ಭುವನ್ ತೊಡೆ ಕಚ್ಚಿದ್ದ ಪ್ರಥಮ್ ಪ್ರಕರಣ ಸುಖಾಂತ್ಯ
Recommended Video
ಭುವನ್ ಮತ್ತು ಪ್ರಥಮ್ ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಖ್ಯಾತಿಗಳಿಸಿದವರು. ಬಿಗ್ ಬಾಸ್ ಮನೆಯಲ್ಲಿ ಸದಾ ಕಿತ್ತಾಡುತ್ತಿದ್ದ ಭುವನ್ ಮತ್ತು ಪ್ರಥಮ್, ಬಿಗ್ ಬಾಸ್ ಮುಗಿದ ಮೇಲು ಇಬ್ಬರ ವಾರ್ ಮುಂದುವರೆದಿತ್ತು. ಭುವನ್ ಗೆ ಕಚ್ಚಿ ರಕ್ತ ಬರಿಸಿದ್ದ ಪ್ರಥಮ್ ಪ್ರಕರಣ ಈಗ ಸುಖಾಂತ್ಯ ಕಾಣುವ ಹಂತಕ್ಕೆ ಬಂದಿದೆ.
ಭುವನ್ ಸದ್ಯ 'ರಾಂಧವ' ಚಿತ್ರದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. 'ರಾಂಧವ' ಚಿತ್ರದ ವಿತರಣೆ ಹಕ್ಕು ಪಡೆದಿರುವ ಜಯಣ್ಣ ಭುವನ್ ಮತ್ತು ಪ್ರಥಮ್ ಇಬ್ಬರನ್ನು ರಾಜಿ ಮಾಡಿಸಿದ್ದಾರೆ. ಕೇಸ್ ವಾಪಸ್ ಪಡೆಯುವಂತೆ ಭುವನ್ ಗೆ ಹೇಳಿದ್ದಾರೆ. ಅಲ್ಲದೆ ಪ್ರಕರಣದಿಂದ ಬೇಸತ್ತು ಹೋಗಿದ್ದ ಪ್ರಥಮ್ ಕೇಸ್ ಹಿಂಪಡೆಯುವಂತೆ ಭುವನ್ ಅವರನ್ನು ಕಾಡಿಸುತ್ತಿದ್ದರಂತೆ.

ರಾಜಿ ಮಾಡಿಸಿದ ವಿತರಕ ಜಯಣ್ಣ
ಇದೇ ಸಮಯಕ್ಕೆ ಸರಿಯಾಗಿ ಜಯಣ್ಣ ಮಧ್ಯೆ ಪ್ರವೇಶಿಸಿ ರಾಜಿ ಮಾಡಿಸಿದ್ದಾರೆ. ಆದ್ರೆ ಭುವನ್ ಈ ಸಂದಾನಕ್ಕೆ ಒಂದು ಕಂಡೀಶನ್ ಹಾಕಿದ್ದಾರೆ. ಪ್ರಥಮ್ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಹೇಳಿದ್ದಾರೆ. ಮೊದಲ ಕ್ಷಮೆ ಕೇಳಲು ಹಿಂಜರಿದ ಪ್ರಥಮ್ ನಂತರ ಜಯಣ್ಣ ಮಾತಿನ್ನು ಕೇಳಿ ಒಪ್ಪಿಕೊಂಡು ಮಾಧ್ಯಮದ ಮುಂದೆ ಕ್ಷಮೆಯಾಚಿಸಿದ್ದಾರೆ.

ತೊಡೆ ಕಚ್ಚಿದ್ದು ನಿಜ
"ನನ್ನ ತಪ್ಪಿನ ಅರಿವಾಗಿದೆ, ಭುವನ್ ತೊಡೆ ಕಚ್ಚಿದ್ದು ನಿಜ. ಭುವನ್ ಹಸುವಿನ ಮಾಂಸ ತಿನ್ನುತಾನೆ ಎಂದು ಸುಳ್ಳು ಹೇಳಿದೆ. ಇನ್ನುಮುಂದೆ ಅವರಿಗೆ ಯಾವುದೆ ರೀತಿ ಹಿಂಸೆ ನೀಡಲ್ಲ. ಕೇಸ್ ವಾಪಸ್ ತೆಗೆದುಕೊಳ್ಳಿ" ಎಂದು ಕೇಳಿಕೊಂಡಿದ್ದಾರೆ. ಮಾಧ್ಯಮದ ಮುಂದೆ ಕ್ಷಮೆ ಕೋರಿದ ಹಿನ್ನಲೆ ಭುವನ್ ಕೇಸ್ ವಾಪಸ್ ಪಡೆಯಲು ಮುಂದಾಗಿದ್ದಾರೆ.

ಪ್ರಥಮ್ ಮದುವೆ ಆಗ್ತಿದ್ದಾರಂತೆ
ಪ್ರಥಮ್ ಮದುವೆ ಕೂಡ ಫಿಕ್ಸ್ ಆಗಿದೆಯಂತೆ. ಸಧ್ಯದಲ್ಲೇ ಪ್ರಥಮ್ ಹಸೆಮಣೆ ಏರಲಿದ್ದಾರೆ ಎನ್ನುವ ಮಾಹಿತಿಯನ್ನು ನೀಡಿದ್ದಾರೆ. ಹಾಗಾಗಿ ಈ ಕೇಸಿನಿಂದ ಹೇಗಾದರು ಮಾಡಿ ಆದಷ್ಟು ಬೇಗ ಮುಕ್ತಿ ಪಡೆಯಬೇಕು ಎಂದು ಕಾಯುತ್ತಿದ್ದರು. ಸದ್ಯ ತೊಡೆ ಕಚ್ಚಿದ ಪ್ರಕರಣ ಕ್ಲೈಮ್ಯಾಕ್ಸ್ ಹಂತದಲ್ಲಿದೆ.

ಘಟನೆ ಹಿನ್ನಲೆ
ಬಿಗ್ ಬಾಸ್ ಮುಗಿದ ನಂತರ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಭುವನ್ ಮತ್ತು ಪ್ರಥಮ್ ನಡುವಿನ ಜಗಳ ತಾರಕಕ್ಕೇರಿತ್ತು. ಈ ಸಮಯದಲ್ಲಿ ಪ್ರಥಮ್, ಭುವನ್ ಗೆ ಹಸುವಿನ ಮಾಂಸ ತಿನ್ನುತ್ತೀಯಾ ಎಂದು ಹೇಳಿ ಕರೆಳಿಸಿ ಭುವನ್ ತೊಡೆಗೆ ಸರಿಯಾಗಿ ಕಚ್ಚಿದ್ದರು. ಪ್ರಥಮ್ ಕಚ್ಚಿದ ಎಫೆಕ್ಟ್ ಗೆ ಭುವನ್ ಆಸ್ಪತ್ರೆ ಸೇರಿದ್ದರು. ಪ್ರಥಮ್ ಹುಚ್ಚಾಟದಿಂದ ನೊಂದ ಭುವನ್ ನಂತರ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದರು.


Click it and Unblock the Notifications











