Don't Miss!
- Automobiles Nissan Magnite: ಕಾಮಧೇನುವಾದ ನಿಸ್ಸಾನ್ ಮ್ಯಾಗ್ನೈಟ್.. 6 ಲಕ್ಷ ಬೆಲೆ, 20 ಕಿ.ಮೀ ಮೈಲೇಜ್
- News Bengaluru Rain: ಮುದ್ದಿನ ನಾಯಿಮರಿಗೆ ಮೊದಲ ಮಳೆ ತೋರಿಸಿ ಖುಷಿ ಪಟ್ಟ ವ್ಯಕ್ತಿ; ವಿಡಿಯೋ ವೈರಲ್
- Lifestyle ಮಕ್ಕಳಲ್ಲಿ ಮಲೇರಿಯಾ: ಹೇಗೆ ಬರುತ್ತದೆ, ಇದರ ಲಕ್ಷಣಗಳೇನು? ತಡೆಗಟ್ಟುವುದು ಹೇಗೆ?
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗಣೇಶ ಹಬ್ಬದಂದು 'ಪಾರ್ವತಿ' ದತ್ತು ಪಡೆದ ನಟ ಶಿವರಾಜ್ ಕುಮಾರ್
ಗಣೇಶ ಹಬ್ಬದ ಸಂಭ್ರಮದಲ್ಲಿರುವ ಕನ್ನಡ ನಟ ಶಿವರಾಜ್ ಕುಮಾರ್ 'ಪಾರ್ವತಿ' ಎಂಬ ಆನೆಯನ್ನು ದತ್ತು ಪಡೆದುಕೊಂಡಿದ್ದಾರೆ. 75 ಸಾವಿರ ರೂಪಾಯಿ ಪಾವತಿಸಿ ಒಂದು ವರ್ಷ ಅವಧಿಗೆ ದತ್ತು ಪಡೆದಿದ್ದಾರೆ.
Recommended Video
ಈ ವಿಚಾರವನ್ನು ಖುದ್ದು ಮೈಸೂರು ಮೃಗಾಲಯದ ಆಡಳಿತ ಮಂಡಳಿ ಅಧಿಕೃತವಾಗಿ ತಿಳಿಸಿದೆ. 'ಪ್ರಸಿದ್ಧ ಕನ್ನಡ ಚಲನಚಿತ್ರ ತಾರೆ ಡಾ.ಶಿವರಾಜ್ ಕುಮಾರ್ ಅವರು 20/08/2020 ರಿಂದ 19/08/2021 ರವರೆಗೆ "ಪಾರ್ವತಿ" ಎಂಬ ಆನೆ ಮರಿಯನ್ನು 75,000 ರೂ ಪಾವತಿಸಿ ದತ್ತು ಪಡೆದಿದ್ದಾರೆ. ಮೈಸೂರು ಮೃಗಾಲಯ ಮತ್ತು ಕರ್ನಾಟಕದ ಮೃಗಾಲಯ ಪ್ರಾಧಿಕಾರ ಡಾ.ಶಿವರಾಜ್ ಕುಮಾರ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತದೆ' ಎಂದು ಟ್ವೀಟ್ ಮಾಡಿದ್ದಾರೆ.
'ಧೈರ್ಯವಾಗಿ ಶೂಟಿಂಗ್ ಶುರು ಮಾಡಿ', ಮತ್ತೆ ಅಖಾಡಕ್ಕಿಳಿದ ಶಿವಣ್ಣ
ಅಂದ್ಹಾಗೆ, ಐರಾವತಿ ಎಂಬ ಆನೆ ಜನ್ಮ ನೀಡಿದ್ದ ಹೆಣ್ಣಾನೆಗೆ 2017ರಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಪಾರ್ವತಿ ಎಂದು ಹೆಸರಿಟ್ಟಿದ್ದರು. ಅದೇ ಆನೆಯನ್ನು ಶಿವರಾಜ್ ಕುಮಾರ್ ದತ್ತು ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನುಳಿದಂತೆ ಕೊರೊನಾ ವೈರಸ್ನಿಂದ ಇಷ್ಟು ಸಮಯ ಮನೆಯಲ್ಲಿ ದಿನ ಕಳೆದ ಶಿವರಾಜ್ ಕುಮಾರ್ ಇಂದಿನಿಂದ ಭಜರಂಗಿ-2 ಚಿತ್ರದ ಶೂಟಿಂಗ್ನಲ್ಲಿ ಪಾಲ್ಗೊಂಡಿದ್ದಾರೆ. ಉಳಿದ ಚಿತ್ರತಂಡಗಳು ಸಹ ಧೈರ್ಯದಿಂದ ಶೂಟಿಂಗ್ ಶುರು ಮಾಡಬೇಕೆಂದು ಶಿವಣ್ಣ ವಿನಂತಿಸಿಕೊಂಡಿದ್ದಾರೆ.