twitter
    For Quick Alerts
    ALLOW NOTIFICATIONS  
    For Daily Alerts

    ಸಿ.ಎಂ ಪರಿಹಾರ ನಿಧಿಗೆ 10 ಲಕ್ಷ ರೂಪಾಯಿ ನೀಡಿದ ನಟ ಶಿವರಾಜ್ ಕುಮಾರ್

    By Harshitha
    |

    Recommended Video

    ಸಿ.ಎಂ ನಿಧಿಗೆ ಶಿವರಾಜ್‌ಕುಮಾರ್ ಕೊಟ್ರು ದೊಡ್ಡ ಮೊತ್ತ.! | Filmibeat Kannada

    ''ಕೊಡಗಿನ ಜನತೆಗೆ ನೆರವು ನೀಡಿ.. ಯಾವುದೇ ಭೇದಭಾವ ಇಲ್ಲದೆ ಎಲ್ಲರಿಗೂ ಸಹಾಯ ಮಾಡಿ..'' ಎಂದು ಮೂರು ದಿನಗಳ ಹಿಂದೆಯಷ್ಟೇ ನಟ ಶಿವರಾಜ್ ಕುಮಾರ್ ವಿಡಿಯೋ ಮೂಲಕ ಕನ್ನಡಿಗರ ಬಳಿ ಕೇಳಿಕೊಂಡಿದ್ದರು.

    ಇದೀಗ ಸ್ವತಃ ನಟ ಶಿವರಾಜ್ ಕುಮಾರ್ ಕೊಡಗಿನ ಜನತೆಗೆ ಸಹಾಯ ಆಗಲಿ ಎಂದು ಹತ್ತು ಲಕ್ಷ ರೂಪಾಯಿ ನೀಡಲು ಮುಂದಾಗಿದ್ದಾರೆ. ಸಿ.ಎಂ ಪರಿಹಾರ ನಿಧಿಗೆ 10 ಲಕ್ಷ ರೂಪಾಯಿ ನೀಡಲು ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ನಿರ್ಧಾರ ಮಾಡಿದ್ದಾರೆ.

    ಕೊಡಗಿಗೆ ನೆರವಾಗಿ ಎಂದು ಮನವಿ ಮಾಡಿದ ಶಿವರಾಜ್ ಕುಮಾರ್ ಕೊಡಗಿಗೆ ನೆರವಾಗಿ ಎಂದು ಮನವಿ ಮಾಡಿದ ಶಿವರಾಜ್ ಕುಮಾರ್

    ಇಂದು ಸಂಜೆ ಹೊತ್ತಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಚೆಕ್ ಹಸ್ತಾಂತರ ಮಾಡಲಿದ್ದಾರೆ.

    ಕೊಡಗಿನವರ ನೆರವಿಗೆ ಧಾವಿಸಿದ ಕನ್ನಡ ಚಿತ್ರರಂಗದ ತಾರೆಯರುಕೊಡಗಿನವರ ನೆರವಿಗೆ ಧಾವಿಸಿದ ಕನ್ನಡ ಚಿತ್ರರಂಗದ ತಾರೆಯರು

    ಈಗಾಗಲೇ ನಟ ಯಶ್ ತಮ್ಮ 'ಯಶೋಮಾರ್ಗ' ಫೌಂಡೇಶನ್ ಮೂಲಕ ಕೊಡಗಿನ ಜನತೆಗೆ ಅಗತ್ಯ ವಸ್ತುಗಳನ್ನು ನೀಡಿ ಸಹಾಯ ಮಾಡಿದ್ದಾರೆ. ಇನ್ನೂ ನಟ ಜಗ್ಗೇಶ್ ಹಾಗೂ ಸಂಯುಕ್ತ ಹೊರನಾಡು ಕೂಡ ಟ್ರಕ್ ಗಳ ಮುಖಾಂತರ ಕೊಡಗಿನ ಜನರಿಗೆ ಪ್ರತಿನಿತ್ಯ ಬಳಸುವ ವಸ್ತುಗಳನ್ನ ಪೂರೈಕೆ ಮಾಡುತ್ತಿದ್ದಾರೆ.

    Kannada Actor Shiva Rajkumar donates Rs.10 Lakhs to CM Relief fund

    ಕೊಡಗಿಗಾಗಿ ಮಿಡಿದ ಪ್ರಕಾಶ್ ರೈ: ಹಣದ ಜೊತೆ ವಿಶೇಷ ಯೋಜನೆಗಳ ಭರವಸೆ ಕೊಡಗಿಗಾಗಿ ಮಿಡಿದ ಪ್ರಕಾಶ್ ರೈ: ಹಣದ ಜೊತೆ ವಿಶೇಷ ಯೋಜನೆಗಳ ಭರವಸೆ

    ಹಾಗೇ, ನಟ ಪ್ರಕಾಶ್ ರೈ ಕೊಡಗು ಜನತೆಗೆ 5 ಲಕ್ಷ ರೂಪಾಯಿ ನೀಡುತ್ತೇನೆ ಎಂದು ಘೋಷಿಸಿದ್ದಾರೆ. ಒಟ್ನಲ್ಲಿ ಕೊಡಗಿನವರಿಗೆ ಸಹಾಯ ಮಾಡಲು ಒಬ್ಬೊಬ್ಬರೇ ಮುಂದೆ ಬರುತ್ತಿದ್ದಾರೆ. ವರುಣನ ಅಬ್ಬರ ಕಮ್ಮಿ ಆಗಿ, ಮತ್ತೆ ಸಹಜ ಸ್ಥಿತಿಯತ್ತ ಕೊಡಗು ಬೇಗ ಬರಲಿ ಅನ್ನೋದೇ ಎಲ್ಲರ ಪ್ರಾರ್ಥನೆ.

    English summary
    Kannada Actor Shiva Rajkumar donates Rs.10 Lakhs to CM Relief fund in order to help flood victims of Kodagu District of Karnataka.
    Monday, August 20, 2018, 16:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X