'ವನ್ಯಜೀವಿ ಸಂರಕ್ಷಣಾ' ರಾಯಭಾರಿಯಾದ ನಟ ಶ್ರೀಮುರಳಿ
Recommended Video
'ವನ್ಯಜೀವಿ ಸಂರಕ್ಷಣಾ' ರಾಯಭಾರಿಯಾದ ನಟ ಶ್ರೀಮುರಳಿ | FILMIBEAT KANNADA
ರೋರಿಂಗ್ ಸ್ಟಾರ್ ಶ್ರೀಮುರಳಿ ಅವರು ಕರ್ನಾಟಕ ರಾಜ್ಯ ಸರ್ಕಾರದ ವತಿಯಿಂದ 'ವನ್ಯಜೀವಿ ಸಂರಕ್ಷಣಾ' ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ. ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಶ್ರೀಮುರಳಿ ಅವರನ್ನ ಅಭಿನಂದಿಸಿದ್ದಾರೆ.
ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕರ್ನಾಟಕ ಅರಣ್ಯ ಇಲಾಖೆಯ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ, ವನ್ಯಜೀವಿ ಸಂರಕ್ಷಣಾ ರಾಯಭಾರಿಯಾಗಿ ಶ್ರೀಮುರಳಿ ಜೊತೆಯಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ ಮತ್ತು ಶ್ರೀಮುರಳಿ ಜೊತೆಗೆ ನಿರ್ಮಾಪಕಿ ಶ್ರುತಿ ನಾಯ್ಡು ಸೇರಿದಂತೆ ಅನೇಕರು ಹಾಜರಿದ್ದರು.

ರೋರಿಂಗ್ ಸ್ಟಾರ್ ಸದ್ಯ ಚೇತನ್ ಕುಮಾರ್ ನಿರ್ದೇಶನದ ಭರಾಟೆ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿಸಿರುವ ಶ್ರೀಮುರಳಿ ನಂತರ ಮಹೇಶ್ ಕುಮಾರ್ ನಿರ್ದೇಶನದ ಮದಗಜ ಚಿತ್ರವನ್ನ ಆರಂಭಿಸಲಿದ್ದಾರೆ.
More from Filmibeat
English summary
Kannada actor Rocking star Sri Murali ambassador of world life conservation


Click it and Unblock the Notifications











