ಚಿತ್ರದುರ್ಗಕ್ಕೆ ಭೇಟಿ ನೀಡಿದ ದರ್ಶನ್-ರಾಕ್ ಲೈನ್ ವೆಂಕಟೇಶ್
Recommended Video

'ಮದಕರಿ ನಾಯಕ' ಚಿತ್ರಕ್ಕೆ ಸಂಬಂಧಪಟ್ಟಂತೆ ಸ್ಟಾರ್ ನಟರ ನಡುವೆ ವಾದ-ವಿವಾದ ನಡೆಯುತ್ತಿರುವಾಗಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರು ಚಿತ್ರದುರ್ಗಕ್ಕೆ ಭೇಟಿ ನೀಡಿ ಗಮನ ಸೆಳೆದಿದ್ದಾರೆ.
ಚಿತ್ರದುರ್ಗದ 'ಮುರುಘಾ ಮಠದ ಶರಣ ಸಂಸ್ಕೃತಿ ಉತ್ಸವ'ಕ್ಕೆ ಚಾಲನೆ ನೀಡುವ ಸಲುವಾಗಿ ದರ್ಶನ್ ಆಗಮಿಸಿದ್ದಾರೆ. ಈ ವೇಳೆ ಮಠಕ್ಕೆ ಭೇಟಿ ನೀಡಿ, ಅಲ್ಲಿನ ಸ್ವಾಮೀಜಿಗಳನ್ನ ಮಾತನಾಡಿಸಿ ಆಶೀರ್ವಾದ ಪಡೆದುಕೊಂಡರು.

ಮುರುಘಾ ಮಠದ ಅನುಭವ ಮಂಟಪದಲ್ಲಿ ನಡೆದ 'ಸೌಹಾರ್ದ ನಡಿಗೆ ಶರಣ ಸಂಸ್ಕೃತಿ ಕಡೆಗೆ' ಕಾರ್ಯಕ್ರಮದಲ್ಲಿ ಭಾಗಿಯಾದ ದರ್ಶನ್ ಸ್ವಾಮೀಜಿಗಳ ಜೊತೆ ವೇದಿಕೆ ಹಂಚಿಕೊಂಡರು. ದರ್ಶನ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಹಾಗೂ ಸಾಹಿತಿ ಹಾಗೂ ಬರಹಗಾರ ಬಿ ಎಲ್ ವೇಣು ಮತ್ತು ಹಿರಿಯ ನಟ ಶ್ರೀನಿವಾಸ ಮೂರ್ತಿ ಜೊತೆಯಲ್ಲಿದ್ದರು.
ದರ್ಶನ್ ಮಠದ ಬಳಿ ಬರುತ್ತಿದ್ದಂತೆ ಮೊದಲು ಆನೆ ಗಜರಾಜ ಮತ್ತು ಮಾವುತರನ್ನ ಮಾತನಾಡಿಸಿ ಯೋಗಕ್ಷೇಮ ವಿಚಾರಿಸಿದರು. ಆನೆ ಇಂದು ಏನು ತಿಂಡಿದೆ ಎಂದು ಕೇಳಿದರು. ಆನೆಯನ್ನ ಚೆನ್ನಾಗಿ ನೋಡಿಕೊಳ್ಳಿ ಎಂದು ಮಾವುತರಿಗೆ ಸೂಚಿಸಿದರು. ಇದು ಸಹಜವಾಗಿ ವಿಶೇಷವೆನಿಸಿತು.


Click it and Unblock the Notifications











