Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಭಿಮಾನಿಯ ಅಂತಿಮ ಇಚ್ಛೆ ಪೂರ್ಣಗೊಳಿಸಿದ ವಿಜಿ
ಸ್ಯಾಂಡಲ್ ವುಡ್ ನಲ್ಲಿ ಕರಿಯ ಅಂತ ಫೇಮಸ್ ಆಗಿರೋ 'ದುನಿಯಾ' ವಿಜಯ್ ಯಾರಿಗೆ ಗೊತ್ತಿಲ್ಲ ಹೇಳಿ, ಸಾಮಾನ್ಯವಾಗಿ ಅವರು ಒಬ್ಬ ಹೀರೋ ಅಂತ ಎಲ್ಲರೂ ಅಂದುಕೊಂಡಿರುತ್ತಾರೆ.
ಇನ್ನು 'ದುನಿಯಾ' ವಿಜಯ್ ಒಬ್ಬ ಕೊಡುಗೈ ದಾನಿ ಹಾಗೂ ಸಹೃದಯಿ ಅಂತ ಕೆಲವರಿಗೆ ತಿಳಿದಿರಲೂಬಹುದು.
ಅಂದಹಾಗೆ 'ದುನಿಯಾ' ವಿಜಿ ನಟನೆಯ ಜೊತೆಗೆ ಚಾರಿಟಿ ಟ್ರಸ್ಟ್ ಕೂಡ ನಡೆಸುತ್ತಿದ್ದಾರೆ. ತುಂಬಾ ವರ್ಷಗಳಿಂದ ಈ ಕೆಲಸವನ್ನು ಮಾಡಿಕೊಂಡು ಬರುತ್ತಿರುವ ವಿಜಿ ಅವರು ಇಲ್ಲಿಯವರೆಗೂ ಸಹಾಯದ ವಿಚಾರದಲ್ಲಿ ಯಾವುದೇ ರೀತಿಯ ಪಬ್ಲಿಸಿಟಿ ತೆಗೆದುಕೊಂಡಿಲ್ಲ ಎನ್ನುವುದಕ್ಕೆ ಅವರ ಸರಳ ವ್ಯಕ್ತಿತ್ವವೇ ಉತ್ತಮ ನಿದರ್ಶನ.
ದುನಿಯಾ ವಿಜಯ್ ಅವರು ಕ್ಯಾನ್ಸರ್ ಪೀಡಿತ ತಮ್ಮ ಕಟ್ಟಾ ಅಭಿಮಾನಿಯೊಬ್ಬರನ್ನು ಸಂಧಿಸಿ ಆತನ ಕೊನೆ ಆಸೆಯನ್ನು ಪೂರ್ಣಗೊಳಿಸುವ ಮೂಲಕ ಒಳ್ಳೆ ರೀತಿಯಲ್ಲಿ ಸುದ್ದಿಯಾಗಿದ್ದಾರೆ.
ಉತ್ತರ ಕರ್ನಾಟಕದ ಆಂಟನಿ ರಾಜ್ ಎಂಬಾತ ದುನಿಯಾ ವಿಜಿ ಅವರ ಪಕ್ಕಾ ಅಭಿಮಾನಿಯಾಗಿದ್ದು, ವಿಜಯ್ ಅವರ 'ದುನಿಯಾ' ಚಿತ್ರದಿಂದ ಹಿಡಿದು ಇಲ್ಲಿಯವರೆಗೆ ನಟಿಸಿದ ಎಲ್ಲಾ ಸಿನಿಮಾವನ್ನು ಚಾಚೂ ತಪ್ಪದೇ ನೋಡಿರುವ ಈತ ಕಳೆದ ಒಂದೂವರೆ ವರ್ಷಗಳಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದಾನೆ.
ಆದ್ದರಿಂದ ವಿಜಯ್ ಅಭಿಮಾನಿಯಾದ ಆಂಟನಿ ರಾಜ್ ಗೆ ದುನಿಯಾ ವಿಜಿಯವರನ್ನು ಒಂದು ಭಾರಿ ಭೇಟಿ ಮಾಡಬೇಕೆನ್ನುವ ಆಸೆ ಇತ್ತಂತೆ. ಇದನ್ನು ಅರಿತ ಖಾಸಗಿ ಚಾನಲ್ ಒಂದು ಕಾರ್ಯಕ್ರಮವೊಂದರಲ್ಲಿ ಇಬ್ಬರು ಭೇಟಿಯಾಗುವ ಅವಕಾಶ ಮಾಡಿಕೊಟ್ಟಿದೆ.
ಇದೀಗ ವಿಜಯ್ ಅವರನ್ನು ನೋಡಿ ಮಾತಾಡಿಸಿದ ಖುಷಿಯಲ್ಲಿರುವ ಆಂಟನಿ ರಾಜ್ ಅವರಿಗೆ ಆಗಸ್ಟ್ 28 ರಂದು ತೆರೆ ಕಾಣುತ್ತಿರುವ ವಿಜಯ್ 'ಆರ್ ಎಕ್ಸ್ ಸೂರಿ' ಚಿತ್ರ ನೋಡುವ ಹಂಬಲವಿದೆಯಂತೆ.
ಈಗಾಗಲೇ ಆಂಟನಿ ರಾಜ್ ಅವರ ಆರೋಗ್ಯ ತುಂಬಾ ಕ್ರಿಟಿಕಲ್ ಆಗಿದ್ದು, ದುನಿಯಾ ವಿಜಿಯ 'ಆರ್ ಎಕ್ಸ್ ಸೂರಿ' ಚಿತ್ರವನ್ನು ಅವರು ನೋಡುವಂತಾಗಲಿ ಎಂದು ನಾವು ಈ ಸಂದರ್ಭದಲ್ಲಿ ಆಶಿಸೋಣ.