Don't Miss!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Sports IPL 2024: ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಬಿಟ್ಟು ಆರ್ಸಿಬಿ ಆಟಗಾರರು ಮಾಡಿದ್ದೇನು?
- News ಅಮಿತ್ ಶಾ ಓರ್ವ ಗೂಂಡಾ, ರೌಡಿ.! ಯತೀಂದ್ರ ಸಿದ್ದರಾಮಯ್ಯ ತೀವ್ರ ವಾಗ್ದಾಳಿ
- Automobiles Hyundai Creta: ಜನಪ್ರಿಯ ಹ್ಯುಂಡೈ ಕ್ರೆಟಾ ಕಾರನ್ನು ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು? EMI ಏನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Finance ನಿಮಗೆ ಗೊತ್ತಲ್ಲದೇ ನಿಮ್ಮ ಹೆಸರಲ್ಲಿ ಖಾತೆ ತೆರೆದಿರ್ತಾರೆ, ಪಿಂಚಣಿ ಯೋಜನೆ ಬಗ್ಗೆ ಹುಷಾರಾಗಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಹೃದಯವಂತ' ರಘುವೀರ್ ರನ್ನ ನೆನೆದು ಸಂಕಟ ಪಟ್ಟ ಜಗ್ಗೇಶ್
Recommended Video
ಒಂದ್ಕಾಲದಲ್ಲಿ ನವರಸ ನಾಯಕ ಜಗ್ಗೇಶ್ ಕಷ್ಟದ ದಿನಗಳನ್ನು ಎದುರಿಸುತ್ತಿದ್ದಾಗ, ನಟ ರಘುವೀರ್ ರವರ ಮನೆಗೆ ತೆರಳಿ 2 ಸಾವಿರ ರೂಪಾಯಿಗಳನ್ನು ಪಡೆದಿದ್ದರಂತೆ. ಹೃದಯವಂತ ಆಗಿದ್ದ ರಘುವೀರ್ ಅಂದು ಜಗ್ಗೇಶ್ ಗೆ ಸಹಾಯ ಮಾಡಿದ್ದರು.
ಕಷ್ಟದ ದಿನಗಳಲ್ಲಿ ತಮ್ಮ ಕೈ ಹಿಡಿದಿದ್ದ ನಟ ರಘುವೀರ್ ರನ್ನ ನೆನೆದು ಜಗ್ಗೇಶ್ ಸಂಕಟ ಪಟ್ಟಿದ್ದಾರೆ. ನಿನ್ನೆಯಷ್ಟೇ ನಿಮ್ಮ ಫಿಲ್ಮಿಬೀಟ್ ಕನ್ನಡ ನಟ ರಘುವೀರ್ ರವರ ಬದುಕಿನ ಕುರಿತು 'ಯಾರಿಗೂ ಗೊತ್ತಿಲ್ಲದ ರಘುವೀರ್ ಜೀವನದ ಕರಾಳ ಅಧ್ಯಾಯ' ಶೀರ್ಷಿಕೆ ಅಡಿ ಲೇಖನ ಪ್ರಕಟ ಮಾಡಿತ್ತು.
ಯಾರಿಗೂ ಗೊತ್ತಿಲ್ಲದ ರಘುವೀರ್ ಜೀವನದ ಕರಾಳ ಅಧ್ಯಾಯ
ಟ್ವೀಟ್ ಮೂಲಕ ಆ ಲೇಖನವನ್ನ ಓದಿ, ಟ್ವಿಟ್ಟರ್ ನಲ್ಲಿ ತಮ್ಮ ಹಾಗೂ ರಘುವೀರ್ ನಡುವಿನ ಒಡನಾಟದ ಕುರಿತು ಜಗ್ಗೇಶ್ ಬರೆದುಕೊಂಡಿದ್ದಾರೆ.
''ನಾನು ಪರಿಮಳ ಕಷ್ಟದ ದಿನದಲ್ಲಿ ಇವರ ಮನೆಗೆ ಹೋಗಿ 2000 ಪಡೆದಿದ್ದೆ. ತುಂಬಾ ಹೃದಯವಂತ. ಇವರ ತಂದೆ ಮುನಿಯಲ್ಲಪ್ಪ ನನ್ನ ಆತ್ಮೀಯರು. ತನ್ನ ಇಷ್ಟದ ವಿರುದ್ಧ ಆದ ಮದುವೆಯನ್ನ ಕ್ಷಮಿಸಲಿಲ್ಲ. ಅಷ್ಟು ಹಠ. ಶೋಭರಾಜ್ ರನ್ನ ಸಿನಿಮಾಗೆ ಪರಿಚಯಿಸಿದ್ದು ಇವನೇ. ಎಸ್.ನಾರಾಯಣ್ ನಿರ್ದೇಶಕ ಆದದ್ದು ಇವನಿಂದ. ಇವನ ಸಂಸ್ಥೆಯಲ್ಲಿ ನಾನು ಸಂಬಳ ಪಡೆದಿರುವೆ. ಸಂಕಟವಾಯಿತು ನೆನೆದು'' ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
ನಟ ರಘುವೀರ್ ಕೊನೆಯುಸಿರೆಳೆದಾಗ, ಅಂತಿಮ ದರ್ಶನ ಪಡೆಯಲು ಭೇಟಿ ಕೊಟ್ಟ ಕನ್ನಡದ ಕೆಲವೇ ಕೆಲವು ನಟರ ಪೈಕಿ ಜಗ್ಗೇಶ್ ಕೂಡ ಒಬ್ಬರು.
'ಅಜಯ್ ವಿಜಯ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ರಘುವೀರ್, 'ಚೈತ್ರ ಪ್ರೇಮಾಂಜಲಿ' ಮತ್ತು 'ಶೃಂಗಾರ ಕಾವ್ಯ' ಅಂತಹ ಹಿಟ್ ಸಿನಿಮಾಗಳನ್ನು ನೀಡಿದ್ದರು. ವೈಯುಕ್ತಿಕ ಬದುಕಿನಲ್ಲಿ ಆದ ಕೆಲ ಘಟನೆಗಳಿಂದ ರಘುವೀರ್ ಮನಸ್ಸು ಘಾಸಿಗೊಂಡಿತ್ತು. ಮೇ 8, 2014 ರಂದು ಹೃದಯಾಘಾತದಿಂದ ರಘುವೀರ್ ನಿಧನರಾದರು.