ಹಿರಿಯ ನಟ ಹಾಗೂ ಗೀತರಚನೆಕಾರ ಗೋಟೂರಿ ನಿಧನ!
Recommended Video

ಕನ್ನಡ ಚಿತ್ರರಂಗದ ಹಿರಿಯ ನಟ ಹಾಗೂ ಬರಹಗಾರ ಗೋಟೂರಿ ವಿಧಿಶರಾಗಿದ್ದಾರೆ. ನಿನ್ನೆ ಸಂಜೆ ಯಲಹಂಕದ ತಮ್ಮ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಅನೇಕ ವರ್ಷಗಳು ಚಿತ್ರರಂಗದಲ್ಲಿ ಇದ್ದ ಇವರು ಹೆಚ್ಚಾಗಿ ನಟ ಕಾಶೀನಾಥ್ ಅವರ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ. ಉಪೇಂದ್ರ ನಿರ್ದೇಶನದ 'ಶ್' ಚಿತ್ರದಲ್ಲಿ ನಾಯಕಿಯ ತಂದೆಯ ಪಾತ್ರದಲ್ಲಿ ಗೋಟೂರಿ ನಟಿಸಿದ್ದರು.
ಗೋಟೂರಿ ಒಬ್ಬ ನಟನಿಗಿಂತ ಒಬ್ಬ ಬರಹಗಾರನಾಗಿ ಹೆಚ್ಚು ಜನಪ್ರಿಯತೆ ಪಡೆದಿದ್ದಾರೆ. ವಿಷ್ಣುವರ್ಧನ್ ಹಾಗೂ ಸೌಂದರ್ಯ ನಟನೆಯ ದಾಖಲೆ ಸೃಷ್ಟಿಸಿದ 'ಆಪ್ತಮಿತ್ರ' ಚಿತ್ರದ ರಾ.ರಾ.ಹಾಡಿನ ರಚನೆಕಾರ ಕೂಡ ಇವರೇ ಆಗಿದ್ದಾರೆ.

ಜೊತೆಗೆ ಸಂಗೀತ ನಿರ್ದೇಶಕರಾದ ಗುರುಕಿರಣ್ ಹಾಗೂ ವಿ ಮನೋಹರ್ ಅವರ ಸಂಗೀತದಲ್ಲಿ ಹಾಡುಗಳನ್ನು ಬರೆದಿದ್ದಾರೆ. ಓಂ ಸಾಯಿ ಪ್ರಕಾಶ್ ಅವರ ನಿರ್ದೇಶನದಲ್ಲಿ ಬಂದ 'ಆದಿಚುಂಚನಗಿರಿ ಚಿತ್ರಕ್ಕೆ ಕಥೆ ರಚಿಸಿದ್ದರು. 'ಜಯ ಜನಾರ್ಥನ ಕೃಷ್ಣ...'. ಎಂಬ ಜನಪ್ರಿಯ ಗೀತೆಯನ್ನು ಇವರೇ ಬರೆದಿದ್ದಾರೆ.
ವಯೋಸಹಜ ಕಾಯಿಲೆಯಿಂದ ನಿನ್ನೆ ಸಂಜೆ ಗೋಟೂರಿ ವಿಧಿವಶರಾಗಿದ್ದಾರೆ. ಯಲಹಂಕದಲ್ಲಿ ಇವರ ಅಂತ್ಯಸಂಸ್ಕಾರ ನಡೆಯಲಿದೆ.


Click it and Unblock the Notifications











