Don't Miss!
- News Kolar Lok Sabha elections: ಕೋಲಾರ ಲೋಕಸಭಾ ಕ್ಷೇತ್ರದಲ್ಲಿ 'ಸ್ಥಳೀಯ' V/s 'ಹೊರಗಿನವ' ಫೈಟ್!
- Finance bangalore royal challengers ತಂಡದಿಂದ ನಗರದ ಎರಡು ಕೆರೆಗಳ ಪುನರುಜ್ಜೀವನ
- Automobiles ಪೆಟ್ರೋಲ್ಗೆ ಹೆಚ್ಚು ಹಣ ಖರ್ಚು ಮಾಡುತ್ತಿದ್ದೀರಾ?.. ಇಲ್ಲಿವೆ ಬೆಸ್ಟ್ ಎಲೆಕ್ಟ್ರಿಕ್ ಸ್ಕೂಟರ್ಗಳು, ಜಾಸ್ತಿ ಓ
- Technology Samsung: ಭಾರತದಲ್ಲಿ ಹೊಸ ವೇರಿಯಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೃದಯಶಿವ 'ಮೊದಲ ಮಳೆ'ಗೆ ಪ್ರೇಮ್ ನಾಯಕ
ನಿರ್ದೇಶಕನಾಗಬೇಕು ಅಂತ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಹೃದಯಶಿವ ಆಗಿದ್ದು ಮಾತ್ರ ಗೀತ ಸಾಹಿತಿ. 'ಮುಂಗಾರು ಮಳೆ' ಚಿತ್ರದ ''ಇವನು ಗೆಳೆಯನಲ್ಲ...'', ''ಸುವ್ವಿ ಸುವ್ವಾಲಿ...'' ಸೇರಿದಂತೆ 280 ಕ್ಕೂ ಹೆಚ್ಚು ಚಿತ್ರಗಳಿಗೆ ಸಾಹಿತ್ಯ ಬರೆದಿರುವ ಹೃದಯಶಿವ ಈಗ ತಮ್ಮ ಕನಸನ್ನ ಈಡೇರಿಸಿಕೊಳ್ಳುವ ಕಾಲ ಹತ್ತಿರ ಬಂದಿದೆ.
ಅರ್ಥಾತ್, ಗೀತ ಸಾಹಿತಿ ಹೃದಯಶಿವ ನಿರ್ದೇಶಕನಾಗುತ್ತಿದ್ದಾರೆ.! ಹೌದು, 'ಮೊದಲ ಮಳೆ' ಅನ್ನುವ ಅಪ್ಪಟ ಪ್ರೇಮ ಕಥೆ ಚಿತ್ರವನ್ನ ಹೃದಯಶಿವ ನಿರ್ದೇಶಿಸಲಿದ್ದಾರೆ. [ಕ್ಲಾಸ್+ಮಾಸ್ ಚಿತ್ರ ಸಾಹಿತಿ ಹೃದಯ ಶಿವಗಿರೊದೊಂದೇ ಆಸೆ!]
ಈಗಾಗಲೇ ಕಥೆ-ಚಿತ್ರಕಥೆ ರೆಡಿಮಾಡಿಕೊಂಡಿರುವ ಹೃದಯಶಿವ ಸದ್ಯದಲ್ಲೇ ಶೂಟಿಂಗ್ ಶುರುಮಾಡಲಿದ್ದಾರೆ. ಅಂದ್ಹಾಗೆ, 'ಮೊದಲ ಮಳೆ' ಚಿತ್ರದಲ್ಲಿ ನೆನೆಯುವ ನಾಯಕ ಯಾರು ಗೊತ್ತಾ? ಬೇರಾರು ಅಲ್ಲ, ಈಗಾಗಲೇ ಅಮೂಲ್ಯ ಜೊತೆ 'ಮಳೆ'ಯಲ್ಲಿ ನೆಂದಿರುವ 'ನೆನಪಿರಲಿ' ಪ್ರೇಮ್.
'ಮೊದಲ ಮಳೆ' ಚಿತ್ರಕಥೆ ಕೇಳಿ ಹಿಂದುಮುಂದು ನೋಡದೆ ಪ್ರೇಮ್ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಚಿತ್ರದಲ್ಲಿ ಫೋಟೋಗ್ರಾಫರ್ ಪಾತ್ರ ನಿರ್ವಹಿಸುತ್ತಿದ್ದಾರೆ ಪ್ರೇಮ್.
ಪ್ರೇಮ್ ಗೆ ಸೂಟ್ ಆಗುವ ನಾಯಕಿಯ ಹುಡುಕಾಟದಲ್ಲಿ ಹೃದಯಶಿವ ತೊಡಗಿದ್ದಾರೆ. ಸಕಲೇಶಪುರ ಸೇರಿದಂತೆ ಕರ್ನಾಟಕದ ಸುಂದರ ತಾಣಗಳಲ್ಲಿ ಶೂಟಿಂಗ್ ನಡೆಯಲಿದೆ. ಸದ್ಯದಲ್ಲೇ 'ಮೊದಲ ಮಳೆ'ಗೆ ಚಾಲನೆ ಸಿಗಲಿದೆ.