ಗೌರಿ ಲಂಕೇಶ್ ನಿಧನಕ್ಕೆ ಸಂತಾಪ ಸೂಚಿಸಿದ 'ಕನಕ' ಚಿತ್ರತಂಡ
ಹಿರಿಯ ಪತ್ರಕರ್ತೆ, ಚಿಂತಕಿ, ಲಂಕೇಶ್ ಪತ್ರಿಕೆ ಸಂಪಾದಕಿ ಗೌರಿ ಲಂಕೇಶ್(55) ಅವರ ನಿಧನಕ್ಕೆ 'ಕನಕ' ಚಿತ್ರತಂಡ ಸಂತಾಪ ಸೂಚಿಸಿದೆ. ನಟ ದುನಿಯಾ ವಿಜಯ್, ನಿರ್ದೇಶಕ ಆರ್ ಚಂದ್ರು ಸೇರಿದಂತೆ ಇಡೀ ಚಿತ್ರತಂಡ ಮೌನಾಚರಣೆ ಮಾಡುವ ಮೂಲಕ ಗೌರಿ ಲಂಕೇಶ್ ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
''ಹಿರಿಯ ಪತ್ರಕರ್ತೆ ವಿಚಾರವಾದಿ ಚಿಂತಕಿ ಗೌರಿ ಲಂಕೇಶ್ ಆತ್ಮಕ್ಕೆ ಶಾಂತಿ ಸಿಗಲಿ. ಕೊಲೆಗಡುಕರಿಗೆ ಶಿಕ್ಷೆಯಾಗಲಿ. ವಿಚಾರವಾದಿಗಳನ್ನ ಕೊಲ್ಲಬಹುದು, ವಿಚಾರಗಳನ್ನಲ್ಲ. ಸತ್ಯಕ್ಕೆ ಸಾವಿಲ್ಲ'' ಎಂದು ನಟ ದುನಿಯಾ ವಿಜಯ್ ಹೇಳಿದ್ದಾರೆ.

ಆರ್.ಚಂದ್ರು ನಿರ್ದೇಶನದ 'ಕನಕ' ಸಿನಿಮಾ ಸದ್ಯ ಮೇಲುಕೋಟೆಯಲ್ಲಿ ಅಂತಿಮ ಹಂತದ ಚಿತ್ರೀಕರಣ ಮಾಡುತ್ತಿದೆ. ದುನಿಯಾ ವಿಜಯ್ ನಾಯಕನಾಗಿರುವ ಈ ಚಿತ್ರದಲ್ಲಿ ಹರಿಪ್ರಿಯಾ ಮತ್ತು ಮಾನ್ವಿತಾ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ: ಗಣ್ಯರು ಏನಂತಾರೆ?
ವಿಡಿಯೋ ನೋಡಿ
More from Filmibeat
English summary
Duniya vijay Starrer Kanaka Team mourn for the death of Veteran Journalist Gauri Lankesh. The Movie Directed by R Chandru.


Click it and Unblock the Notifications











