Don't Miss!
- Lifestyle ಬಾಯಲ್ಲಿ ನೀರು ತರಿಸುವ ಮಾವಿನ ಕಾಯಿ ಚಟ್ನಿ..! 5 ನಿಮಿಷದಲ್ಲಿ ರೆಡಿ..!
- Technology Motorola: ಮೊಟೊರೊಲಾ ಎಡ್ಜ್ 50 ಅಲ್ಟ್ರಾ ಸ್ಮಾರ್ಟ್ಫೋನ್ ಫೀಚರ್ಸ್ ಲೀಕ್! ವಿಶೇಷತೆ ಏನು?
- Automobiles Tata Curvv Vs Citroen Basalt: ಟಾಟಾಗೆ ಸೆಡ್ಡು ಹೊಡೆಯುವ ತಾಕತ್ತಿದೆಯೇ?
- News RBI: ಬ್ಯಾಂಕ್ ಕೆಲಸ ಮುಗಿದಿಲ್ವಾ? ಭಯ ಬೇಡ ಮಾರ್ಚ್ 30, 31ಕ್ಕೂ ಓಪನ್ ಇರುತ್ತೆ ಆರ್ಬಿಐ ಕಚೇರಿಗಳು!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಧನಂಜಯ್
Recommended Video
ಇಂದು ನಟ ಧನಂಜಯ್ ಅವರ ಹುಟ್ಟುಹಬ್ಬ. ಪ್ರತಿ ವರ್ಷ ಕೂಡ ಈ ದಿನವನ್ನು ಅವರು ತಮ್ಮ ಅಭಿಮಾನಿಗಳೊಂದಿಗೆ ಆಚರಣೆ ಮಾಡುತ್ತಾರೆ. ಅದೇ ರೀತಿ ಈ ವರ್ಷ ಸಹ ತಮ್ಮ ಫ್ಯಾನ್ಸ್ ಜೊತೆ ಸೇರಿ ಮಧ್ಯರಾತ್ರಿಯಿಂದಲೇ ಧನಂಜಯ್ ಸಂಭ್ರಮ ಪ್ರಾರಂಭ ಆಗಿದೆ.
ಹುಟ್ಟುಹಬ್ಬದ ಆಚರಣೆಗೆ ಮೊದಲು ಧನಂಜಯ್ ಅಭಿಮಾನಿಗಳಿಗೆ ಒಂದು ಮನವಿ ಮಾಡಿದರು. ಕೊಡಗಿನಲ್ಲಿ ಪ್ರವಾಹದಿಂದ ಕಣ್ಣೀರು ಹಾಕುತ್ತಿರುವ ಜನರಿಗೆ ಸಹಾಯ ಮಾಡೋಣ ಎಂದು ಕೇಳಿಕೊಂಡರು. ಅದೇ ರೀತಿ ಧನಂಜಯ್ ಅಭಿಮಾನಿಗಳು ಹೆಚ್ಚು ಕೇಕ್, ಹಾರ, ಪಟಾಕಿ ಇಲ್ಲದೆ ದುಡ್ಡನ್ನು ಕೊಡಗು ಜನರಿಗೆ ನೀಡಿದರು.
ಧನಂಜಯ್-ಸೂರಿ ಚಿತ್ರಕ್ಕೆ ಎಂಟ್ರಿ ಕೊಟ್ಟ ಮತ್ತಿಬ್ಬರು ನಟಿಯರು
ಅಭಿಮಾನಿಗಳ ಹಣದ ಜೊತೆಗೆ ತಾವು ಒಂದಷ್ಟು ಹಣ ಸೇರಿಸಿ ಅದನ್ನು ಕೊಡಗು ಜನರಿಗೆ ನೀಡುವುದಾಗಿ ಧನಂಜಯ್ ತಿಳಿಸಿದರು. 'ಟಗರು' ಸಿನಿಮಾದ ನಂತರ ದೊಡ್ಡ ಅಭಿಮಾನಿ ಬಳಗವನ್ನು ಧನಂಜಯ್ ಪಡೆದಿದ್ದು, ಈ ಬಾರಿ ಹುಟ್ಟುಹಬ್ಬಕ್ಕೆ ಬಂದ ಅಭಿಮಾನಿಗಳ ಸಂಖ್ಯೆ ಕೂಡ ಹೆಚ್ಚಿತ್ತು. ಜಿ ಪಿ ನಗರದ ಒಂದು ಮೈದಾನದಲ್ಲಿ ಧನಂಜಯ್ ಬರ್ತ್ ಡೇ ನಡೆಯಿತು.
ಅಂದಹಾಗೆ, ಡಾಲಿ ಪಾತ್ರದ ಬಳಿಕ ಧನಂಜಯ್ ದೊಡ್ಡ ಹೆಸರು ಮಾಡಿದ್ದಾರೆ. ಇದೀಗ ರಾಮ್ ಗೋಪಾಲ್ ವರ್ಮ ಅವರ ನಿರ್ದೇಶನ 'ಭೈರವ ಗೀತ' ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ. ಜೊತೆಗೆ ನಿರ್ದೇಶಕ ಸೂರಿ 'ಪಾಪ್ ಕಾರ್ನ್ ಮಂಕಿ ಟೈಗರ್' ಚಿತ್ರವನ್ನು ಧನಂಜಯ್ ಗಾಗಿ ಮಾಡುತ್ತಿದ್ದಾರೆ.