Don't Miss!
- Sports IPL 2024: ಹೈದರಾಬಾದ್-ಡೆಲ್ಲಿ ನಡುವೆ ಮೆಗಾ ಫೈಟ್; ಟಾಸ್, ಆಡುವ 11ರ ಬಳಗದ ವರದಿ
- News ಈ ವರ್ಷ ಜಗತ್ತಿನಲ್ಲಿ ಒಳ್ಳೆಯದಕ್ಕಿಂತ ಕೆಟ್ಟದ್ದೇ ಕೇಳೋದು ಬಹಳ ಐತಿ; ಮಳೆ,ಬೆಳೆಯ ಕುರಿತು ಬಸವೇಶ್ವರ ಕಾರ್ಣಿಕ ಹೇಳಿದ್ದೇನು?
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಾರಾಯಣ್ ಪುತ್ರನಿಗೆ ಲಾಟರಿ ಹೊಡಿತು : ಡಿ ಬಾಸ್ ಚಿತ್ರದಲ್ಲಿ ಪಂಕಜ್!
Recommended Video
ನಿರ್ದೇಶಕ ಎಸ್ ನಾರಾಯಣ್ ಅನೇಕ ಸ್ಟಾರ್ ನಟರ ಜೊತೆಗೆ ಕೆಲಸ ಮಾಡಿದ್ದಾರೆ. ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ. ಅದೇ ರೀತಿ ನಾರಾಯಣ್ ಬಳಿಕ ಅವರ ಪರಂಪರೆಯನ್ನು ಮುಂದುವರೆಸಲು ಬಂದವರು ಅವರ ಮಗ ಪಂಕಜ್.
ಪಂಕಜ್ ಈಗಾಗಲೇ ನಾಯಕನಾಗಿ ಕೆಲವು ಸಿನಿಮಾ ಮಾಡಿದ್ದಾರೆ. ಆಗಿದ್ದರೂ, ಪಂಕಜ್ ಗೆ ಈವರೆಗೆ ದೊಡ್ಡ ಸಕ್ಸಸ್ ಸಿಕ್ಕಿಲ್ಲ. ಅದೇ ಕಾರಣಕ್ಕೋ ಏನೋ ಅವರ ಯಾವುದೇ ಸಿನಿಮಾಗಳು ಇತ್ತೀಚಿಗೆ ಬಿಡುಗಡೆಯಾಗಿಲ್ಲ. ಹೀಗಿದ್ದ ಪಂಕಜ್ ಪಾಲಿಗೆ ಈಗ ಅದೃಷ್ಟ ಬಂದಿದೆ.
'ಒಡೆಯ'ನಾದ ದರ್ಶನ್ ಗೆ ಬಲ ನೀಡಿದ ಅಂಬಿ
ನಟ ದರ್ಶನ್ ಅವರ ಸಿನಿಮಾದಲ್ಲಿ ಪಂಕಜ್ ನಟಿಸುತ್ತಿದ್ದಾರೆ. ಅದ್ಯಾವ ಸಿನಿಮಾ ಎನ್ನುವ ವಿವರ ಮುಂದಿದೆ ಓದಿ...
'ಒಡೆಯ' ಸಿನಿಮಾದಲ್ಲಿ ನಟನೆ
ಎಸ್ ನಾರಾಯಣ್ ಪುತ್ರನಿಗೆ ಈಗ ದೊಡ್ಡ ಅವಕಾಶ ಸಿಕ್ಕಿದೆ ದರ್ಶನ್ ನಟನೆಯ 'ಒಡೆಯ' ಸಿನಿಮಾದಲ್ಲಿ ಪಂಕಜ್ ನಟಿಸುತ್ತಿದ್ದಾರೆ. ಡಿ ಬಾಸ್ ಅವರ ಬಹು ನಿರೀಕ್ಷಿತ ಸಿನಿಮಾ ಇದಾಗಿದ್ದು, ಇದರಲ್ಲಿ ಪಂಕಜ್ ಕಾಣಿಸಿಕೊಳ್ಳುವ ಅವಕಾಶ ಪಡೆದಿದ್ದಾರೆ.
ತಮ್ಮನ ಪಾತ್ರ
ವಿಶೇಷ ಅಂದರೆ, ದರ್ಶನ್ ಅವರ ತಮ್ಮನ ಪಾತ್ರದಲ್ಲಿ ಪಂಕಜ್ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ದರ್ಶನ್ ಅವರಿಗೆ ನಾಲ್ಕು ಜನ ಸಹೋದರರು ಇರುತ್ತಾರೆ. ಇವರಲ್ಲಿ ಒಬ್ಬರಾಗಿ ಪಂಕಜ್ ಕಾಣಿಸಿಕೊಳ್ಳುತ್ತಿದ್ದಾರೆ. 'ಒಡೆಯ' ತಮಿಳಿನ 'ಮೀರಂ' ಸಿನಿಮಾದ ರಿಮೇಕ್ ಆಗಿದೆ.
ಮತ್ತೊಂದು ಮಹತ್ವದ ಪಾತ್ರದಲ್ಲಿ ಡಿ ಬಾಸ್ : ಭಗತ್ ಸಿಂಗ್ ಆದ ದರ್ಶನ್!
ಉಳಿದ ತಮ್ಮಂದಿರು
ಪಂಕಜ್ ರನ್ನು ಹೊರತು ಪಡಿಸಿ ಯಶಸ್, ನಿರಂಜನ್ ಹಾಗೂ ಸಮರ್ಥ್ ಸಿನಿಮಾದಲ್ಲಿ ದರ್ಶನ್ ಸಹೋದರರಾಗಿದ್ದಾರೆ. ನಟ ಯಶಸ್ ಸೂರ್ಯ ದರ್ಶನ್ ಆಪ್ತರಾಗಿದ್ದು, 'ಕುರುಕ್ಷೇತ್ರ' ಚಿತ್ರದಲ್ಲಿ ಸಹ ಅವರ ಜೊತೆಗೆ ನಟಿಸಿದ್ದಾರೆ. ಸಮರ್ಥ್ ನಿರ್ಮಾಪಕ ಸಂದೇಶ್ ನಾಗರಾಜ್ ಅವರ ತಮ್ಮನ ಮಗ.
ನಾಯಕಿ ಆಯ್ಕೆ ಆಗಿಲ್ಲ
'ಒಡೆಯ' ಸಿನಿಮಾದಲ್ಲಿ ದರ್ಶನ್ ಜೋಡಿ ಯಾರು ಎಂಬ ನಿರೀಕ್ಷೆ ಇದೆ. ಆದರೆ, ಅದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. ಸಿನಿಮಾದ ಪಾತ್ರಕ್ಕೆ ತಕ್ಕಂತೆ ಇರುವ ನಾಯಕಿಯನ್ನು ಸದ್ಯ ಚಿತ್ರತಂಡ ಹುಡುಕುತ್ತಿದೆ. ತಮಿಳಿನಲ್ಲಿ ಈ ಪಾತ್ರವನ್ನು ತಮನ್ನಾ ನಿರ್ವಹಿಸಿದ್ದರು.
ಸಪ್ಟೆಂಬರ್ 10 ರಿಂದ ಶೂಟಿಂಗ್
ಈಗಾಗಲೇ 'ಒಡೆಯ' ಸಿನಿಮಾ ಅದ್ದೂರಿಯಾಗಿ ಲಾಂಚ್ ಆಗಿದೆ. ಚಿತ್ರದ ಶೂಟಿಂಗ್ ಸಪ್ಟೆಂಬರ್ 10 ರಿಂದ ಪ್ರಾರಂಭ ಆಗಲಿದೆ. ಮೈಸೂರು, ಹೈದರಾಬಾದ್ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಯಲಿದೆ.