Don't Miss!
- Finance ಭಾರತದ ಮೊದಲ ಬುಲೆಟ್ ರೈಲಿನ ಬ್ಯಾಲೆಸ್ಟ್ಲೆಸ್ ಟ್ರ್ಯಾಕ್ ಸಿಸ್ಟಮ್ ಹಳಿ ಚಿತ್ರ ಬಹಿರಂಗ
- Lifestyle ಮೈ ತೂಕ ಕಡಿಮೆಯಾಗಲು ಈ ಪುದೀನಾ ನೀರು ಸಹಕಾರಿಯೇ? ಇದರ ಇತರ ಪ್ರಯೋಜನಗಳೇನು?
- News Poornachandra Tejaswi: ವಿಸ್ಮಯಲೋಕವನ್ನೇ ತೆರೆದಿಡುವ ತೇಜಸ್ವಿಯವರ ಪುಸ್ತಕಗಳು
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರೈತರ ಶ್ರಮದ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾತು
Recommended Video
ಅನೇಕ ಸಿನಿಮಾ ಕಲಾವಿದರು ರೈತ ಕುಟುಂಬ ಹಿನ್ನಲೆಯಿಂದ ಬಂದವರಾಗಿದ್ದಾರೆ. ಇನ್ನು ಕೆಲವರು ರೈತ ಕುಟುಂಬದಿಂದ ಬಂದಿಲ್ಲವಾದರೂ ರೈತರ ಬಗ್ಗೆ ಒಳ್ಳೆಯ ಅಭಿಪ್ರಾಯ ಹಾಗೂ ಅವರ ಹೋರಾಟಕ್ಕೆ ಬೆಂಬಲವಾಗಿ ನಿಲ್ಲುವ ಮನಸ್ಸು ಮಾಡುತ್ತಾರೆ.
ಅವರುಗಳಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಒಬ್ಬರು. ಸದಾ ರೈತರ ಬಗ್ಗೆ ಕಾಳಜಿ ಹೊಂದಿರುವ ಡಿ ಬಾಸ್ ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ರೈತರ ಬಗ್ಗೆ ಮಾತನಾಡಿದ್ದಾರೆ. ಇಷ್ಟು ದಿನಗಳಲ್ಲಿ ಯಾರೋಬ್ಬರು ಯೋಚನೆ ಮಾಡದ ಹಾದಿಯಲ್ಲಿ ದಾಸ ಆಲೋಚನೆ ಮಾಡಿದ್ದಾರೆ.
ಎಲ್ಲಿದ್ದಾರೆ? ಹೇಗಿದ್ದಾರೆ? 'ಸಾರಥಿ'ಯ ಸುಂದರಿ ದೀಪಾ ಸನ್ನಿಧಿ
ಕಮರ್ಷಿಯಲ್ ಸಿನಿಮಾ ಬಗ್ಗೆ ಮಾತನಾಡಲು ಬಂದ ದಾಸ ದರ್ಶನ್ ರೈತರ ಬಗ್ಗೆ ಮಾತನಾಡಿದ್ದು ಏಕೆ? ವಿಭಿನ್ನವಾದ ಆಲೋಚನೆ ಡಿ ಬಾಸ್ ತಲೆಯಲ್ಲಿ ಹೇಗೆ ಬಂತು? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ.
ನಿರ್ಮಾಣಕ್ಕೂ ರೈತರಿಗೂ ಸಂಬಂಧ
ಒಂದು ಸಿನಿಮಾ ನಿರ್ಮಾಣ ಸಂಸ್ಥೆ ಆರಂಭ ಮಾಡುವಾಗ ಸಾಕಷ್ಟು ಕಷ್ಟಗಳಿರುತ್ತೆ. ಆದರೆ ನಿರ್ಮಾಣ ಸಂಸ್ಥೆಯಿಂದ ರೈತರಿಗೆ ಉಪಯೋಗ ಆಗುತ್ತೆ. ಸಿನಿಮಾ ಆರಂಭದಿಂದ ಹೊಲದಲ್ಲಿ ದುಡಿಯುವ ರೈತರಿಗೆ ಉಪಯೋಗ ಆಗುತ್ತೆ ಎನ್ನುವುದನ್ನು ದರ್ಶನ್ ತಿಳಿಸಿದ್ದಾರೆ.
ಸಿನಿಮಾ ಸೆಟ್ ನಲ್ಲಿ ಸಾಕಷ್ಟು ಜನರಿಗೆ ಊಟ
ಸಿನಿಮಾ ನಿರ್ಮಾಣ ಸಂಸ್ಥೆ ಆರಂಭ ಮಾಡಿದ್ರೆ ಪ್ರತಿ ಸಿನಿಮಾ ಶೂಟಿಂಗ್ ನಲ್ಲಿ ನೂರಾರು ಜನ ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆ ಊಟ ಮಾಡುತ್ತಾರೆ. ಹೀಗಾಗಿ ರೈತರಿಗೂ ಪ್ರೋಡಕ್ಷನ್ ಕಂಪನಿಗೂ ಸಂಬಂಧ ಇದೆ. ಎನ್ನುವ ವಿಚಾರವನ್ನು ಜನರಿಗೆ ಮನವರಿಕೆ ಮಾಡಿದ್ದಾರೆ ದರ್ಶನ್.
ಅನಿಶ್ ಗೆ ಶುಭ ಕೋರಿದ ದರ್ಶನ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅನಿಶ್ ತೇಜೇಶ್ವರ್ ಅಭಿನಯದ ವಾಸು ನಾನ್ ಪಕ್ಕಾ ಕಮರ್ಷಿಯಲ್ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿ ಆಗಿ ಆಗಮಿಸಿದ್ದರು. ಇದು ಅನಿಶ್ ನಿರ್ಮಾಣ ಸಂಸ್ಥೆಯಲ್ಲಿ ಆರಂಭ ಆಗುತ್ತಿರುವ ಮೊದಲ ಚಿತ್ರವಾಗಿದೆ ಆದ್ದರಿಂದ ಡಿ ಬಾಸ್ ಈ ಮಾತನ್ನು ಅಭಿಮಾನಿಗಳ ಮುಂದೆ ಹೇಳಿದರು.
ದರ್ಶನ್ ಒಳಗೊಬ್ಬ ರೈತ
ದರ್ಶನ್ ಚಾಲೆಂಜಿಂಗ್ ಸ್ಟಾರ್ ಆಗಿ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದರೂ ಕೂಡ ಅವರೊಳಗೆ ಒಬ್ಬ ರೈತನಿದ್ದಾನೆ. ಅದಕ್ಕಾಗಿಯೇ ಫಾರ್ಮ್ ಹೌಸ್ ನಲ್ಲಿ ಸಾಕಷ್ಟು ಪ್ರಾಣಿಗಳ ಜೊತೆಗೆ ಸಾವಿರಾರು ಸಸಿಗಳನ್ನು ನೆಟ್ಟು ಬೆಳೆಸುತ್ತಿದ್ದಾರೆ.