Don't Miss!
- News ಹಾಸನ ಪೆನ್ಡ್ರೈವ್ ಪ್ರಕರಣ: ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದ ಮಹಿಳಾ ಆಯೋಗ
- Sports IPL 2024: ಆರ್ಸಿಬಿಗೆ ವಿರಾಟ್, ಪಾಟಿದಾರ್ ಆಸರೆ: ಹೈದರಾಬಾದ್ಗೆ ಸವಾಲಿನ ಟಾರ್ಗೆಟ್
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಧನಂಜಯ್
Recommended Video
ಇಂದು ನಟ ಧನಂಜಯ್ ಅವರ ಹುಟ್ಟುಹಬ್ಬ. ಪ್ರತಿ ವರ್ಷ ಕೂಡ ಈ ದಿನವನ್ನು ಅವರು ತಮ್ಮ ಅಭಿಮಾನಿಗಳೊಂದಿಗೆ ಆಚರಣೆ ಮಾಡುತ್ತಾರೆ. ಅದೇ ರೀತಿ ಈ ವರ್ಷ ಸಹ ತಮ್ಮ ಫ್ಯಾನ್ಸ್ ಜೊತೆ ಸೇರಿ ಮಧ್ಯರಾತ್ರಿಯಿಂದಲೇ ಧನಂಜಯ್ ಸಂಭ್ರಮ ಪ್ರಾರಂಭ ಆಗಿದೆ.
ಹುಟ್ಟುಹಬ್ಬದ ಆಚರಣೆಗೆ ಮೊದಲು ಧನಂಜಯ್ ಅಭಿಮಾನಿಗಳಿಗೆ ಒಂದು ಮನವಿ ಮಾಡಿದರು. ಕೊಡಗಿನಲ್ಲಿ ಪ್ರವಾಹದಿಂದ ಕಣ್ಣೀರು ಹಾಕುತ್ತಿರುವ ಜನರಿಗೆ ಸಹಾಯ ಮಾಡೋಣ ಎಂದು ಕೇಳಿಕೊಂಡರು. ಅದೇ ರೀತಿ ಧನಂಜಯ್ ಅಭಿಮಾನಿಗಳು ಹೆಚ್ಚು ಕೇಕ್, ಹಾರ, ಪಟಾಕಿ ಇಲ್ಲದೆ ದುಡ್ಡನ್ನು ಕೊಡಗು ಜನರಿಗೆ ನೀಡಿದರು.
ಧನಂಜಯ್-ಸೂರಿ ಚಿತ್ರಕ್ಕೆ ಎಂಟ್ರಿ ಕೊಟ್ಟ ಮತ್ತಿಬ್ಬರು ನಟಿಯರು
ಅಭಿಮಾನಿಗಳ ಹಣದ ಜೊತೆಗೆ ತಾವು ಒಂದಷ್ಟು ಹಣ ಸೇರಿಸಿ ಅದನ್ನು ಕೊಡಗು ಜನರಿಗೆ ನೀಡುವುದಾಗಿ ಧನಂಜಯ್ ತಿಳಿಸಿದರು. 'ಟಗರು' ಸಿನಿಮಾದ ನಂತರ ದೊಡ್ಡ ಅಭಿಮಾನಿ ಬಳಗವನ್ನು ಧನಂಜಯ್ ಪಡೆದಿದ್ದು, ಈ ಬಾರಿ ಹುಟ್ಟುಹಬ್ಬಕ್ಕೆ ಬಂದ ಅಭಿಮಾನಿಗಳ ಸಂಖ್ಯೆ ಕೂಡ ಹೆಚ್ಚಿತ್ತು. ಜಿ ಪಿ ನಗರದ ಒಂದು ಮೈದಾನದಲ್ಲಿ ಧನಂಜಯ್ ಬರ್ತ್ ಡೇ ನಡೆಯಿತು.
ಅಂದಹಾಗೆ, ಡಾಲಿ ಪಾತ್ರದ ಬಳಿಕ ಧನಂಜಯ್ ದೊಡ್ಡ ಹೆಸರು ಮಾಡಿದ್ದಾರೆ. ಇದೀಗ ರಾಮ್ ಗೋಪಾಲ್ ವರ್ಮ ಅವರ ನಿರ್ದೇಶನ 'ಭೈರವ ಗೀತ' ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ. ಜೊತೆಗೆ ನಿರ್ದೇಶಕ ಸೂರಿ 'ಪಾಪ್ ಕಾರ್ನ್ ಮಂಕಿ ಟೈಗರ್' ಚಿತ್ರವನ್ನು ಧನಂಜಯ್ ಗಾಗಿ ಮಾಡುತ್ತಿದ್ದಾರೆ.