Don't Miss!
- News ಲೋಕಸಭೆ ಚುನಾವಣೆ 2024: ಪ್ರಿಯಾಂಕಾ ಗಾಂಧಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ನೂಪುರ್ ಶರ್ಮಾ ಕಣಕ್ಕೆ!?
- Lifestyle ದೇಹದಲ್ಲಿ ಈ 7 ಭಾಗದಲ್ಲಿ ಊತ ಉಂಟಾದರೆ ಅದು ಫ್ಯಾಟಿ ಲಿವರ್ನ ಲಕ್ಷಣವಾಗಿದೆ, ನಿರ್ಲಕ್ಷ್ಯ ಮಾಡಬೇಡಿ
- Finance ನೀರಿನ ಬಿಕ್ಕಟ್ಟು: ಬೆಂಗಳೂರು ತೊರೆಯಲು ಮುಂದಾದ ಅನೇಕ ನಿವಾಸಿಗಳು!
- Technology ಇಂದು ಒನ್ಪ್ಲಸ್ನ ಈ ಸ್ಪೆಷಲ್ ಮೊಬೈಲ್ನ ಫಸ್ಟ್ ಸೇಲ್!..ಬೆಲೆ ಎಷ್ಟು ಅಂತೀರಾ?
- Automobiles ಭಾರತದ ರಸ್ತೆಯಲ್ಲಿ ಘರ್ಜಿಸಲು ಬಂದ ಪವರ್ಫುಲ್ ಎಪ್ರಿಲಿಯಾ ಬೈಕ್ ವಿತರಣೆ ಮಾಹಿತಿ ಬಹಿರಂಗ
- Sports ಆರ್ಸಿಬಿ ಸ್ಟಾರ್ ಶ್ರೇಯಾಂಕಾ ಪಾಟೀಲ್ ಬಗ್ಗೆ ನಿಮಗೆಷ್ಟು ಗೊತ್ತು?; ಶಿಕ್ಷಣ, ವಯಸ್ಸು, ಕೌಟುಂಬಿಕ ಹಿನ್ನೆಲೆ ಬಗ್ಗೆ ಮಾಹಿತಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಧನಂಜಯ್ ಅಜ್ಜಿಯ ಕೋರಿಕೆಯನ್ನು ಈಡೇರಿಸಿದ ರಾಜ್ ಕುಮಾರ್!
Recommended Video
ನಟ ಧನಂಜಯ್ ಇಂದು ದೊಡ್ಡ ಸ್ಟಾರ್ ಆಗಿದ್ದಾರೆ. 'ಟಗರು' ಎಂಬ ಒಂದು ಸಿನಿಮಾ, 'ಡಾಲಿ' ಎಂಬ ಒಂದು ಪಾತ್ರ ಅವರನ್ನು ಎತ್ತರಕ್ಕೆ ಕರೆದುಕೊಂಡು ಹೋಗಿದೆ. ಈ ಚಿತ್ರದ ನಂತರ ಅವರ ಲೆವೆಲ್ ಬದಲಾಗಿದೆ. ಸ್ಯಾಂಡಲ್ ವುಡ್ ನಿಂದ ಟಾಲಿವುಡ್ ಚಿತ್ರರಂಗಕ್ಕೆ ಡಾಲಿ ಜಿಗಿದಿದ್ದಾರೆ.
ಆದರೆ, ಧನಂಜಯ್ ಅವರ ಈ ಎಲ್ಲ ಯಶಸ್ಸಿನ ಹಿಂದೆ ಒಂದು ಕುತೂಹಲಕಾರಿ ಸಂಗತಿ ಅಡಗಿದೆ. ಅದನ್ನು ಇತ್ತೀಚಿಗಷ್ಟೆ ಧನಂಜಯ್ ಹಂಚಿಕೊಂಡಿದ್ದಾರೆ. 'ಟಗರು' ಚಿತ್ರದ ಶತಕ ಸಂಭ್ರಮದಲ್ಲಿ ಮಾತನಾಡಿದ ಅವರು ತಮ್ಮ ಅಜ್ಜಿ ಹೇಳಿದ ಒಂದು ಘಟನೆಯನ್ನು ನೆನಪು ಮಾಡಿಕೊಂಡಿದ್ದಾರೆ. ಆ ಕಥೆ ಹೇಳಿದರೆ ರಾಜ್ ಆಶೀರ್ವಾದ ಧನಂಜಯ್ ಮೇಲೆ ಇದೆ ಅನಿಸುತ್ತದೆ. ಮುಂದೆ ಓದಿ...
ಧನಂಜಯ್ ಕುಟುಂಬದವರು ಅಣ್ಣಾವ್ರ ಅಭಿಮಾನಿಗಳು
ನಟ ಧನಂಜಯ್ ಅವರ ಇಡೀ ಕುಟುಂಬ ಡಾ.ರಾಜ್ ಕುಮಾರ್ ಅವರ ಅಭಿಮಾನಿಗಳು. ಅವರ ಮನೆಯ ಪ್ರತಿಯೊಬ್ಬರಿಗೂ ರಾಜ್ ಕುಮಾರ್ ಕಂಡರೆ ಬಲು ಇಷ್ಟ. ಧನಂಜಯ್ ಕೂಡ ರಾಜ್ ಸಿನಿಮಾಗಳನ್ನು ನೋಡಿ ಬೆಳೆದವರು. ಅದರಲ್ಲಿಯೂ ಧನಂಜಯ್ ಅವರ ಅಜ್ಜಿ ರಾಜ್ ಕುಮಾರ್ ಅವರ ದೊಡ್ಡ ಅಭಿಮಾನಿ ಆಗಿದ್ದರಂತೆ.
ಬೆಂಗಳೂರಿಗೆ ಬಂದಿದ್ದ ಡಾಲಿ ಅಜ್ಜಿ
ಆರು ವರ್ಷದ ಹಿಂದೆ ಹೀಗೆ ಒಮ್ಮೆ ಧನಂಜಯ್ ಅವರ ಅಜ್ಜಿ ಬೆಂಗಳೂರಿಗೆ ಬಂದಿದ್ದರಂತೆ. ಆಸ್ಪತ್ರೆಯಲ್ಲಿ ಸಣ್ಣ ಚಿಕಿತ್ಸೆಗಾಗಿ ಬಂದಿದ್ದ ಅವರು ಹೇಗೋ ಬೆಂಗಳೂರಿಗೆ ಬಂದಿದ್ದೇನೆ ರಾಜ್ ಕುಮಾರ್ ಅವರ ಮನೆಗೆ ಹೋಗಬೇಕು ಎಂದು ತೀರ್ಮಾನ ಮಾಡಿದರಂತೆ. ಆದರೆ, ಅದೇ ದಿನ ರಾಜ್ ಕುಮಾರ್ ಅವರ ಪುಣ್ಯ ಸ್ಮರಣೆ ಇದೆ ಎಂದು ತಿಳಿದ ಅವರು ರಾಜ್ ಸ್ಮಾರಕದ ಬಳಿ ಹೋದರಂತೆ.
ಡಾಲಿಯ 'ಭೈರವ' ಲುಕ್ ಗೆ ಥ್ರಿಲ್ ಆದ ಸುದೀಪ್ ಹೇಳಿದ್ದೇನು.?
ಮೊಮ್ಮಗನಿಗಾಗಿ ಪ್ರಾರ್ಥನೆ
ಕಂಠೀರವ ಸ್ಟೂಡಿಯೊದಲ್ಲಿರುವ ರಾಜ್ ಸ್ಮಾರಕಕ್ಕೆ ಬಂದ ಧನಂಜಯ್ ಅಜ್ಜಿ ನೂರಾರು ಜನರನ್ನು ನೋಡಿ ಬೆರಗಾಗಿ ನಿಂತಿದ್ದರಂತೆ. ಜನರ ನಡುವೆ ಹಿಂದೆ ನಿಂತಿದ್ದ ಅಜ್ಜಿಯನ್ನು ಅಲ್ಲೆ ಇದ್ದವರು ಕರೆದು ರಾಜ್ ಕುಮಾರ್ ಸಮಾಧಿಗೆ ನಮಸ್ಕಾರ ಮಾಡಲು ಸಹಾಯ ಮಾಡಿದರಂತೆ. ರಾಜ್ ಕುಮಾರ್ ಗೆ ನಮಿಸಿದ ಅಜ್ಜಿ ''ನನ್ನ ಮೊಮ್ಮಗ ಧನಂಜಯ ಸಿನಿಮಾ ಬಗ್ಗೆ ಕನಸು ಇಟ್ಟುಕೊಂಡಿದ್ದಾನೆ. ಅವನು ಕೂಡ ನಿಮ್ಮ ರೀತಿ ಸಿನಿಮಾ ನಟನಾಗಬೇಕು'' ಎಂದು ಪ್ರಾರ್ಥನೆ ಮಾಡಿ ಬಂದರಂತೆ.
ಅಜ್ಜಿಯ ಪ್ರಾರ್ಥನೆ ಪಲಿಸಿತು
ಈ ರೀತಿ ರಾಜ್ ಕುಮಾರ್ ಬಳಿ ಪ್ರಾರ್ಥನೆ ಮಾಡಿದ್ದ ಅಜ್ಜಿಯ ಆಸೆ ಈಗ ಈಡೇರಿದೆ. ನಟ ಧನಂಜಯ್ ಇಂದು ದೊಡ್ಡ ನಟನಾಗಿದ್ದಾರೆ. ಜೊತೆಗೆ ದೊಡ್ಮೆನೆಯ ದೊಡ್ಡ ಮಗ ಶಿವಣ್ಣನ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ. 'ಟಗರು' ಸಿನಿಮಾ ಧನಂಜಯಗೆ ದೊಡ್ಡ ಹೆಸರು ತಂದು ಕೊಟ್ಟಿದೆ.