Don't Miss!
- News ರಾಜ್ಯದ ವಿವಿಧೆಡೆ ಮಳೆರಾಯನ ಆರ್ಭಟ; ಕರ್ನಾಟಕದ ಪ್ರಮುಖ ಡ್ಯಾಂಗಳ ನೀರಿನ ಮಟ್ಟ ಎಷ್ಟು ? ಇಲ್ಲಿದೆ ಸಂಪೂರ್ಣ ವಿವರ
- Sports 'ಟಿ20 ವಿಶ್ವಕಪ್ಗೆ ಈತನನ್ನು ಆಯ್ಕೆ ಮಾಡಿ'; ಅಜಿತ್ ಅಗರ್ಕರ್ಗೆ ಬಂತು ದೊಡ್ಡ ಮನವಿ!
- Finance ಡಾ. ರಾಜ್ಕುಮಾರ್ ಜನ್ಮದಿನದಂದು ಹೊಸ ಉದ್ಯಮ ಆರಂಭಿಸಿದ ಅಶ್ವಿನಿ ಪುನೀತ್ ರಾಜ್ಕುಮಾರ್
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೊನೆಯ ಕ್ಷಣದಲ್ಲಿ ಎಚ್ಚೆತ್ತುಕೊಂಡ 'ಅಭಿಮನ್ಯು' ನಿಖಿಲ್ ಕುಮಾರ್
Recommended Video
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಸಿನಿಮಾ ಕುರುಕ್ಷೇತ್ರ ರಿಲೀಸ್ ಗೆ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದೆ. ಚಿತ್ರದಲ್ಲಿ ದೊಡ್ಡ ದೊಡ್ಡ ಸ್ಟಾರ್ ಇದ್ದರು ಇದೂ ದರ್ಶನ್ ಸಿನಿಮಾ ಅಂತಾನೆ ಖ್ಯಾತಿ ಗಳಿಸಿದೆ. ಸದ್ಯ ಆಗಸ್ಟ್ 2ರ ಬದಲಿಗೆ ಆಗಸ್ಟ್ 9ಕ್ಕೆ ರಿಲೀಸ್ ಡೇಟನ್ನು ಪೋಸ್ಟ್ ಪೋನ್ ಮಾಡಿಕೊಂಡಿರುವ ಕುರುಕ್ಷೇತ್ರ ಈಗ ಬೇರೆ ಬೇರೆ ಭಾಷೆಯಲ್ಲಿ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದೆ.
ತಮಿಳು, ತೆಲುಗು, ಹಿಂದಿಯಲ್ಲಿ ಪ್ರಮೋಷನ್ ನಲ್ಲಿ ಚಿತ್ರತಂಡ ತೊಡಗಿಕೊಂಡಿದ್ರೆ ಮತ್ತೊಂದೆಡೆ ಚಿತ್ರದ ಅಭಿಮನ್ಯು ಪಾತ್ರಧಾರಿ ಡಬ್ಬಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಹೌದು, ಚಿತ್ರ ರಿಲೀಸ್ ಗೆ ಸಮೀಪಿಸುತ್ತಿದ್ರೆ ಇತ್ತ ನಿಖಿಲ್ ಕುಮಾರ್ ಈಗ ಎಚ್ಚೆತ್ತುಕೊಂಡು ಡಬ್ಬಿಂಗ್ ಮಾಡುವುದಾಗಿ ಹೇಳಿಕೊಂಡಿದ್ದಾರೆ.
ಕುರುಕ್ಷೇತ್ರ ಆಡಿಯೋ ವೇದಿಕೆಗೆ ಎಲ್ಲರೂ ಬಂದ್ರು, ಅವರೊಬ್ಬರು ಬರಲಿಲ್ಲ.!
ಚುನಾವಣೆಯ ನಂತರ ನಿಖಿಲ್ ಎಲ್ಲೋಗಿದ್ದಾರೆ ಎನ್ನುವ ಬಗ್ಗೆ ಯಾವುದೆ ಮಾಹಿತಿ ಇರಲಿಲ್ಲ. ಮಂಡ್ಯ ಚುನಾವಣೆಯ ಸೋಲಿನಿಂದ ಬೇಸರಕೊಂಡಿದ್ದ ನಿಖಿಲ್ ಸಾಮಾಜಿಕ ಜಾಲತಾಣದ ಮೂಲಕ ಒಂದು ಪೋಸ್ಟ್ ಮಾಡಿ ಸೈಲೆಂಟ್ ಆಗಿದ್ರು. ಆದ್ರೀಗ ಕುರುಕ್ಷೇತ್ರ ರಿಲೀಸ್ ಸಮಯದಲ್ಲಿ ಡಬ್ಬಿಂಗ್ ಗೆ ಹೊರಟಿದ್ದಾರೆ.
ಕುರುಕ್ಷೇತ್ರಕ್ಕೆ ನಿಖಿಲ್ ಡಬ್ಬಿಂಗ್
ಕುರುಕ್ಷೇತ್ರ ಸಿನಿಮಾ ರಿಲೀಸ್ ಹತ್ತಿರವಾಗುತ್ತಿದೆ. ಇನ್ನೇನು ಆಗಸ್ಟ್ 9ಕ್ಕೆ ಸಿನಿಮಾ ತೆರೆಗೆ ಬರುತ್ತೆ. ಈಗಾಗಲೆ ಪ್ರಮೋಷನ್ ನಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಆದ್ರೆ ಇಂದು ನಿಖಿಲ್ ಕುಮಾರ ಸ್ವಾಮಿ ಚಿತ್ರಕ್ಕೆ ಡಬ್ ಮಾಡುತ್ತಿದ್ದಾರೆ. ಇಂದು ಸಂಜೆ 6.30ರ ಸುಮಾರಿಗೆ ನಿಖಿಲ್ ಆಕಾಶ್ ಸ್ಟೂಡಿಯೋದಲ್ಲಿ ಡಬ್ಬಿಂಗ್ ಗೆ ಹಾಜರಾಗಲಿದ್ದಾರೆ.
ದರ್ಶನ್ ಚಿತ್ರಕ್ಕೆ 'ಬಾಹುಬಲಿ' ಸಂಗೀತ ನಿರ್ದೇಶಕ ಸಾಥ್
ನಿಖಿಲ್ ಡಬ್ಬಿಂಗ್ ವಿಚಾರ ಚರ್ಚೆಯಾಗಿತ್ತು
ಈಗಾಗಲೆ ಕುರುಕ್ಷೇತ್ರ ಚಿತ್ರದ ಟೀಸರ್ ಮತ್ತು ಟ್ರೈಲರ್ ರಿಲೀಸ್ ಆಗಿದೆ. ಚಿತ್ರದಿಂದ ರಿಲೀಸ್ ಆದ ಮೊದಲ ಟೀಸರ್ ನಲ್ಲಿ ನಿಖಿಲ್ ಡಬ್ ಮಾಡಿದ್ದರು. ಆದ್ರೆ ನಂತರ ರಿಲೀಸ್ ಆದ ಟ್ರೈಲರ್ ನಲ್ಲಿ ನಿಖಿಲ್ ಧ್ವನಿ ಮಾಯವಾಗಿತ್ತು. ಇದರಿಂದ ಚಿತ್ರದಲ್ಲಿ ನಿಖಿಲ್ ಡಬ್ ಮಾಡಿಲ್ಲ ಎನ್ನುವ ಮಾತುಗಳು ಭಾರಿ ಚರ್ಚಿಯಾಗಿತ್ತು. ರವಿಚಂದ್ರನ್ ಬಿಟ್ಟರೆ ಉಳಿದೆಲ್ಲ ಕನ್ನಡ ನಟರು ಅವರವರ ಪಾತ್ರಕ್ಕೆ ಅವರೆ ಡಬ್ ಮಾಡಿದ್ದಾರೆ. ಆದ್ರೆ ನಿಖಿಲ್ ಈಗ ಡಬ್ ಮಾಡುತ್ತಿದ್ದಾರೆ.
ಚಿತ್ರದ ಪೋಸ್ಟ್ ಪೋನ್ ಗೆ ಇದೇನಾ ಕಾರಣ?
ಕುರುಕ್ಷೇತ್ರ ರಿಲೀಸ್ ತಡವಾಗುತ್ತಿರುವುದು ನಿಖಿಲ್ ಕಾರಣದಿಂದ ಎನ್ನುವ ಮಾತುಗಳು ಈ ಹಿಂದೆ ಇಂದನು ಕೇಳಿ ಬರುತ್ತಿತ್ತು. ಆದ್ರೀಗ ರಿಲೀಸ್ ಸಮಯದಲ್ಲಿ ಡಬ್ಬಿಂಗ್ ಗೆ ಹೊರಟಿರುವುದನ್ನು ನೋಡಿದ್ರೆ ಇದು ನಿಜ ಇರಬಹುದು ಎನ್ನುವ ಅನುಮಾನ ಕಾಣುತ್ತಿದೆ. ಆಗಸ್ಟ್ 2ಕ್ಕೆ ರಿಲೀಸ್ ಮಾಡಲು ಪ್ಲಾನ್ ಮಾಡಿಕೊಂಡಿದ್ದ ಚಿತ್ರತಂಡ ದಿಢೀರನೆ ಮುಂದಕ್ಕೆ ಹೋಗಿರುವ ಅಸಲಿ ಕಾರಣ ಇದೇನಾ ಎನ್ನುವ ಅನುಮಾನ ಎಲ್ಲರನ್ನು ಕಾಡುತ್ತಿದೆ.
ಕುರುಕ್ಷೇತ್ರದಲ್ಲಿ ನಿಖಿಲ್ ಕುಮಾರ್ ಬಗ್ಗೆ ಈಗಲೂ ಕಾಡ್ತಿದೆ ಗೊಂದಲ.!
ಆಡಿಯೋ ರಿಲೀಸ್ ಗೂ ಬಂದಿರಲ್ಲಿಲ್ಲ ನಿಖಿಲ್
ಕುರುಕ್ಷೇತ್ರ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲು ನಿಖಿಲ್ ಕಾಣಿಸಿಕೊಂಡಿರಲಿಲ್ಲ. ಚಿತ್ರದಲ್ಲಿ ಅಭಿನಯಿಸದ ಎಲ್ಲಾ ಕಲಾವಿದರು ಆಡಿಯೋ ರಿಲೀಸ್ ವೇದಿಕೆಮೇಲಿದ್ದರು ಆದ್ರೆ ನಿಖಿಲ್ ಗೈರು ಎದ್ದು ಕಾಣುತ್ತಿತ್ತು. ಆಡಿಯೋ ರಿಲೀಸ್ ಮಾತ್ರವಲ್ಲದೆ ಪ್ರಮೋಷನ್ ನಲ್ಲು ಭಾಗಿಯಾಗುತ್ತಿಲ್ಲ ನಿಖಿಲ್. ಚುನಾವಣೆಯ ನಂತರ ನಿಖಿಲ್ ಎಲ್ಲಿಯು ಕಾಣಿಸಿಕೊಂಡಿಲ್ಲ. ಆದ್ರಿವತ್ತು ಅಭಿಮನ್ಯು ಪಾತ್ರಕ್ಕೆ ಡಬ್ಬಿಂಗ್ ಮಾಡುವ ಮೂಲಕ ಮತ್ತೆ ದರ್ಶನ ನೀಡುತ್ತಿದ್ದಾರೆ.