Don't Miss!
- News Poornachandra Tejaswi: ವಿಸ್ಮಯಲೋಕವನ್ನೇ ತೆರೆದಿಡುವ ತೇಜಸ್ವಿಯವರ ಪುಸ್ತಕಗಳು
- Lifestyle ಗ್ರಹಣ ಕಾಲದಲ್ಲಿ ಆಹಾರ ಸೇವಿಸಬಾರದೇಕೆ.? ಹಿರಿಯರ ವಾದವೇನು..?
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Finance ಆದಾಯ ತೆರಿಗೆ ಇಲಾಖೆಯಿಂದ ಕಾಂಗ್ರೆಸ್ಗೆ 1,823 ಕೋಟಿ ರೂ. ನೋಟಿಸ್: ತೆರಿಗೆ ಭಯೋತ್ಪಾದನೆ ನಿಲ್ಲಲೇಬೇಕು ಎಂದ ಪಕ್ಷ
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
''ಭಾರತದ ಶಕ್ತಿಶಾಲಿ ರಾಜಕೀಯ ನಾಯಕರಲ್ಲಿ ಕರುಣಾನಿಧಿ ಒಬ್ಬರು'' - ಶಿವರಾಜ್ ಕುಮಾರ್
Recommended Video
ತಮಿಳು ನಾಡಿನ ಜನನಾಯಕ ಹಾಗೂ ಕಾಲಿವುಡ್ ಚಿತ್ರರಂಗ ಕಂಡ ಅದ್ಬುತ ಸಾಹಿತಿ ಕರುಣಾನಿಧಿ ನಿಧನಕ್ಕೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ. ಕನ್ನಡದ ಹಿರಿಯ ನಟಿ ಲೀಲಾವತಿ, ಹಿರಿಯ ನಟ, ನಿರ್ಮಾಪಕ ದ್ವಾರಕೀಶ್, ನಟ ಸುದೀಪ್ ಸೇರಿದಂತೆ ಅನೇಕರು ಈಗಾಗಲೇ ಸಂತಾಪ ಸೂಚಿಸಿದ್ದಾರೆ. ಈಗ ನಟ ಶಿವರಾಜ್ ಕುಮಾರ್ ಕೂಡ ಕರುಣಾನಿಧಿ ಅವರನ್ನು ನೆನೆಪು ಮಾಡಿಕೊಂಡಿದ್ದಾರೆ.
ಕಷ್ಟದಲ್ಲಿದ್ದ ನಟಿ ಲೀಲಾವತಿಗೆ ಕರುಣಾನಿಧಿ 'ಮಹಾನ್' ವ್ಯಕ್ತಿಯಾಗಿದ್ದೇಕೆ.?
ಕರುಣಾನಿಧಿ ಅವರ ಬಗ್ಗೆ ನೋವಿನಿಂದ ಮಾತನಾಡಿದ ಶಿವಣ್ಣ ''ನಾನು ಚಿಕ್ಕ ಹುಡುಗ ಆಗಿದ್ದಾಗಿನಿಂದ ಅವರನ್ನು ನೋಡುಕೊಂಡು ಬೆಳೆದಿದ್ದೆ. ಈ ವಿಷಯ ಕೇಳಿ ನಮಗೆ ತುಂಬ ನೋವಾಗಿದೆ. ಅವರ ಕುಟುಂಬ ನಮ್ಮ ಕುಟಂಬಕ್ಕೆ ಚೆನ್ನಾಗಿ ಪರಿಚಯ ಇದೆ. ಅವರು ಅವರು ಒಳ್ಳೆಯ ರೈಟರ್ ಆಗಿದ್ದು, ಸಿನಿಮಾ ಹಾಗೂ ರಾಜಕೀಯ ಎರಡು ಕ್ಷೇತ್ರದಲ್ಲಿ ಜ್ಞಾನ ಹೊಂದಿದ್ದರು. ಭಾರತದ ಶಕ್ತಿಶಾಲಿ ರಾಜಕೀಯ ನಾಯಕರಲ್ಲಿ ಅವರು ಒಬ್ಬರು'' ಎಂದು ಕರುಣಾನಿಧಿ ಅವರ ಬಗ್ಗೆ ಶಿವಣ್ಣ ನೋವಿನ ನುಡಿಯನ್ನು ಹೇಳಿಕೊಂಡಿದ್ದಾರೆ.
'ಕರುಣಾನಿಧಿ'ಯ ನಿಧನಕ್ಕೆ ಸಂತಾಪ ಸೂಚಿಸಿದ ಚಿತ್ರರಂಗ
ಜೊತೆಗೆ ರಾಜ್ ಕುಮಾರ್ ಹಾಗೂ ಕರುಣಾನಿಧಿ ಅವರ ಬಗ್ಗೆ ಮಾತನಾಡಿರುವ ಶಿವರಾಜ್ ಕುಮಾರ್ ''ಐದು ಬಾರಿ ಮುಖ್ಯ ಮಂತ್ರಿ ಆಗುವುದು ಎಂದರೆ ತುಂಬ ದೊಡ್ಡ ಸಾಧನೆ. ಅಪ್ಪಾಜಿ ಅಪಹರಣ ಆದ ಸಂಧರ್ಭದಲ್ಲಿ ಅವರೇ ಸಿಎಂ ಆಗಿದ್ದರು. ಅಪ್ಪಾಜಿ ಬಗ್ಗೆ ಅವರಿಗೆ ತುಂಬ ಗೌರವ ಇತ್ತು. ಇಂದು ಭಾರತ ಒಬ್ಬ ಒಳ್ಳೆಯ ರಾಜಕೀಯ ವ್ಯಕ್ತಿಯನ್ನು ಕಳೆದುಕೊಂಡಿದೆ. ಜನರಿಗೆ ಒಳ್ಳೆಯದು ಮಾಡಬೇಕು ಎನ್ನುವುದು ಅವರಿಗೆ ಇತ್ತು. ಅವರ ಸರಳತೆ ನನಗೆ ತುಂಬ ಇಷ್ಟ ಆಗುತ್ತಿತ್ತು'' ಎಂದು ಕಂಬಿನಿ ಮಿಡಿದಿದ್ದಾರೆ.
ಅಂದಹಾಗೆ, ತಮಿಳುನಾಡಿನ ಹಿರಿಯ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಆಗಿದ್ದ ಕರುಣಾನಿಧಿ ಅವರು ನಿನ್ನೆ (ಆಗಸ್ಟ್ 7) ನಿಧನರಾದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 94 ವರ್ಷದ ಡಿಎಂಕೆ ಪಕ್ಷದ ಅಧಿನಾಯಕ ಈಗ ನೆನಪು ಮಾತ್ರ.