Don't Miss!
- News ಕಲೆ ಮತ್ತು ಕಲೆಗಾರ! ಪ್ರಧಾನಿ ನರೇಂದ್ರ ಮೋದಿ ಕಾಲೆಳೆದ ಸಿಎಂ ಸಿದ್ದರಾಮಯ್ಯ
- Sports IPL 2024: ಹೈದರಾಬಾದ್-ಡೆಲ್ಲಿ ನಡುವೆ ಮೆಗಾ ಫೈಟ್; ಟಾಸ್, ಆಡುವ 11ರ ಬಳಗದ ವರದಿ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಾಲು ಮುರಿದುಕೊಂಡ, ಪುಟ್ಟ ಅಭಿಮಾನಿಗೆ ಸಾಂತ್ವನ ನುಡಿದ ದರ್ಶನ್
ಸ್ಯಾಂಡಲ್ ವುಡ್ ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪುಟ್ಟ ಅಭಿಮಾನಿ, ಕೊಪ್ಪಳದ 6 ವರ್ಷದ ಅಭಿಷೇಕ್ ಎಂಬ ಬಾಲಕ ದರ್ಶನ್ ಸಿನಿಮಾದಲ್ಲಿ ಮಾಡೋ ತರ ಸ್ಟಂಟ್ಸ್ ಮಾಡಲು ಹೋಗಿ ತನ್ನ ಎಡಗಾಲು ಮುರಿದುಕೊಂಡಿದ್ದ.
ಇದೀಗ ಈ ವಿಷಯ ಗೊತ್ತಾದ ತಕ್ಷಣ ಗಾಬರಿಯಾದ ನಟ ದರ್ಶನ್ ಅವರು ಪುಟ್ಟ ಬಾಲಕ ಅಭಿಷೇಕ್ ಗೆ ನೇರವಾಗಿ ದೂರವಾಣಿ ಕರೆ ಮಾಡಿ ತಮ್ಮ ಪುಟ್ಟ ಅಭಿಮಾನಿಯೊಂದಿಗೆ ಮಾತನಾಡಿ ಆತನಿಗೆ ಬುದ್ದಿ ಹೇಳಿ ಸಾಂತ್ವನ ನುಡಿದಿದ್ದಾರೆ.
'ಸದ್ಯಕ್ಕೆ ಬೇರೆ ಭಾಗದಲ್ಲಿ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದೇನೆ, ಬೆಂಗಳೂರಿಗೆ ಬಂದ ತಕ್ಷಣ ಕರೆಸಿಕೊಳ್ಳುತ್ತೇನೆ. ಇನ್ನೊಂದು ಬಾರಿ ಈ ತರ ಎಲ್ಲಾ ಅನಾಹುತ ಮಾಡಿಕೊಳ್ಳಬಾರದು, ದರ್ಶನ್ ಅಭಿಮಾನಿಯಾಗಿ ಇನ್ನೊಮ್ಮೆ ಹೀಗೆ ಮಾಡಿಕೊಳ್ಳಬೇಡ' ಎಂದು ದರ್ಶನ್ ತನ್ನ ಕಟ್ಟಾ ಅಭಿಮಾನಿಗೆ ಬುದ್ಧಿವಾದ ತಿಳಿಸಿದ್ದಾರೆ.
ದರ್ಶನ್ ಧ್ವನಿ ಕೇಳಿ ಸಂಭ್ರಮಪಟ್ಟ ಅಭಿಷೇಕ್ ಮತ್ತೊಮ್ಮೆ ತನ್ನ ನೆಚ್ಚಿನ ನಟನಿಗೆ 'ಐರಾವತ' ಚಿತ್ರದ ಡೈಲಾಗ್ ಹೇಳಿ ದರ್ಶನ್ ಅವರನ್ನು ಮೆಚ್ಚಿಸಿದ್ದಾನೆ. ದರ್ಶನ್ ಜೊತೆ ಮಾತನಾಡಿದ ನಂತರ ಬಾಲಕ ಅಭಿಷೇಕ್ ಬೇಗನೆ ಚೇತರಿಸಿಕೊಂಡಿದ್ದಾನಂತೆ.
'ನಾನು ಈಗಾಗಲೇ ಅಭಿಷೇಕ್ ಜೊತೆ ಪೋನ್ ಮೂಲಕ ಮಾತನಾಡಿದ್ದೇನೆ, ಅವನು ಈಗ ಚೆನ್ನಾಗಿದ್ದಾನೆ. ಪ್ರೀತಿಯ ಅಭಿಮಾನಿಗಳೇ, ದಯವಿಟ್ಟು ಯಾರು ಇಂತಹ ಅನಾಹುತಕಾರಿ ಕೆಲಸಗಳಿಗೆ ಕೈ ಹಾಕಬೇಡಿ. ಇವತ್ತು ನಾನು ಈ ಸ್ಥಾನದಲ್ಲಿರಲು ನೀವೇ ಕಾರಣ ಹಾಗಾಗಿ ನೀವ್ಯಾರು ಈ ಬಗೆಯ ಸಾಹಸದ ಪ್ರಯತ್ನ ಮಾಡಬೇಡಿ' ಎಂದು ದರ್ಶನ್ ತಮ್ಮ ಟ್ವಿಟ್ಟರ್ ಮೂಲಕ ಅಭಿಮಾನಿಗಳಿಗೆ ಟ್ವೀಟ್ ಮಾಡಿದ್ದಾರೆ.
Spoke
to
Abhishek
Over
Phone
Few
Hrs
Back.
He
is
Fine.
My
Request
to
All
Fans
to
Not
take
such
Drastic
Measures.
Am
here
only
bcoz
of
u
All
—
Darshan
Thoogudeepa
(@dasadarshan)
November
28,
2015
ನವೆಂಬರ್ 22 ರಂದು 6 ವರ್ಷದ ಬಾಲಕ ಅಭಿಷೇಕ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 'Mr ಐರಾವತ' ಚಿತ್ರದ ಡೈಲಾಗ್ ಅನ್ನು ಹೇಳುತ್ತಾ, ದರ್ಶನ್ ಗಿಂತ ತಾನೇನು ಕಡಿಮೆ ಇಲ್ಲ ಅನ್ನೋ ರೀತಿಯಲ್ಲಿ ಮನೆಯ ಮಾಳಿಗೆ ಏರಿ ಅಲ್ಲಿಂದ ಜಂಪ್ ಮಾಡಿದ್ದಾನೆ.
ಹೀಗೆ ಪುಟ್ಟ ಬಾಲಕ ಅಭಿಷೇಕ್ ದರ್ಶನ್ ತರ ಸ್ಟಂಟ್ಸ್ ಮಾಡಲು ಹೋಗಿ ತನ್ನ ಎಡಗಾಲನ್ನು ಮುರಿದುಕೊಂಡಿದ್ದಾನೆ. ಆದ್ರೂ ಅಭಿಮಾನ ಹೋಗಿಲ್ಲ, ಆ ನೋವಲ್ಲೂ ದರ್ಶನ್ ಡೈಲಾಗ್ ಹೇಳುತ್ತಾ ತನ್ನ ನೋವನ್ನು ಮರೆಯುತ್ತಿದ್ದಾನೆ.
ಆದ್ರಲ್ಲೂ, ಇದೀಗ ದರ್ಶನ್ ಅವರ ಜೊತೆ ಮಾತನಾಡಿ ತನ್ನ ನೆಚ್ಚಿನ ನಟನ ಧ್ವನಿ ಕೇಳಿದ ಬಾಲಕ ಅಭಿಷೇಕ್ ಫುಲ್ ಖುಷ್ ಆಗಿದ್ದಾನಂತೆ.