Don't Miss!
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Automobiles ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- Lifestyle ಹನುಮಂತನ ಪವಾಡ: ಈ ದೇವಾಲಯದಲ್ಲಿ ಹನುಮಾನ್ ಮೂರ್ತಿ ವರ್ಷದಿಂದ ವರ್ಷಕ್ಕೆ ಎತ್ತರ ಬೆಳೆಯುತ್ತಿದೆ!
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿ; ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ: ಸಿದ್ದರಾಮಯ್ಯ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶ್ರುತಿ ಕೈಹಿಡಿಯಲಿದ್ದಾರೆ 'ಕಲಾಕಾರ್' ಹರೀಶ್ ರಾಜ್
ಸ್ಯಾಂಡಲ್ ವುಡ್ ನಲ್ಲಿ ಜಂಪಿಂಗ್ ಸ್ಟಾರ್ ಎಂಬ ಬಿರುದಿಗೆ ಪಾತ್ರರಾಗಿರುವ ಹರೀಶ್ ರಾಜ್ (ಮೂಲ ಹೆಸರು ಹರೀಶ್ ರಾಜು) ಅವರ ಮದುವೆ ಇದೇ ಆಗಸ್ಟ್ 20ರಂದು ನಿಶ್ಚಯವಾಗಿದೆ. ಶ್ರುತಿ ಲೋಕೇಶ್ ಅವರ ಕೈಹಿಡಿಯುತ್ತಿದ್ದಾರೆ ಹರೀಶ್ ರಾಜ್.
ತಮ್ಮ ಬಾಳಸಂಗಾತಿಯನ್ನು ಮ್ಯಾಟ್ರಿಮೋನಿಯಲ್ ಜಾಲತಾಣದ ಮೂಲಕ ಆಯ್ಕೆ ಮಾಡಿದ್ದಾರೆ ಹರೀಶ್. ಕುಟುಂಬಿಕರು, ಸ್ನೇಹಿತರು ಮದುವೆಗೆ ತುಂಬಾ ಒತ್ತಾಯ ಮಾಡುತ್ತಿದ್ದರು. ಇನ್ನು ಅವರನ್ನು ಕಾಯಿಸುವುದು ಬೇಡ ಎಂದು ತಾನೇ ಈ ನಿರ್ಧಾರಕ್ಕೆ ಬಂದೆ ಎಂದಿದ್ದಾರೆ ಹರೀಶ್ ರಾಜ್. [ಗೌತಮ್ ಜತೆ ಏಳುಹೆಜ್ಜೆ ಹಾಕಿದ ರೂಪಾ ಅಯ್ಯರ್]
ಕಿರುತೆರೆಯ 'ಹೊಸ ಚಿಗುರು ಹಳೇ ಬೇರು' (1996) ಧಾರಾವಾಹಿ ಮೂಲಕ ಬಣ್ಣದ ಜಗತ್ತಿಗೆ ಅಡಿಯಿಟ್ಟ ಹರೀಶ್ ಅವರು ಮೊದಲು ಬಣ್ಣಹಚ್ಚಿದ ಚಿತ್ರ ದೋಣಿ ಸಾಗಲಿ (1998). ಬಳಿಕ ಅವರು ಕಲಾಕಾರ್ ಚಿತ್ರವನ್ನು ನಿರ್ದೇಶಿಸಿದರು. ಟಿವಿ ಜಾಹೀರಾತುಗಳಲ್ಲೂ ಕಾಣಿಸಿಕೊಂಡರು.
ಬನದ ನೆರಳು, ಹೊಂಗನಸು, ಬೆಳದಿಂಗಳಾಗಿ ಬಾ, ತನನಂ ತನನಂ, ಮೌನಿ, ತುಂಟಾಟ, ಕುರಿಗಳು ಸಾರ್ ಕುರಿಗಳು ಮುಂತಾದ ಚಿತ್ರಗಳಲ್ಲಿ ಭಿನ್ನ ರೀತಿಯ ಪಾತ್ರಗಳನ್ನು ಪೋಷಿಸಿದ್ದಾರೆ. ಮನೆಯೊಂದು ಮೂರು ಬಾಗಿಲು, ಕುಬೇರಪ್ಪ ಅಂಡ್ ಸನ್ಸ್, ಕಾವ್ಯಾಂಜಲಿ, ಮಿಂಚಿನ ಬಳ್ಳಿ, ದಂಡಪಿಂಡಗಳು, ಒನ್ ಟೀ ಸ್ಪೂನ್ ಸ್ಪೆಷಲ್ ಮುಂತಾದ ಟಿವಿ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. (ಏಜೆನ್ಸೀಸ್)