ಈ ತಾತನ ಹೋಟೆಲ್ ರುಚಿಯನ್ನು ಮಂಗಳೂರಿಗರು ಮಿಸ್ ಮಾಡ್ಕೋಬೇಡಿ
ಮನೆ ಊಟದ ರೀತಿ ಹೋಟೆಲ್ ಊಟ ಇರುವುದಿಲ್ಲ ಎನ್ನುವುದು ಸಮಾನ್ಯವಾಗಿ ಎಲ್ಲರ ಅಭಿಪ್ರಾಯ. ಆದರೂ ಕೆಲವು ಕಡೆ ಸಿಗುವ ರುಚಿ ನಮಗೆ ಮನೆ ಊಟವನ್ನು ನೆನಪು ಮಾಡುತ್ತದೆ. ಆ ರೀತಿಯ ಒಂದು ಹೋಟೆಲ್ ಮಂಗಳೂರಿನಲ್ಲಿದೆ.
ಈ ಹೋಟೆಲ್ ಅನ್ನು ಕನ್ನಡಿಗರಿಗೆ 'ಒಂದು ಮೊಟ್ಟೆಯ ಕಥೆ' ಖ್ಯಾತಿಯ ನಟ ರಾಜ್ ಬಿ ಶೆಟ್ಟಿ ಪರಿಚಯ ಮಾಡಿಸಿದ್ದಾರೆ. ಮಂಗಳೂರಿನ ಕೆಪಿಟಿ ಕಾಲೇಜಿನ ಹತ್ತಿರದ ಯೆಯ್ಯಾಡಿಯಲ್ಲಿ ಇರುವ ಈ ಹೋಟೆಲ್ ನಲ್ಲಿ ನೀವು ಒಮ್ಮೆ ಊಟ ಮಾಡಿ ನೋಡಿ ಎಂದು ಅದರ ರುಚಿಯನ್ನು ಬಣ್ಣಸಿದ್ದಾರೆ.
ಹಲವು ವರ್ಷಗಳಿಂದ ಈ ತಾತ ಹೋಟೆಲ್ ನಲ್ಲಿ ರಾಜ್ ಬಿ ಶೆಟ್ಟಿ ಊಟ ಮಾಡುತ್ತಿದ್ದಾರಂತೆ. ಈ ಬಗ್ಗೆ ಇನ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದರುವ ಅವರು ''ಜಲೇಂದ್ರ ಸ್ಟಾಲ್ ಮಂಗಳೂರಿನ ಸುತ್ತ ಮುತ್ತ ತಿರುಗುವಾಗ ಮಧ್ಯಾಹ್ನ ಊಟವನ್ನೊಮ್ಮೆ ಇವರಲ್ಲಿ ಸವಿಯಿರಿ. ಊಟದ ಜೊತೆ ಪ್ರೀತಿ ಉಚಿತ ಇವರ ಕೈ ರುಚಿ ಅನುಭವಿಸಿದ ಹೆಮ್ಮೆ ನಮ್ಮದು.'' ಎಂದು ಎಂದಿದ್ದಾರೆ.

ತಾತನ ಜೊತೆಗೆ ಫೋಟೋ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನೀವು ಮಂಗಳೂರಿನವರಾಗಿದ್ದರೆ, ಅಥವಾ ನೀವು ಮಂಗಳೂರಿಗೆ ಹೋದಾಗ ಈ ತಾತ ಹೋಟೆಲ್ ರುಚಿ ಒಮ್ಮೆ ನೋಡಿ.
ಅಂದಹಾಗೆ, 'ಒಂದು ಮೊಟ್ಟೆಯ ಕಥೆ' ಸಿನಿಮಾದ ನಂತರ 'ಗುಬ್ಬಿ ಮೇಲೆ ಬ್ರಹ್ಮಾಸ್ತ್ರ', 'ಮಾಯಾಬಜಾರ್' ಚಿತ್ರಗಳಲ್ಲಿ ಬ್ಯುಸಿ ಇದ್ದಾರೆ.


Click it and Unblock the Notifications











