Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಷ್ಟದ ದಿನದಲ್ಲಿ ಕೆಲಸ ಕೊಟ್ಟು ಸಂಭಾವನೆ ನೀಡಿದ ರವಿಮಾಮನಿಗೆ ಜಗ್ಗೇಶ್ ಶುಭಾಶಯ
Recommended Video
ಹೆಸರಿಗೆ 'ಏಕಾಂಗಿ' ಆದರೂ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ನಟ ಕ್ರೇಜಿ ಸ್ಟಾರ್ ರವಿಚಂದ್ರನ್. 'ಸಿನಿಮಾನೇ ಉಸಿರು' ಎಂದು ನಂಬಿರುವ ರವಿಚಂದ್ರನ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ.
80-90 ರ ದಶಕದಲ್ಲಿಯೇ ಲಕ್ಷಾಂತರ ರೂಪಾಯಿ ಬಂಡವಾಳ ಸುರಿದು ಸದಭಿರುಚಿಯ ಸಿನಿಮಾ ಮಾಡಿದವರು ರವಿಚಂದ್ರನ್. ಚಿತ್ರರಂಗದಲ್ಲಿ ತಾವು ಬೆಳೆಯುವುದರ ಜೊತೆಗೆ ಅನೇಕ ನಟ-ನಟಿಯರು ಹಾಗೂ ತಂತ್ರಜ್ಞರಿಗೂ ಭದ್ರ ಬುನಾದಿ ಹಾಕಿಕೊಟ್ಟವರು ರವಿಚಂದ್ರನ್.
ನವರಸ ನಾಯಕ ಜಗ್ಗೇಶ್ ಕೂಡ ಕಷ್ಟದ ಸಮಯದಲ್ಲಿದ್ದಾಗ, ಅವರನ್ನ ಕೈಹಿಡಿದವರು ಇದೇ ರವಿಚಂದ್ರನ್. ಇಂತಿಪ್ಪ ರವಿಚಂದ್ರನ್ ಗೆ ಧನ್ಯವಾದ ಸಲ್ಲಿಸುವುದರ ಜೊತೆಗೆ ಜನ್ಮದಿನದ ಶುಭಾಶಯಗಳನ್ನು ತಿಳಿಸಿದ್ದಾರೆ ನಟ ಜಗ್ಗೇಶ್.
'ರವಿಮಾಮ'ನಿಗೆ ವಿಭಿನ್ನವಾಗಿ ಶುಭಕೋರಿದ ದರ್ಶನ್, ಮನೋರಂಜನ್, ಸುನಿ
''1984 ರ ಕಷ್ಟದ ದಿನಗಳಲ್ಲಿ ಕೆಲಸ ಕೊಟ್ಟು, ಸಂಭಾವನೆ ನೀಡಿ ಬದುಕಿಗೆ ನಂಬಿಕೆ ಹುಟ್ಟಿಸಿದ ಕನ್ನಡದ ರಿಯಲ್ ಶೋ ಮ್ಯಾನ್ ಸಹೋದರ ರವಿಚಂದ್ರನ್ ರವರಿಗೆ ಹುಟ್ಟುಹಬ್ಬದ ಶುಭಾಶಯಗಳು. ನೂರ್ಕಾಲ ಸುಖವಾಗಿ ಬಾಳಿ. ನನ್ನಂತೆ ಅನೇಕರ ಆಶಾಜ್ಯೋತಿಯಾಗಿ.. ಲವ್ ಯು ಬ್ರೋ'' ಎಂದು ಟ್ವೀಟ್ ಮಾಡಿದ್ದಾರೆ ನಟ ಜಗ್ಗೇಶ್.
ರವಿಚಂದ್ರನ್ ಸಿಕ್ಕಾಪಟ್ಟೆ ಕ್ರೇಜಿ, ಅಷ್ಟೇ ಮಿಸ್ಟರಿ ಎಂದ ಕಿಚ್ಚ ಸುದೀಪ್.!
1984 ರ ಕಷ್ಟದದಿನದಲ್ಲಿ ಕೆಲಸಕೊಟ್ಟು ಸಂಭಾವನೆ ನೀಡಿ ಬದುಕಿಗೆ ನಂಬಿಕೆ ಹುಟ್ಟಿಸಿದ ಕನ್ನಡದ real show man
— ನವರಸನಾಯಕ ಜಗ್ಗೇಶ್ (@Jaggesh2) May 30, 2018
ಸಹೋದರ ರವಿಚಂದ್ರನ್ ರವರಿಗೆ ಹುಟ್ಟುಹಬ್ಬದ ಶುಭಾಷಯಗಳು..ನೂರ್ಕಾಲ ಸುಖವಾಗಿ ಬಾಳಿ..ನನ್ನಂತೆ ಅನೇಕರ ಆಶಾಜೋತಿಯಾಗಿ..love you bro.. pic.twitter.com/WWL9jVzQy4
ಅಂದ್ಹಾಗೆ, ಇಂದು ತಮ್ಮ 57 ನೇ ಜನ್ಮದಿನವನ್ನ ಅಭಿಮಾನಿಗಳ ಜೊತೆಗೆ ರವಿಚಂದ್ರನ್ ಸಂಭ್ರಮದಿಂದ ಆಚರಿಸಿಕೊಂಡರು.