Don't Miss!
- News Bangalore Rent: ಮನೆ ಬಾಡಿಗೆ ದರದಲ್ಲಿ ದಿಢೀರ್ ಕುಸಿತ, ಬೆಂಗಳೂರಿನ ಮಂದಿ ಹೋಗುತ್ತಿರುವುದು ಎಲ್ಲಿಗೆ?
- Lifestyle ಬದಲಾಯ್ತು ಡಿಡಿ ಲೋಗೋ: ಕೇಸರಿ ಬಣ್ಣಕ್ಕೆ ತಿರುಗಿರುವುದಕ್ಕೆ ಕೆಲವರ ಮೆಚ್ಚುಗೆ, ಕೆಲವರ ಟೀಕೆ
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Sports GT vs DC: ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್ ಆಯ್ಕೆ
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಿನಿಮಾದಲ್ಲಿ ಪೂರ್ಣಚಂದ್ರ ತೇಜಸ್ವಿ ಅವರ 'ಕರ್ವಾಲೊ' ಪಾತ್ರ
ಕವಿ ಪೂರ್ಣಚಂದ್ರ ತೇಜಸ್ವಿ ಅವರ ಪುಸ್ತಕಗಳನ್ನು ಓದಿರುವವರನ್ನು '''ತೇಜಸ್ವಿ ಬರೆದ ಪುಸ್ತಕಗಳಲ್ಲಿ ನಿಮ್ಮ ಫೇವರೇಟ್ ಯಾವುದು ?'' ಅಂತ ಕೇಳಿದರೆ ಬಹುಪಾಲು ಉತ್ತರ 'ಕರ್ವಾಲೊ' ಆಗಿರುತ್ತದೆ. ಈ ಪುಸ್ತಕ ಅದೆಷ್ಟೋ ಜನರಿಗೆ ಓದಿನ ರುಚಿ ಹತ್ತಿಸಿತ್ತು. ಆದರೆ ಇದೀಗ ಈ ಕಾದಂಬರಿಯ ಒಂದು ಪಾತ್ರವಾದ 'ಕರ್ವಾಲೊ' ಸಿನಿಮಾದ ಪಾತ್ರ ಆಗುತ್ತಿರುವುದು ವಿಶೇಷ.
ಈ ಹಿಂದೆ ರಾಷ್ಟ್ರಪ್ರಶಸ್ತಿ ಗೆದ್ದ ಸಿನಿಮಾ ಮಾಡಿದ್ದ ಮಂಸೋರೆ ಈಗ 'ನಾತಿಚರಾಮಿ' ಎಂಬ ಮತ್ತೊಂದು ವಿಭಿನ್ನ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಒಬ್ಬ ಮನೋ ವೈದ್ಯರ ಪಾತ್ರ ಇದೆಯಂತೆ. ಆತನ ಔಷಧೋಪಚಾರವೇ ವಿಶಿಷ್ಟವಾಗಿದ್ದು, ಪ್ರಕೃತಿ ಮೂಲಕ ಮನೋವ್ಯಾಧಿಗೆ ಔಷದ ನೀಡುವ ವ್ಯಕ್ತ ಅವನಾರುತ್ತಾನೆ. ಪ್ರಕೃತಿ ಎಂದ ತಕ್ಷಣ ತೇಜಸ್ವಿ ನೆನಪಾಗಿ ಅವರನ್ನು ರೂಪಕವಾಗಿ ಇಟ್ಟುಕೊಂಡು ಆ ಪಾತ್ರಕ್ಕೆ 'ಕರ್ವಾಲೊ' ಹೆಸರನ್ನು ಇಡಲಾಗಿದೆಯಂತೆ.
ಶೃತಿ ಹರಿಹರನ್ ಮುಂದಿನ ಸಿನಿಮಾ 'ನಾತಿಚರಾಮಿ'
'ಕರ್ವಾಲೊ' ಪಾತ್ರದಲ್ಲಿ ಬಾಲಾಜಿ ಮನೋಹರ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಇವರು 'ಲೂಸಿಯಾ' ಸೇರಿದಂತೆ ಅನೇಕ ಸಿನಿಮಾಗಳನ್ನು ಮಾಡಿದ್ದಾರೆ. ಅಂದಹಾಗೆ, ಶೃತಿ ಹರಿಹರನ್ ಸಿನಿಮಾದ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಇಲ್ಲಿ ನಾಯಕನಾಗಿದ್ದಾರೆ. ಬಿಂದುಮಾಲಿನಿ ಅವರು ಸಂಗೀತ ಸಂಯೋಜಿಸುತ್ತಿದ್ದಾರೆ. ಸಂಧ್ಯಾರಾಣಿ ಕತೆ-ಸಂಭಾಷಣೆಯನ್ನು ಬರೆದಿದ್ದಾರೆ.
ಇನ್ನು 'ನಾತಿಚರಾಮಿ' ಸಿನಿಮಾದ ಮೊದಲ ಪೋಸ್ಟರ್ ಸಂಕ್ರಾಂತಿ ಹಬ್ಬದ ವಿಶೇಷವಾಗಿ ಬಿಡುಗಡೆಯಾಗಿದ್ದು, ವಿಭಿನ್ನ ಶೈಲಿಯ ಈ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿತ್ತು.