Don't Miss!
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- News Raichur: ರಾಯಚೂರಿನಲ್ಲಿ ತಣ್ಣಗಾಗದ ಬಂಡಾಯದ ಬೆಂಕಿ: ಬಿವಿ ನಾಯಕ್, ತಿಪ್ಪರಾಜು ಜೊತೆ ಬಿಜೆಪಿ ಸಂಧಾನ ವಿಫಲ!
- Technology Tecno: ಬಹುನಿರೀಕ್ಷಿತ ಟೆಕ್ನೋ ಪೋವಾ 6 ಪ್ರೊ ಲಾಂಚ್! 12GB RAM.. 6000mAh ಬ್ಯಾಟರಿ.. ಬೆಲೆ ಎಷ್ಟು?
- Finance ಮೃತರ ಖಾತೆಯಲ್ಲಿರುವ ಹಣವನ್ನು ಕುಟುಂಬಸ್ಥರು ಡ್ರಾ ಮಾಡಬಹುದಾ, ಬ್ಯಾಂಕ್ ನಿಯಮಾವಳಿ ಏನು ಹೇಳುತ್ತೆ?
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Lifestyle ಬಾಯಲ್ಲಿ ನೀರು ತರಿಸುವ ಮಾವಿನ ಕಾಯಿ ಚಟ್ನಿ..! 5 ನಿಮಿಷದಲ್ಲಿ ರೆಡಿ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹಣೆ ಬರಹ ಚೆನ್ನಾಗಿದ್ದು ಚಪ್ಪಾಳೆ ಬೀಳುವವರೆಗು ಮಾತ್ರ ಕಲಾವಿದ ಕೈಲಾಸದಲ್ಲಿರುತ್ತಾನೆ; ನಟ ಜಗ್ಗೇಶ್
ಸ್ಯಾಂಡಲ್ ವುಡ್ ನ ಹಿರಿಯ ನಟ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅನೇಕ ವಿಚಾರಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿರುತ್ತಾರೆ. ದೇವರನ್ನು ಅಪಾರವಾಗಿ ನಂಬುವ ಜಗ್ಗೇಶ್ ಗುರು ರಾಯರ ಅಪ್ಪಟ ಭಕ್ತ. ಸದಾ ರಾಯರನ್ನು ನೆನೆಯುವ ಜಗ್ಗೇಶ್, ತಂದೆ-ತಾಯಿಯನ್ನು ಅಷ್ಟೆ ನೆನಪಿಸಿಕೊಳ್ಳುತ್ತಾ ಅವರನ್ನು ಪೂಜಿಸುತ್ತಾ, ಆರಾಧಿಸುತ್ತಾರೆ.
Recommended Video
ಇತ್ತೀಚಿಗಷ್ಟೆ ತಂದೆಯ ಹಟ್ಟುಹಬ್ಬದ ದಿನ ಅಪ್ಪನ ಜೊತೆಗೆ ಇರುವ ಫೋಟೋ ಹಂಚಿಕೊಂಡು ತಂದೆ-ತಾಯಿಯ ಮಹತ್ವದ ಬಗ್ಗೆ ಯುವ ಜನತೆಗೆ ಹೇಳಿದ್ದರು. ಇದೀಗ ಮತ್ತೊಂದು ವಿಚಾರವನ್ನು ಹಂಚಿಕೊಂಡಿದ್ದಾರೆ. ಅಭಿಮಾನಿಯೊಬ್ಬರು ಜಗ್ಗೇಶ್ ಗೆ, ಸಾಮಾನ್ಯವಾಗಿ ಸ್ಟಾರ್ಸ್ ಬ್ರಾಂಡ್ ಪ್ರಚಾರ ಮಾಡುತ್ತಿರುತ್ತಾರೆ. ಆದರೆ ನೀವು ಯುವ ಜನತೆಗೆ ಮೌಲ್ಯಯುತವಾದ ವಿಚಾರವನ್ನು ಹೇಳುತ್ತೀರಿ ಎಂದು ಹೇಳಿದ್ದಾರೆ.
ನಿಮ್ಮ ಹೆಸರಿನ ಪಕ್ಕ ಯಾವ ನಟ, ನಟಿ, ರಾಜಕಾರಣಿ ಹೆಸರು ಸೇರಿಸಬೇಡಿ: ನಟ ಜಗ್ಗೇಶ್ ಮನವಿ
ಇದಕ್ಕೆ ಉತ್ತರಿಸಿದ ಜಗ್ಗೇಶ್ 'ಏನೇ ದುಡಿದರು ಮನುಷ್ಯ ತಿನ್ನೋದು ಒಪ್ಪತ್ತಿಗೆ 300 grm ಅನ್ನ ಮಾತ್ರ. ಎಷ್ಟೇ ಬೆಳೆದರು ಅವನ ತಂದೆ ತಾಯಿ ಬದಲಾಗರು. ಹಣೆಬರಹ ಚೆನ್ನಾಗಿದ್ದು ಚಪ್ಪಾಳೆ ಬೀಳುವವರೆಗು ಮಾತ್ರ ಕಲಾವಿದ ಕೈಲಾಸದಲ್ಲಿ. ಕೊನೆಗೆ ಮನುಷ್ಯನ ನೆನೆಯುವುದು ಗುಣ ನಡತೆಯಿಂದ ಮಾತ್ರ. ಅಪ್ಪ-ಅಮ್ಮ ಕಲಿಸಿದ ಗುಣವಿದು, ಕೊನೆಯವರೆಗು ಪಾಲಿಸಿ ಸತ್ತ ಮೇಲು ಬದುಕಲು ಯತ್ನಿಸುವೆ' ಎಂದು ಹೇಳಿದ್ದಾರೆ.
ಇತ್ತೀಚಿಗಷ್ಟೆ ತಂದೆ ತಾಯಿಯ ಬಗ್ಗೆ ಜಗ್ಗೇಶ್, 'ಜನ್ಮಕೊಟ್ಟ ತಂದೆಗೆ ತನ್ನ ಬೆಳವಣಿಗೆಗಿಂತ ಮಕ್ಕಳ ಬೆಳವಣಿಗೆ ನೋಡಲು ಶಬರಿಯಂತೆ ಕಾಯೋದು ಯಾಕೆ ಎಂದರೆ ಮಗ ಗೆದ್ದರೆ ತಾನು ಗೆದ್ದಂತೆ ತನ್ನ ವಂಶಗೆದ್ದಂತ ಭಾವ. ಎಲ್ಲಾ ಯುವ ಸಮಾಜಕ್ಕೂ ನನ್ನ ಸಂದೇಶ ದಯಮಾಡಿ ಎಷ್ಟೆ ಶ್ರಮವಾದರು ಅಪಮಾನವಾದರು, ಅವಮಾನವಾದರು ಸಹಿಸಿ ನಿಮ್ಮ ಮಿತಿಯಲ್ಲಿ ನಿಮ್ಮ ಇಷ್ಟ ಕ್ಷೇತ್ರದಲ್ಲಿ ಅಪ್ಪ ಬದುಕಿರುವಾಗಲೇ ಜೀವನ ಗೆದ್ದು ಅಪ್ಪನಿಗೆ ಹೆಮ್ಮೆ ಪಡುವಂತೆ ಮಾಡಿ' ಎಂದು ದೀರ್ಘವಾಗಿ ಬರೆದುಕೊಂಡಿದ್ದರು.