Don't Miss!
- News ಮಳೆ.. ಮಳೆ.. ಮುಂದಿನ 24 ಗಂಟೆಯಲ್ಲಿ ಭರ್ಜರಿ ಮಳೆ!
- Sports IPL 2024: ಚಹಾಲ್ ಬಿಟ್ಟುಕೊಟ್ಟಿದರ ಬಗ್ಗೆ ಕಾರಣ ತಿಳಿಸಿದ ಆರ್ಸಿಬಿ ಮಾಜಿ ನಿರ್ದೇಶಕ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Lifestyle ಮೊಬೈಲ್ ಬೇಡ..ಗ್ಯಾಜೆಟ್ ಬೇಡ..ಹಸ್ತದಿಂದ ಪೇಮೆಂಟ್ ಮಾಡಿ..! ಇದು ಟಿಜಿಟಲ್ ಕ್ರಾಂತಿ..!
- Automobiles Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಿನಿಮಾದಲ್ಲಿ ಪೂರ್ಣಚಂದ್ರ ತೇಜಸ್ವಿ ಅವರ 'ಕರ್ವಾಲೊ' ಪಾತ್ರ
ಕವಿ ಪೂರ್ಣಚಂದ್ರ ತೇಜಸ್ವಿ ಅವರ ಪುಸ್ತಕಗಳನ್ನು ಓದಿರುವವರನ್ನು '''ತೇಜಸ್ವಿ ಬರೆದ ಪುಸ್ತಕಗಳಲ್ಲಿ ನಿಮ್ಮ ಫೇವರೇಟ್ ಯಾವುದು ?'' ಅಂತ ಕೇಳಿದರೆ ಬಹುಪಾಲು ಉತ್ತರ 'ಕರ್ವಾಲೊ' ಆಗಿರುತ್ತದೆ. ಈ ಪುಸ್ತಕ ಅದೆಷ್ಟೋ ಜನರಿಗೆ ಓದಿನ ರುಚಿ ಹತ್ತಿಸಿತ್ತು. ಆದರೆ ಇದೀಗ ಈ ಕಾದಂಬರಿಯ ಒಂದು ಪಾತ್ರವಾದ 'ಕರ್ವಾಲೊ' ಸಿನಿಮಾದ ಪಾತ್ರ ಆಗುತ್ತಿರುವುದು ವಿಶೇಷ.
ಈ ಹಿಂದೆ ರಾಷ್ಟ್ರಪ್ರಶಸ್ತಿ ಗೆದ್ದ ಸಿನಿಮಾ ಮಾಡಿದ್ದ ಮಂಸೋರೆ ಈಗ 'ನಾತಿಚರಾಮಿ' ಎಂಬ ಮತ್ತೊಂದು ವಿಭಿನ್ನ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಒಬ್ಬ ಮನೋ ವೈದ್ಯರ ಪಾತ್ರ ಇದೆಯಂತೆ. ಆತನ ಔಷಧೋಪಚಾರವೇ ವಿಶಿಷ್ಟವಾಗಿದ್ದು, ಪ್ರಕೃತಿ ಮೂಲಕ ಮನೋವ್ಯಾಧಿಗೆ ಔಷದ ನೀಡುವ ವ್ಯಕ್ತ ಅವನಾರುತ್ತಾನೆ. ಪ್ರಕೃತಿ ಎಂದ ತಕ್ಷಣ ತೇಜಸ್ವಿ ನೆನಪಾಗಿ ಅವರನ್ನು ರೂಪಕವಾಗಿ ಇಟ್ಟುಕೊಂಡು ಆ ಪಾತ್ರಕ್ಕೆ 'ಕರ್ವಾಲೊ' ಹೆಸರನ್ನು ಇಡಲಾಗಿದೆಯಂತೆ.
ಶೃತಿ ಹರಿಹರನ್ ಮುಂದಿನ ಸಿನಿಮಾ 'ನಾತಿಚರಾಮಿ'
'ಕರ್ವಾಲೊ' ಪಾತ್ರದಲ್ಲಿ ಬಾಲಾಜಿ ಮನೋಹರ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಇವರು 'ಲೂಸಿಯಾ' ಸೇರಿದಂತೆ ಅನೇಕ ಸಿನಿಮಾಗಳನ್ನು ಮಾಡಿದ್ದಾರೆ. ಅಂದಹಾಗೆ, ಶೃತಿ ಹರಿಹರನ್ ಸಿನಿಮಾದ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಇಲ್ಲಿ ನಾಯಕನಾಗಿದ್ದಾರೆ. ಬಿಂದುಮಾಲಿನಿ ಅವರು ಸಂಗೀತ ಸಂಯೋಜಿಸುತ್ತಿದ್ದಾರೆ. ಸಂಧ್ಯಾರಾಣಿ ಕತೆ-ಸಂಭಾಷಣೆಯನ್ನು ಬರೆದಿದ್ದಾರೆ.
ಇನ್ನು 'ನಾತಿಚರಾಮಿ' ಸಿನಿಮಾದ ಮೊದಲ ಪೋಸ್ಟರ್ ಸಂಕ್ರಾಂತಿ ಹಬ್ಬದ ವಿಶೇಷವಾಗಿ ಬಿಡುಗಡೆಯಾಗಿದ್ದು, ವಿಭಿನ್ನ ಶೈಲಿಯ ಈ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿತ್ತು.