Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಕಾವೇರಿ ಕೂಗಿಗೆ' ಧ್ವನಿ ಗೂಡಿಸಿದ ಕಂಗನಾ, ತಮನ್ನಾ, ಕಾಜಲ್
Recommended Video
'ಕಾವೇರಿ ಕೂಗು' (Cauvery Calling) ಅಭಿಯಾನಕ್ಕೆ ದೊಡ್ಡ ಪ್ರತಿಕ್ರಿಯೆ ಸಿಗುತ್ತಿದೆ. ಈಶ ಪೌಂಡೇಷನ್ ಆಯೋಜನೆ ಮಾಡಿರುವ ಈ ಅಭಿಯಾನಕ್ಕೆ ಸಿನಿಮಾ ಕಲಾವಿದರು ಬೆಂಬಲ ನೀಡಿದ್ದಾರೆ.
ಬರೀ ಕನ್ನಡದ ಸ್ಟಾರ್ ಗಳು ಮಾತ್ರವಲ್ಲದೆ ಇತರ ಭಾಷೆಯ ನಟಿಯರು ಸಹ ಕಾವೇರಿ ಕೂಗಿಗೆ ಧ್ವನಿಯಾಗಿದ್ದಾರೆ. ನಟಿ ಕಾಜಲ್ ಅಗರ್ವಾಲ್, ತಮನ್ನಾ ಭಾಟಿಯಾ, ಬಾಲಿವುಡ್ ನಟಿ ಕಂಗನಾ ರಣಾವತ್ ಈ ಬಗ್ಗೆ ಮಾತನಾಡಿದ್ದಾರೆ.
ಸಿಂಗಲ್ ಟೇಕ್ ಹಾಡಿನಲ್ಲಿ 'ಕ್ವೀನ್' ಬೆಡಗಿಯರು
''ನೀರು ಬಹು ಅಮೂಲ್ಯವಾದದ್ದು. ಆದರೆ, 2020ರ ಒಳಗೆ ಭಾರತದ 21 ನಗರಗಳಲ್ಲಿ ನೀರಿನ ಸಮಸ್ಯೆ ಉಂಟಾಗುತ್ತದೆ. ಚೆನ್ನೈನಲ್ಲಿ 2019ರಲ್ಲಿಯೇ ನೀರಿನ ಸಮಸ್ಯೆ ಎದುರಾಗಿದೆ. ಮುಂದೆ ಬೆಂಗಳೂರಿಗೆ ಇದೇ ಸ್ಥಿತಿಗೆ ಬರುತ್ತದೆ. ಈ ಸಮಸ್ಯೆಗೆ ಪರಿಹಾರ ನಮ್ಮ ಕೈನಲ್ಲಿ ಇದೆ. ನಾವು ಮರಗಳನ್ನು ಬೆಳೆಸಬೇಕಾಗಿದೆ.'' ಎಂದು ನೀರಿನ ಸಮಸ್ಯೆ ಬಗ್ಗೆ ಅರಿವು ಮೂಡಿಸಿದ್ದಾರೆ.
ನೂರು ವರ್ಷದ ಹಿಂದೆ ಬೀಳುತ್ತಿದ್ದ ಮಳೆಯ ಪ್ರಮಾಣ ಈಗೇನೂ ಕಡಿಮೆ ಆಗಿಲ್ಲ. ಆದರೆ, ಮಳೆಯಿಂದ ಬಿದ್ದ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಭೂಮಿಯಲ್ಲಿ ಇಲ್ಲ. ಹೀಗಾಗಿ ಪಶ್ಚಿಮಫಟ್ಟದಲ್ಲಿ ಭೂಕುಸಿತ ಆಗುತ್ತಿದೆ. ಎಂದು ಸದ್ಗುರು ಹೇಳಿದ್ದಾರೆ.ಕಾವೇರಿ ಉಳಿವಿಗೆ ಈ ಮಹಾ ಅಭಿಯಾನ ಶುರು ಮಾಡಿದ್ದಾರೆ
'ಕಾವೇರಿ ಕೂಗು' ಅಭಿಯಾನಕ್ಕೆ ನಟ ಉಪೇಂದ್ರ, ಪುನೀತ್ ರಾಜ್ ಕುಮಾರ್, ರಕ್ಷಿತ್ ಶೆಟ್ಟಿ, ದಿಗಂತ್, ನಟಿ ಸುಹಾಸಿನಿ, ಪ್ರಣಿತಾ, ರಾಗಿಣಿ ದ್ವಿವೇದಿ, ಶ್ರೀನಿಧಿ ಶೆಟ್ಟಿ ಸೇರಿದಂತೆ ಅನೇಕರು ಬೆಂಬಲ ನೀಡಿದ್ದಾರೆ.
ಕಂಗಾನ, ತಮನ್ನಾ ಹಾಗೂ ಕಾಜಲ್ ರನ್ನು ಮೂವರು 'ಕ್ವೀನ್' ಎಂದು ಕರೆಯಲಾಗಿದೆ. ಕಂಗಾನ 'ಕ್ವೀನ್' ಚಿತ್ರದಲ್ಲಿ ನಟಿಸಿದ್ದು, ಅದರ ರಿಮೇಕ್ ನಲ್ಲಿ ತಮನ್ನಾ ಮತ್ತು ಕಾಜಲ್ ಕಾಣಿಸಿಕೊಂಡಿದ್ದಾರೆ