Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತೆಲುಗು ಟಿವಿ ಶೋನಲ್ಲಿ 'ಆರ್ಮುಗ' ರವಿಶಂಕರ್, ಕಿಚ್ಚ ಸುದೀಪ್ ಬಗ್ಗೆ ಹೇಳಿದ್ದೇನು?
ಸದ್ಯ ಕನ್ನಡದ ಅತ್ಯಂತ ಬೇಡಿಕೆಯ ನಟ ರವಿಶಂಕರ್, ತೆಲುಗಿನ ಕಿರುತೆರೆಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಮೂಲತಃ ತೆಲುಗಿನವರಾದ ರವಿಶಂಕರ್ ಅವರ ಮೊದಲ ಪೂರ್ಣಪ್ರಮಾಣದ ತೆಲುಗು ಕಾರ್ಯಕ್ರಮ ಇದಾಗಿತ್ತು.
Recommended Video
ಈಟಿವಿಯಲ್ಲಿ, ತೆಲುಗು ಹಾಸ್ಯ ನಟ ಆಲಿ ನಡೆಸಿಕೊಡುವ 'ಆಲಿತೋ ಸರದಾಗ' ಕಾರ್ಯಕ್ರಮದಲ್ಲಿ ರವಿಶಂಕರ್ ಭಾಗವಹಿಸಿದ್ದರು. ಆ ಕಾರ್ಯಕ್ರಮ, ಸೋಮವಾರ (ಮಾ 2) ರಾತ್ರಿ ಪ್ರಸಾರವಾಗಿದೆ.
ಕಾರ್ಯಕ್ರಮದಲ್ಲಿ ಹಲವು ವಿಷಯಗಳ ಬಗ್ಗೆ ಮಾತನಾಡಿದ ರವಿಶಂಕರ್, ಡಬ್ಬಿಂಗ್ ಆರ್ಟಿಸ್ಟ್ ಕಾಲದಿಂದ, ಈಗಿನವರೆಗೂ, ತಮ್ಮ ಜೀವನದ ಪ್ರಮುಖ ಘಟನೆಗಳನ್ನು ತೆರೆದಿಟ್ಟರು.
ರವಿಶಂಕರ್, ಅರ್ಜುನ್ ಜನ್ಯ ಬೆಳವಣಿಗೆ ಬಗ್ಗೆ ಸಂತಸ ವ್ಯಕ್ತ ಪಡಿಸಿದ ಸುದೀಪ್
ತಮ್ಮ ಮನೆಯಲ್ಲಿ ಬೆಡ್ ರೂಂ ಇರುವುದು ಎರಡೇ, ಆದರೆ ಬಾತ್ ರೂಂ ಏಳು ಇದೆ ಎಂದು ಹೇಳಿದ ರವಿಶಂಕರ್, ಕನ್ನಡ ಚಿತ್ರೋದ್ಯಮ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರನ್ನು ನೆನಪಿಸಿಕೊಂಡಿದ್ದು ಹೀಗೆ:
ಒಂದು ದಿನ ನನಗೆ ಬೆಂಗಳೂರಿನಿಂದ ಫೋನ್ ಕರೆಬಂತು
1977ರಲ್ಲಿ ಡಬ್ಬಿಂಗ್ ಮಾಡುವ ಕೆಲಸವನ್ನು ಮಾಡಿದೆ. ಇದುವರೆಗೆ ಸಾವಿರಾರು ಕಲಾವಿದರಿಗೆ ಕಂಠದಾನ ನೀಡಿದ್ದೇನೆ. ತೆಲುಗು ಚಿತ್ರೋದ್ಯಮಕ್ಕೇ ಅಷ್ಟಾಗಿ ನನ್ನ ಪರಿಚಯವಿರಲಿಲ್ಲ. ಇನ್ನು, ಕನ್ನಡ ಚಿತ್ರೋದ್ಯಮಕ್ಕೆ ಹೇಗೆ ನಾನು ಪರಿಚಯವಿರಲು ಸಾಧ್ಯ. ಆದರೆ, ಒಂದು ದಿನ ನನಗೆ ಬೆಂಗಳೂರಿನಿಂದ ಫೋನ್ ಕರೆಬಂತು - ರವಿಶಂಕರ್.
ಕಿಚ್ಚ ಸುದೀಪ್ ಅವರ ಕಡೆಯಿಂದ ಫೋನ್
ಕಿಚ್ಚ ಸುದೀಪ್ ಅವರ ಕಡೆಯಿಂದ ಫೋನ್ ಬಂತು, ಬೆಂಗಳೂರಿಗೆ ಬರುವಂತೆ ಸೂಚಿಸಿದರು. ನನಗೆ ಫುಲ್ ಕನ್ಫ್ಯೂಸ್, ನನ್ನ ಅಣ್ಣ ಸಾಯಿಕುಮಾರ್ ಎಂದು ಕೊಂಡು ನನಗೆ ಫೋನ್ ಮಾಡಿದ್ರಾ ಎಂದು ಅವರಲ್ಲಿ ಕೇಳಿದೆ. ಕೆಂಪೇಗೌಡ ಎನ್ನುವ ಸಿನಿಮಾದಲ್ಲಿ ನೀವು ನಟಿಸಬೇಕು ಎಂದು ನನ್ನಲ್ಲಿ ಕೇಳಿದರು. ಪ್ರಕಾಶ್ ರೈ ಅವರ ರೈಟ್, ಲೆಫ್ಟ್ ಆಗಿ ಸಹಪಾತ್ರ ಮಾಡಲು ಹೇಳುತ್ತಾರೆ ಅಂದು ಕೊಂಡೆ - ರವಿಶಂಕರ್.
ಯಾವ ನಟನಿಗೆ ಒಲಿಯಲಿದೆ 'ಸೈಮಾ ಅತ್ಯುತ್ತಮ ವಿಲನ್' ಪಟ್ಟ?
ನನ್ನನ್ನು ಎಲ್ಲರೂ ಆರ್ಮುಗ ಎಂದೇ ಕರೆಯಲಾರಂಭಿಸಿದರು
ಆದರೆ ನನ್ನ ಊಹೆ ತಪ್ಪಾಗಿತ್ತು. ತಮಿಳಿನಲ್ಲಿ ಪ್ರಕಾಶ್ ರೈ ಮಾಡಿದ ಪಾತ್ರವನ್ನು ಕನ್ನಡದಲ್ಲಿ ನಾನು ಮಾಡಬೇಕಾಗಿತ್ತು. ನನಗೆ ಒಂದು ಕಡೆ ಆಶ್ಚರ್ಯ, ಇನ್ನೊಂದು ಕಡೆ ಆ ಪಾತ್ರವನ್ನು ನಾನು ಮಾಡಬಲ್ಲೆನೇ ಎನ್ನುವ ಭಯ. ಆದರೆ, ಸುದೀಪ್ ಚಿತ್ರೀಕರಣದ ವೇಳೆ ನನಗೆ ನೀಡಿದ ಪ್ರೋತ್ಸಾಹದಿಂದ, ನನ್ನ ಪಾತ್ರ ಚೆನ್ನಾಗಿ ಬಂತು. ಆ ಚಿತ್ರ ಹಿಟ್ ಆದ ಮೇಲೆ ನನ್ನ ಜನಪ್ರಿಯ ಎಷ್ಟರ ಮಟ್ಟಿಗೆ ಹೋಯಿತು ಎಂದರೆ, ನನ್ನನ್ನು ಎಲ್ಲರೂ ಆರ್ಮುಗ ಎಂದೇ ಕರೆಯಲಾರಂಭಿಸಿದರು.
ಸುದೀಪ್ ಅವರಿಗೆ ನಾನು ಚಿರ ಖುಣಿ
ನಾನು ಸದ್ಯ ನೂರಾರು ಸಿನಿಮಾಗಳಲ್ಲಿ ನಟಿಸಿದ್ದೇನೆ. ನನ್ನನ್ನು ಕನ್ನಡ ಚಿತ್ರೋದ್ಯಮಕ್ಕೆ ಪರಿಚಯಿಸಿದ ಸುದೀಪ್ ಅವರಿಗೆ ನಾನು ಚಿರ ಖುಣಿ. ಈಗ ಬೆಂಗಳೂರಿನಲ್ಲೇ ಮನೆ ಮಾಡಿದ್ದೇನೆ. ಜೈ ಕನ್ನಡ..ಜೈಭುವನೇಶ್ವರಿ ಎಂದು ರವಿಶಂಕರ್, ಟಿವಿ ಕಾರ್ಯಕ್ರಮದಲ್ಲಿ ತಮ್ಮ ಮನದಾಳದ ಮಾತನ್ನು ಹೇಳಿದ್ದಾರೆ.