Don't Miss!
- News ಬೇಸಿಗೆ ಧಗೆ: ಬಿಯರ್, ಮಜ್ಜಿಗೆ ಮೊರೆ ಹೋದ ಬೆಂಗಳೂರಿನ ಜನ!
- Lifestyle ಬಿಸಿಲಿನಲ್ಲಿ ಬಸವಳಿದಿದ್ದ ಆನೆಗೆ ನೀರು ನೀಡಿ ಹೀರೋ ಆದ ಯುವಕ..!
- Automobiles ಸಾಮಾನ್ಯನ ಸ್ಟೋರಿ: ಬಹುಕಾಲದ ಕನಸನ್ನು ನನಸು ಮಾಡಿಕೊಂಡ ವಿಘ್ನೇಶ..! ನೆಚ್ಚಿನ ವ್ಯಾಗನ್ಆರ್ ಕಾರು ಖರೀದಿ
- Technology ನೀವು ಜಿಯೋ ಗ್ರಾಹಕರೇ?..ಹಾಗಿದ್ರೆ, ಈ ಪ್ಲ್ಯಾನಿಗೆ ಖಂಡಿತಾ ಫಿದಾ ಆಗ್ತೀರಾ!
- Finance ದೀಪಿಕಾ ಪಡುಕೋಣೆಯೊಂದಿಗೆ ಅಂಬಾನಿ ಮಗಳು ಒಪ್ಪಂದ, ಇಲ್ಲಿದೆ ವಿವರ
- Sports RCB: ಇದೇ ಆರ್ಸಿಬಿ ಸಮಸ್ಯೆ ಮೂಲ; ವಿದೇಶಿ ಕೋಚಿಂಗ್ ಸ್ಟಾಫ್ ವಿರುದ್ಧ ಸಿಡಿಮಿಡಿಗೊಂಡ ವೀರೇಂದ್ರ ಸೆಹ್ವಾಗ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಭುವನ್ ತೊಡೆ ಕಚ್ಚಿದ್ದ ಪ್ರಥಮ್ ಪ್ರಕರಣ ಸುಖಾಂತ್ಯ
Recommended Video
ಭುವನ್ ಮತ್ತು ಪ್ರಥಮ್ ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಖ್ಯಾತಿಗಳಿಸಿದವರು. ಬಿಗ್ ಬಾಸ್ ಮನೆಯಲ್ಲಿ ಸದಾ ಕಿತ್ತಾಡುತ್ತಿದ್ದ ಭುವನ್ ಮತ್ತು ಪ್ರಥಮ್, ಬಿಗ್ ಬಾಸ್ ಮುಗಿದ ಮೇಲು ಇಬ್ಬರ ವಾರ್ ಮುಂದುವರೆದಿತ್ತು. ಭುವನ್ ಗೆ ಕಚ್ಚಿ ರಕ್ತ ಬರಿಸಿದ್ದ ಪ್ರಥಮ್ ಪ್ರಕರಣ ಈಗ ಸುಖಾಂತ್ಯ ಕಾಣುವ ಹಂತಕ್ಕೆ ಬಂದಿದೆ.
ಕಾಲಲ್ಲಿ ಚಪ್ಪಲಿ ಇಲ್ಲ, ಕೊಳಕು ಬಟ್ಟೆ, ಚೆನ್ನೈನಲ್ಲಿ ಹುಚ್ಚ ವೆಂಕಟ್ ಅಲೆದಾಟ
ಭುವನ್ ಸದ್ಯ 'ರಾಂಧವ' ಚಿತ್ರದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. 'ರಾಂಧವ' ಚಿತ್ರದ ವಿತರಣೆ ಹಕ್ಕು ಪಡೆದಿರುವ ಜಯಣ್ಣ ಭುವನ್ ಮತ್ತು ಪ್ರಥಮ್ ಇಬ್ಬರನ್ನು ರಾಜಿ ಮಾಡಿಸಿದ್ದಾರೆ. ಕೇಸ್ ವಾಪಸ್ ಪಡೆಯುವಂತೆ ಭುವನ್ ಗೆ ಹೇಳಿದ್ದಾರೆ. ಅಲ್ಲದೆ ಪ್ರಕರಣದಿಂದ ಬೇಸತ್ತು ಹೋಗಿದ್ದ ಪ್ರಥಮ್ ಕೇಸ್ ಹಿಂಪಡೆಯುವಂತೆ ಭುವನ್ ಅವರನ್ನು ಕಾಡಿಸುತ್ತಿದ್ದರಂತೆ.
ರಾಜಿ ಮಾಡಿಸಿದ ವಿತರಕ ಜಯಣ್ಣ
ಇದೇ ಸಮಯಕ್ಕೆ ಸರಿಯಾಗಿ ಜಯಣ್ಣ ಮಧ್ಯೆ ಪ್ರವೇಶಿಸಿ ರಾಜಿ ಮಾಡಿಸಿದ್ದಾರೆ. ಆದ್ರೆ ಭುವನ್ ಈ ಸಂದಾನಕ್ಕೆ ಒಂದು ಕಂಡೀಶನ್ ಹಾಕಿದ್ದಾರೆ. ಪ್ರಥಮ್ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಹೇಳಿದ್ದಾರೆ. ಮೊದಲ ಕ್ಷಮೆ ಕೇಳಲು ಹಿಂಜರಿದ ಪ್ರಥಮ್ ನಂತರ ಜಯಣ್ಣ ಮಾತಿನ್ನು ಕೇಳಿ ಒಪ್ಪಿಕೊಂಡು ಮಾಧ್ಯಮದ ಮುಂದೆ ಕ್ಷಮೆಯಾಚಿಸಿದ್ದಾರೆ.
ತೊಡೆ ಕಚ್ಚಿದ್ದು ನಿಜ
"ನನ್ನ ತಪ್ಪಿನ ಅರಿವಾಗಿದೆ, ಭುವನ್ ತೊಡೆ ಕಚ್ಚಿದ್ದು ನಿಜ. ಭುವನ್ ಹಸುವಿನ ಮಾಂಸ ತಿನ್ನುತಾನೆ ಎಂದು ಸುಳ್ಳು ಹೇಳಿದೆ. ಇನ್ನುಮುಂದೆ ಅವರಿಗೆ ಯಾವುದೆ ರೀತಿ ಹಿಂಸೆ ನೀಡಲ್ಲ. ಕೇಸ್ ವಾಪಸ್ ತೆಗೆದುಕೊಳ್ಳಿ" ಎಂದು ಕೇಳಿಕೊಂಡಿದ್ದಾರೆ. ಮಾಧ್ಯಮದ ಮುಂದೆ ಕ್ಷಮೆ ಕೋರಿದ ಹಿನ್ನಲೆ ಭುವನ್ ಕೇಸ್ ವಾಪಸ್ ಪಡೆಯಲು ಮುಂದಾಗಿದ್ದಾರೆ.
ಶ್ರುತಿ ಹರಿಹರನ್ ಫೋಸ್ಟ್ ಗೆ ನೆಟ್ಟಿಗರ ಕಮೆಂಟ್ಸ್ ನೋಡಿ ಸಿಡಿದೆದ್ದ ಪ್ರಥಮ್
ಪ್ರಥಮ್ ಮದುವೆ ಆಗ್ತಿದ್ದಾರಂತೆ
ಪ್ರಥಮ್ ಮದುವೆ ಕೂಡ ಫಿಕ್ಸ್ ಆಗಿದೆಯಂತೆ. ಸಧ್ಯದಲ್ಲೇ ಪ್ರಥಮ್ ಹಸೆಮಣೆ ಏರಲಿದ್ದಾರೆ ಎನ್ನುವ ಮಾಹಿತಿಯನ್ನು ನೀಡಿದ್ದಾರೆ. ಹಾಗಾಗಿ ಈ ಕೇಸಿನಿಂದ ಹೇಗಾದರು ಮಾಡಿ ಆದಷ್ಟು ಬೇಗ ಮುಕ್ತಿ ಪಡೆಯಬೇಕು ಎಂದು ಕಾಯುತ್ತಿದ್ದರು. ಸದ್ಯ ತೊಡೆ ಕಚ್ಚಿದ ಪ್ರಕರಣ ಕ್ಲೈಮ್ಯಾಕ್ಸ್ ಹಂತದಲ್ಲಿದೆ.
ಅರೆಸ್ಟ್ ವಾರೆಂಟ್ ಜಾರಿ: 'ಬಿಗ್ ಬಾಸ್' ಭುವನ್ ಗೆ ಬಂಧನ ಭೀತಿ.!
ಘಟನೆ ಹಿನ್ನಲೆ
ಬಿಗ್ ಬಾಸ್ ಮುಗಿದ ನಂತರ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಭುವನ್ ಮತ್ತು ಪ್ರಥಮ್ ನಡುವಿನ ಜಗಳ ತಾರಕಕ್ಕೇರಿತ್ತು. ಈ ಸಮಯದಲ್ಲಿ ಪ್ರಥಮ್, ಭುವನ್ ಗೆ ಹಸುವಿನ ಮಾಂಸ ತಿನ್ನುತ್ತೀಯಾ ಎಂದು ಹೇಳಿ ಕರೆಳಿಸಿ ಭುವನ್ ತೊಡೆಗೆ ಸರಿಯಾಗಿ ಕಚ್ಚಿದ್ದರು. ಪ್ರಥಮ್ ಕಚ್ಚಿದ ಎಫೆಕ್ಟ್ ಗೆ ಭುವನ್ ಆಸ್ಪತ್ರೆ ಸೇರಿದ್ದರು. ಪ್ರಥಮ್ ಹುಚ್ಚಾಟದಿಂದ ನೊಂದ ಭುವನ್ ನಂತರ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದರು.