ಸಿಎಂ ಪರವಾಗಿ ಪ್ರಚಾರಕ್ಕಿಳಿದ್ರು ಚಾಲೆಂಜಿಂಗ್ ಸ್ಟಾರ್
Recommended Video

ಸುದೀಪ್ ಬದಲು ದರ್ಶನ್ ಬೆಸ್ಟ್ ಅಂದ ಸಿದ್ದರಾಮಯ್ಯ | Oneindia Kannada
ಸಿಎಂ ಸಿದ್ದರಾಮಯ್ಯ ಪರವಾಗಿ ಈ ಬಾರಿ ಸ್ಟಾರ್ ನಾಯಕರು ಪ್ರಚಾರ ಮಾಡಲಿದ್ದಾರೆ. ನಿನ್ನೆಯಿಂದ ಸುದೀಪ್ ಪ್ರಚಾರ ಮಾಡುತ್ತಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು ಆದರೆ ನಾಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿದ್ದರಾಮಯ್ಯ ಅವರಿಗಾಗಿ ಜನರ ಬಳಿ ಮತಯಾಚನೆ ಮಾಡಲಿದ್ದಾರೆ.
ನಾಳೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿರುವ ನಟ ದರ್ಶನ್ ಚಾಮುಂಡೇಶ್ವರಿ ಕ್ಷೇತ್ರದ ಹಲವು ಗ್ರಾಮಗಳಿಗೆ ಭೇಟಿ ನೀಡಿ ರೋಡ್ ಶೋ ಮಾಡಲಿದ್ದಾರೆ .
ಈ ಬಾರಿ ಸಿಎಂ ಸಿದ್ದರಾಮಯ್ಯಗೆ ಕನ್ನಡದ ಸ್ಟಾರ್ ನಟರ ಭರ್ಜರಿ ಕ್ಯಾಂಪೈನ್ ಮಾಡಿಕೊಡಲಿದ್ದಾರೆ.

ದರ್ಶನ್ ಕೂಡ ಸುದೀಪ್ ಹಾಗೂ ಯಶ್ ಅವರಂತೆ ಯಾವುದೇ ಪಕ್ಷದ ಪರವಾಗಿ ಪ್ರಚಾರ ಮಾಡದೆ ವ್ಯಕ್ತಿಗಾಗಿ ಮತಯಾಚನೆ ಮಾಡುತ್ತಾರೆ. ದರ್ಶನ್ ಮೂಲತ ಮೈಸೂರಿನವರೇ ಆದ್ದರಿಂದ ಅವರನ್ನೇ ಬಳಸಿಕೊಂಡು ಪ್ರಚಾರ ಮಾಡಿದರೆ ಉಪಯೋಗವಾಗುತ್ತೆ ಎನ್ನುವ ಲೆಕ್ಕಾಚಾರ ಸಿದ್ದರಾಮಯ್ಯ ಅವರದ್ದು.
ನಾಳೆ ಸಿದ್ದರಾಮಯ್ಯನವರ ಪರ ಪ್ರಚಾರ ಮಾಡಿದ ನಂತರ ದರ್ಶನ್ ನಿರ್ಮಾಪಕ ಮುನಿರತ್ನ ಅವರ ಪರವಾಗಿಯೋ ಮತಯಾಚನೆ ಮಾಡುವ ಸಾಧ್ಯತೆಗಳು ಹೆಚ್ಚಾಗಿವೆ.
More from Filmibeat
English summary
Kannada actor actor Challenging star Darshan will be campaigning for CM Siddaramaiah. Darshan will be campaigning tomorrow in the Chamundeshwari constituency.


Click it and Unblock the Notifications











