್ಮತಿ ಕೊಟ್ಟಿದ್ದಾರೆ.[ದುನಿಯಾ ವಿಜಯ್ ಹುಟ್ಟುಹಬ್ಬ: ಬಡವರಿಗೆ 'ಕನಕ'ನ ಕಾಣಿಕೆ]
ಈಗಾಗಲೇ ಆಟೋ ಡ್ರೈವರ್ ಗಳ ಮಾತಿನ ಶೈಲಿ ಹಾಗೂ ಮ್ಯಾನರಿಸಂಗಳನ್ನ ಸೂಕ್ಷ್ಮವಾಗಿ ಗಮನಿಸಿರುವ ದುನಿಯಾ ವಿಜಯ್ 'ಆಟೋ' ಓಡಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಎಲ್ಲವೂ ಪ್ಲಾನ್ ಪ್ರಕಾರ ನಡೆದರೆ, ಇನ್ನು ಕೆಲವೇ ದಿನಗಳಲ್ಲಿ 'ಕನಕ' ಫೋಟೋಶೂಟ್ ನಡೆಯಲಿದೆ. ಅದಾದ ಬಳಿಕ ಶೂಟಿಂಗ್ ಶುರು....